<p>ಬೇಸಿಗೆ ಧಗೆಯ ಕಾವು ರಕ್ತದಾನ ಶಿಬಿರಗಳನ್ನೂ ತಟ್ಟಿದ್ದು,ಥಲಸ್ಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನಿಯಮಿತ ವಾಗಿ ರಕ್ತ ಒದಗಿಸಲು ಕಷ್ಟವಾಗುತ್ತಿದೆ (ಪ್ರ.ವಾ., ಮೇ 7) ಎನ್ನುವ ಸುದ್ದಿ ಆತಂಕ ಮೂಡಿಸುವಂತಹದ್ದು. ಪ್ರತಿ ಬೇಸಿಗೆಯಲ್ಲೂ ಥಲಸ್ಸೇಮಿಯಾ ರೋಗಿಗಳು ಅಗ್ನಿಪರೀಕ್ಷೆ ಎದುರಿಸ ಬೇಕಾಗುತ್ತದೆ. ಸಮಸ್ಯೆ ದೊಡ್ಡದಾದರೂ, ಅದರ ಅರಿವು ಹೆಚ್ಚಿನ ಜನರಿಗಿಲ್ಲ. </p>.<p>ಥಲಸ್ಸೇಮಿಯಾ ಪೋಷಕರಿಂದ ಮಕ್ಕಳಿಗೆ ಹರಡುವ ಒಂದು ಆನುವಂಶಿಕ ರಕ್ತದ ಅಸ್ವಸ್ಥತೆ. ದೇಹದಲ್ಲಿ ಆಮ್ಲಜನಕ ವನ್ನು ಸಾಗಿಸುವ ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ದೋಷ ಉಂಟಾದಾಗ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ತೀವ್ರವಾದ ರಕ್ತಹೀನತೆ ಇದರ ಪ್ರಮುಖ ಲಕ್ಷಣ. ಇದರಲ್ಲಿ ಮುಖ್ಯವಾಗಿ ಆಲ್ಫಾ ಮತ್ತು ಬೀಟಾ ಥಲಸ್ಸೇಮಿಯಾ ಎಂಬ ಎರಡು ವಿಧಗಳಿವೆ. ಚಿಕಿತ್ಸೆ ಮತ್ತು ವಂಶವಾಹಿ ದೋಷಗಳ ಆಧಾರದ ಮೇಲೆ ಕಾಯಿಲೆಯನ್ನು ಮೈನರ್ ಮತ್ತು ಮೇಜರ್ ಎಂದು ಗುರ್ತಿಸಲಾಗುತ್ತದೆ. ಪ್ರಸ್ತುತ ಗುರ್ತಿಸಲಾಗಿರುವ 21 ಅಂಗವೈಕಲ್ಯಗಳಲ್ಲಿ ಥಲಸ್ಸೇಮಿಯಾ ಕೂಡ ಒಂದು.</p>.<p>ಫುಟ್ಬಾಲ್ ತಾರೆ ಝಿನೆಡಿನ್ ಝಿಡಾನ್, ಟೆನಿಸ್ ಪಟು ಪೀಟ್ ಸಾಂಪ್ರಾಸ್, ಬಾಲಿವುಡ್ ತಾರೆಗಳಾದ ಅಮಿತಾಭ್ ಬಚ್ಚನ್, ಜಾಕಿಶ್ರಾಫ್ ಇವರೆಲ್ಲ ಬೇರೆ ಬೇರೆ ಕ್ಷೇತ್ರಗಳ ಸಾಧಕರಾದರೂ, ದೇಹಾರೋಗ್ಯಕ್ಕೆ ಸಂಬಂಧಿಸಿದಂತೆ ಇವರಲ್ಲೊಂದು ಸಾಮ್ಯತೆ ಇದೆ. ಇವರೆಲ್ಲ ಥಲಸ್ಸೇಮಿಯಾ ಪೀಡಿತರು.</p>.<p>ಥಲಸ್ಸೇಮಿಯಾ ಮೈನರ್ ರೋಗಿ ಗಳು ರೋಗದ ವಾಹಕರಾಗಿರುತ್ತಾರೆ. ಅವರಿಗೆ ಸಾಮಾನ್ಯವಾಗಿ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಆದರೆ, ಅವರು<br>ತಮ್ಮ ಮಕ್ಕಳಿಗೆ ಈ ವಂಶವಾಹಿಯನ್ನು ವರ್ಗಾಯಿಸುವ ಸಾಧ್ಯತೆಗಳಿರುತ್ತವೆ. ಥಲಸ್ಸೇಮಿಯಾ ಮೇಜರ್ ಕಾಯಿಲೆಯು ಗಂಭೀರ ಸ್ಥಿತಿಯನ್ನು ಸೂಚಿಸುತ್ತದೆ. ಇಂತಹ ಮಕ್ಕಳಿಗೆ ಜೀವನಪರ್ಯಂತ ಪ್ರತಿ 15–20 ದಿನಗಳಿಗೊಮ್ಮೆ ಕೆಂಪು ರಕ್ತಕಣಗಳ ಪೂರಣದ ಅನಿವಾರ್ಯತೆ ಇರುತ್ತದೆ.</p>.<p>ಗಂಡ–ಹೆಂಡತಿ ಇಬ್ಬರೂ ಥಲಸ್ಸೇಮಿಯಾ ವಾಹಕ (ಮೈನರ್) ಆಗಿದ್ದರೆ, ಹುಟ್ಟುವ ಮಗುವಿಗೆ ಥಲಸ್ಸೇಮಿಯಾ ಮೇಜರ್ ಬರುವ ಸಾಧ್ಯತೆಯು ಶೇ 25ರಷ್ಟು ಇರುತ್ತದೆ.</p>.<p>ಮದುವೆಗೆ ಮುನ್ನ ಅಥವಾ ಗರ್ಭ ಧರಿಸುವ ಮುನ್ನರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ ಅರಿವು ಮೂಡಿಸು ವುದು, ಥಲಸ್ಸೇಮಿಯಾದೊಂದಿಗೆ ಬದುಕುತ್ತಿರುವ ರೋಗಿಗಳನ್ನು ಗುರ್ತಿಸಿ, ಅವರಿಗೆ ಗುಣಮಟ್ಟದ ಚಿಕಿತ್ಸೆ ದೊರಕಿಸುವುದು ಅಗತ್ಯ. ಈ ಕಾಯಿಲೆಗೆ ರಕ್ತ ವರ್ಗಾವಣೆಯಷ್ಟೇ ಪರಿಹಾರವಲ್ಲ; ಅಸ್ಥಿಮಜ್ಜೆ ಕಸಿ ಮತ್ತು ಜೀನ್ ಥೆರಪಿಯಂತಹ ಆಧುನಿಕ ಚಿಕಿತ್ಸೆಗಳಿವೆ ಎಂಬ ಮಾಹಿತಿಯನ್ನು ಸಮಾಜಕ್ಕೆರವಾನಿಸುವುದೂ ಮುಖ್ಯ. ಈ ಎಲ್ಲವೂ ‘ವಿಶ್ವ ಥಲಸ್ಸೇಮಿಯಾ ದಿನ’ದ (ಮೇ 8) ಆಚರಣೆಯ ಮುಖ್ಯ ಉದ್ದೇಶಗಳಾಗಿವೆ.</p>.<p>ಭಾರತ ವಿಶ್ವದ ‘ಥಲಸ್ಸೇಮಿಯಾ ರಾಜಧಾನಿ’ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿ ಪ್ರತಿ ವರ್ಷ 10,000ದಿಂದ 15,000 ಮಕ್ಕಳು ಥಲಸ್ಸೇಮಿಯಾ ‘ಮೇಜರ್’ ಕಾಯಿಲೆಯೊಂದಿಗೆ ಜನಿಸುತ್ತಿದ್ದಾರೆ. ನಾಲ್ಕು ಕೋಟಿಗೂ ಹೆಚ್ಚು ಜನರು ಈ ರೋಗದ ವಾಹಕಗಳಾಗಿದ್ದಾರೆ. ರಕ್ತಪೂರಣೆಯ ವೆಚ್ಚ, ಅಸ್ಥಿಮಜ್ಜೆ ಕಸಿಯ ದುಬಾರಿ ವೆಚ್ಚಗಳು ಮತ್ತುರಕ್ತಪೂರಣದಿಂದ ದೇಹದಲ್ಲಿ ಸೇರುವ ಹೆಚ್ಚಿನ ಕಬ್ಬಿಣವನ್ನು ತೆಗೆದು ಹಾಕಲು ಮಾಡುವ ‘ಚಿಲೇಷನ್ ಥೆರಪಿ’ಗಳು ಜನಸಾಮಾನ್ಯರಿಗೆ ದೊಡ್ಡ ಹೊರೆಯಾಗಿವೆ.</p>.<p>ರಾಜ್ಯದಲ್ಲಿ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಥಲಸ್ಸೇಮಿಯಾದ ಪ್ರಭಾವ ಹೆಚ್ಚಿದೆ. ಸರ್ಕಾರದ ಜಿಲ್ಲಾ ಆಸ್ಪತ್ರೆ ಗಳಲ್ಲಿ ಥಲಸ್ಸೇಮಿಯಾ ಪೀಡಿತರಿಗೆ ಉಚಿತವಾಗಿ ರಕ್ತ ಮತ್ತು ಅಗತ್ಯ ಔಷಧಿಗಳನ್ನು ನೀಡುವ ವ್ಯವಸ್ಥೆ ಇದೆಯಾದರೂ, ಅದು ಅಗತ್ಯ ಪ್ರಮಾಣದಲ್ಲಿಲ್ಲ. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಡಿ ಥಲಸ್ಸೇಮಿಯಾ ಚಿಕಿತ್ಸೆ ಮತ್ತು ಅಸ್ಥಿಮಜ್ಜೆ ಕಸಿಗೆ ಆರ್ಥಿಕ ನೆರವು ನೀಡಲಾಗು ತ್ತಿದೆ. ಬೆಂಗಳೂರಿನ ‘ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ’ ಮತ್ತು ‘ಸಂಯೋಜಿತ ಥಲಸ್ಸೇಮಿಯಾ ಮತ್ತು ಲುಕೇಮಿಯಾ ಕೇಂದ್ರ’ಗಳು ಅತ್ಯಾಧುನಿಕ ಚಿಕಿತ್ಸೆ ನೀಡುತ್ತಿವೆ. </p>.<p>ಪ್ರಸ್ತುತ, ರೋಗದ ತಪಾಸಣೆಯು ರೋಗಲಕ್ಷಣಗಳು ಕಾಣಿಸಿಕೊಂಡ ನಂತರವಷ್ಟೇ ನಡೆಯುತ್ತಿದೆ. ಇದರ ಬದಲುವಿವಾಹಪೂರ್ವದಲ್ಲಿಯೇ ಸ್ವಯಂ ರಕ್ತಪರೀಕ್ಷೆ ಮಾಡಿಸಿ ಕೊಳ್ಳುವ ಪದ್ಧತಿ ಜಾರಿಗೆ ಬರಬೇಕು. ಚಿಕಿತ್ಸೆಗೆ ಬಳಸುವ ಔಷಧಿಗಳು ಅತ್ಯಂತ ದುಬಾರಿ. ಸರ್ಕಾರವು ಈ ಔಷಧಿಗಳ ವೆಚ್ಚವನ್ನು ತಗ್ಗಿಸಿ ಲಭ್ಯತೆಯನ್ನು ಹೆಚ್ಚಿಸಬೇಕು.</p>.<p>ಕಾಯಿಲೆಗೆ ಶಾಶ್ವತ ಪರಿಹಾರ ನೀಡಬಲ್ಲ ಅಸ್ಥಿಮಜ್ಜೆ ಕಸಿ ಸೌಲಭ್ಯವು ಸದ್ಯಕ್ಕೆ ಕೆಲವೇ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಮೂಲ ಸೌಕರ್ಯಗಳನ್ನು ವಿಸ್ತರಿಸಬೇಕಾದ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರತಿವರ್ಷ ಬೇಸಿಗೆಯ ಸಮಯದಲ್ಲಿ ಕಾಣಿಸಿಕೊಳ್ಳುವ ರಕ್ತದ ಕೊರತೆಯನ್ನು ನೀಗಿಸಲು, ವರ್ಷಪೂರ್ತಿಸ್ವಯಂಪ್ರೇರಿತ ರಕ್ತದಾನ ಹೆಚ್ಚಿಸುವುದು ಅನಿವಾರ್ಯ ಆಗಿದೆ.</p>.<p>ರಕ್ತಸಂಬಂಧಗಳಲ್ಲಿ ನಡೆಯುವ ಮದುವೆಗಳಿಂದ ಈ ಆನುವಂಶಿಕ ಕಾಯಿಲೆ ಹೆಚ್ಚುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಶಾಲಾ–ಕಾಲೇಜು ಹಂತದಲ್ಲೇ ಜಾಗೃತಿ ಮೂಡಿಸಿದರೆ, ಮುಂದಿನ ಪೀಳಿಗೆಯನ್ನು ಥಲಸ್ಸೇಮಿಯಾ ಕಾಯಿಲೆಯಿಂದ ಮುಕ್ತಗೊಳಿಸಲು ಪ್ರಯತ್ನಿಸಬಹುದು.</p>.<p>ಥಲಸ್ಸೇಮಿಯಾ ರೋಗಿಗಳು ಬದುಕಲು ಆರೋಗ್ಯವಂತ ವ್ಯಕ್ತಿಗಳ ರಕ್ತವೇ ಆಧಾರ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಡೂರು ಪೊಲೀಸ್ ಠಾಣೆಯ ಸಿಬ್ಬಂದಿ, ಕಳೆದ ಏಳು ವರ್ಷಗಳಿಂದ ರಕ್ತದಾನ ಮಾಡುತ್ತ ಥಲಸ್ಸೇಮಿಯಾ ರೋಗಿಗಳಿಗೆ ನೆರವಾಗುತ್ತಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಾಗಬೇಕು. ಥಲಸ್ಸೇಮಿಯಾ ವೈದ್ಯಕೀಯ ಸಮಸ್ಯೆ ಆಗಿರು ವಂತೆಯೇ, ಅದರ ಕುರಿತ ಜಾಗೃತಿ ಮೂಡಿಸುವುದು ಹಾಗೂ ರೋಗಿಗಳಿಗೆ ಅಗತ್ಯವಾದ ರಕ್ತವನ್ನು ಒದಗಿಸುವುದು ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೇಸಿಗೆ ಧಗೆಯ ಕಾವು ರಕ್ತದಾನ ಶಿಬಿರಗಳನ್ನೂ ತಟ್ಟಿದ್ದು,ಥಲಸ್ಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನಿಯಮಿತ ವಾಗಿ ರಕ್ತ ಒದಗಿಸಲು ಕಷ್ಟವಾಗುತ್ತಿದೆ (ಪ್ರ.ವಾ., ಮೇ 7) ಎನ್ನುವ ಸುದ್ದಿ ಆತಂಕ ಮೂಡಿಸುವಂತಹದ್ದು. ಪ್ರತಿ ಬೇಸಿಗೆಯಲ್ಲೂ ಥಲಸ್ಸೇಮಿಯಾ ರೋಗಿಗಳು ಅಗ್ನಿಪರೀಕ್ಷೆ ಎದುರಿಸ ಬೇಕಾಗುತ್ತದೆ. ಸಮಸ್ಯೆ ದೊಡ್ಡದಾದರೂ, ಅದರ ಅರಿವು ಹೆಚ್ಚಿನ ಜನರಿಗಿಲ್ಲ. </p>.<p>ಥಲಸ್ಸೇಮಿಯಾ ಪೋಷಕರಿಂದ ಮಕ್ಕಳಿಗೆ ಹರಡುವ ಒಂದು ಆನುವಂಶಿಕ ರಕ್ತದ ಅಸ್ವಸ್ಥತೆ. ದೇಹದಲ್ಲಿ ಆಮ್ಲಜನಕ ವನ್ನು ಸಾಗಿಸುವ ಹಿಮೋಗ್ಲೋಬಿನ್ ಉತ್ಪಾದನೆಯಲ್ಲಿ ದೋಷ ಉಂಟಾದಾಗ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ತೀವ್ರವಾದ ರಕ್ತಹೀನತೆ ಇದರ ಪ್ರಮುಖ ಲಕ್ಷಣ. ಇದರಲ್ಲಿ ಮುಖ್ಯವಾಗಿ ಆಲ್ಫಾ ಮತ್ತು ಬೀಟಾ ಥಲಸ್ಸೇಮಿಯಾ ಎಂಬ ಎರಡು ವಿಧಗಳಿವೆ. ಚಿಕಿತ್ಸೆ ಮತ್ತು ವಂಶವಾಹಿ ದೋಷಗಳ ಆಧಾರದ ಮೇಲೆ ಕಾಯಿಲೆಯನ್ನು ಮೈನರ್ ಮತ್ತು ಮೇಜರ್ ಎಂದು ಗುರ್ತಿಸಲಾಗುತ್ತದೆ. ಪ್ರಸ್ತುತ ಗುರ್ತಿಸಲಾಗಿರುವ 21 ಅಂಗವೈಕಲ್ಯಗಳಲ್ಲಿ ಥಲಸ್ಸೇಮಿಯಾ ಕೂಡ ಒಂದು.</p>.<p>ಫುಟ್ಬಾಲ್ ತಾರೆ ಝಿನೆಡಿನ್ ಝಿಡಾನ್, ಟೆನಿಸ್ ಪಟು ಪೀಟ್ ಸಾಂಪ್ರಾಸ್, ಬಾಲಿವುಡ್ ತಾರೆಗಳಾದ ಅಮಿತಾಭ್ ಬಚ್ಚನ್, ಜಾಕಿಶ್ರಾಫ್ ಇವರೆಲ್ಲ ಬೇರೆ ಬೇರೆ ಕ್ಷೇತ್ರಗಳ ಸಾಧಕರಾದರೂ, ದೇಹಾರೋಗ್ಯಕ್ಕೆ ಸಂಬಂಧಿಸಿದಂತೆ ಇವರಲ್ಲೊಂದು ಸಾಮ್ಯತೆ ಇದೆ. ಇವರೆಲ್ಲ ಥಲಸ್ಸೇಮಿಯಾ ಪೀಡಿತರು.</p>.<p>ಥಲಸ್ಸೇಮಿಯಾ ಮೈನರ್ ರೋಗಿ ಗಳು ರೋಗದ ವಾಹಕರಾಗಿರುತ್ತಾರೆ. ಅವರಿಗೆ ಸಾಮಾನ್ಯವಾಗಿ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಆದರೆ, ಅವರು<br>ತಮ್ಮ ಮಕ್ಕಳಿಗೆ ಈ ವಂಶವಾಹಿಯನ್ನು ವರ್ಗಾಯಿಸುವ ಸಾಧ್ಯತೆಗಳಿರುತ್ತವೆ. ಥಲಸ್ಸೇಮಿಯಾ ಮೇಜರ್ ಕಾಯಿಲೆಯು ಗಂಭೀರ ಸ್ಥಿತಿಯನ್ನು ಸೂಚಿಸುತ್ತದೆ. ಇಂತಹ ಮಕ್ಕಳಿಗೆ ಜೀವನಪರ್ಯಂತ ಪ್ರತಿ 15–20 ದಿನಗಳಿಗೊಮ್ಮೆ ಕೆಂಪು ರಕ್ತಕಣಗಳ ಪೂರಣದ ಅನಿವಾರ್ಯತೆ ಇರುತ್ತದೆ.</p>.<p>ಗಂಡ–ಹೆಂಡತಿ ಇಬ್ಬರೂ ಥಲಸ್ಸೇಮಿಯಾ ವಾಹಕ (ಮೈನರ್) ಆಗಿದ್ದರೆ, ಹುಟ್ಟುವ ಮಗುವಿಗೆ ಥಲಸ್ಸೇಮಿಯಾ ಮೇಜರ್ ಬರುವ ಸಾಧ್ಯತೆಯು ಶೇ 25ರಷ್ಟು ಇರುತ್ತದೆ.</p>.<p>ಮದುವೆಗೆ ಮುನ್ನ ಅಥವಾ ಗರ್ಭ ಧರಿಸುವ ಮುನ್ನರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕೆಂಬ ಅರಿವು ಮೂಡಿಸು ವುದು, ಥಲಸ್ಸೇಮಿಯಾದೊಂದಿಗೆ ಬದುಕುತ್ತಿರುವ ರೋಗಿಗಳನ್ನು ಗುರ್ತಿಸಿ, ಅವರಿಗೆ ಗುಣಮಟ್ಟದ ಚಿಕಿತ್ಸೆ ದೊರಕಿಸುವುದು ಅಗತ್ಯ. ಈ ಕಾಯಿಲೆಗೆ ರಕ್ತ ವರ್ಗಾವಣೆಯಷ್ಟೇ ಪರಿಹಾರವಲ್ಲ; ಅಸ್ಥಿಮಜ್ಜೆ ಕಸಿ ಮತ್ತು ಜೀನ್ ಥೆರಪಿಯಂತಹ ಆಧುನಿಕ ಚಿಕಿತ್ಸೆಗಳಿವೆ ಎಂಬ ಮಾಹಿತಿಯನ್ನು ಸಮಾಜಕ್ಕೆರವಾನಿಸುವುದೂ ಮುಖ್ಯ. ಈ ಎಲ್ಲವೂ ‘ವಿಶ್ವ ಥಲಸ್ಸೇಮಿಯಾ ದಿನ’ದ (ಮೇ 8) ಆಚರಣೆಯ ಮುಖ್ಯ ಉದ್ದೇಶಗಳಾಗಿವೆ.</p>.<p>ಭಾರತ ವಿಶ್ವದ ‘ಥಲಸ್ಸೇಮಿಯಾ ರಾಜಧಾನಿ’ ಎಂದು ಕರೆಸಿಕೊಳ್ಳುತ್ತದೆ. ಇಲ್ಲಿ ಪ್ರತಿ ವರ್ಷ 10,000ದಿಂದ 15,000 ಮಕ್ಕಳು ಥಲಸ್ಸೇಮಿಯಾ ‘ಮೇಜರ್’ ಕಾಯಿಲೆಯೊಂದಿಗೆ ಜನಿಸುತ್ತಿದ್ದಾರೆ. ನಾಲ್ಕು ಕೋಟಿಗೂ ಹೆಚ್ಚು ಜನರು ಈ ರೋಗದ ವಾಹಕಗಳಾಗಿದ್ದಾರೆ. ರಕ್ತಪೂರಣೆಯ ವೆಚ್ಚ, ಅಸ್ಥಿಮಜ್ಜೆ ಕಸಿಯ ದುಬಾರಿ ವೆಚ್ಚಗಳು ಮತ್ತುರಕ್ತಪೂರಣದಿಂದ ದೇಹದಲ್ಲಿ ಸೇರುವ ಹೆಚ್ಚಿನ ಕಬ್ಬಿಣವನ್ನು ತೆಗೆದು ಹಾಕಲು ಮಾಡುವ ‘ಚಿಲೇಷನ್ ಥೆರಪಿ’ಗಳು ಜನಸಾಮಾನ್ಯರಿಗೆ ದೊಡ್ಡ ಹೊರೆಯಾಗಿವೆ.</p>.<p>ರಾಜ್ಯದಲ್ಲಿ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಥಲಸ್ಸೇಮಿಯಾದ ಪ್ರಭಾವ ಹೆಚ್ಚಿದೆ. ಸರ್ಕಾರದ ಜಿಲ್ಲಾ ಆಸ್ಪತ್ರೆ ಗಳಲ್ಲಿ ಥಲಸ್ಸೇಮಿಯಾ ಪೀಡಿತರಿಗೆ ಉಚಿತವಾಗಿ ರಕ್ತ ಮತ್ತು ಅಗತ್ಯ ಔಷಧಿಗಳನ್ನು ನೀಡುವ ವ್ಯವಸ್ಥೆ ಇದೆಯಾದರೂ, ಅದು ಅಗತ್ಯ ಪ್ರಮಾಣದಲ್ಲಿಲ್ಲ. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಡಿ ಥಲಸ್ಸೇಮಿಯಾ ಚಿಕಿತ್ಸೆ ಮತ್ತು ಅಸ್ಥಿಮಜ್ಜೆ ಕಸಿಗೆ ಆರ್ಥಿಕ ನೆರವು ನೀಡಲಾಗು ತ್ತಿದೆ. ಬೆಂಗಳೂರಿನ ‘ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ’ ಮತ್ತು ‘ಸಂಯೋಜಿತ ಥಲಸ್ಸೇಮಿಯಾ ಮತ್ತು ಲುಕೇಮಿಯಾ ಕೇಂದ್ರ’ಗಳು ಅತ್ಯಾಧುನಿಕ ಚಿಕಿತ್ಸೆ ನೀಡುತ್ತಿವೆ. </p>.<p>ಪ್ರಸ್ತುತ, ರೋಗದ ತಪಾಸಣೆಯು ರೋಗಲಕ್ಷಣಗಳು ಕಾಣಿಸಿಕೊಂಡ ನಂತರವಷ್ಟೇ ನಡೆಯುತ್ತಿದೆ. ಇದರ ಬದಲುವಿವಾಹಪೂರ್ವದಲ್ಲಿಯೇ ಸ್ವಯಂ ರಕ್ತಪರೀಕ್ಷೆ ಮಾಡಿಸಿ ಕೊಳ್ಳುವ ಪದ್ಧತಿ ಜಾರಿಗೆ ಬರಬೇಕು. ಚಿಕಿತ್ಸೆಗೆ ಬಳಸುವ ಔಷಧಿಗಳು ಅತ್ಯಂತ ದುಬಾರಿ. ಸರ್ಕಾರವು ಈ ಔಷಧಿಗಳ ವೆಚ್ಚವನ್ನು ತಗ್ಗಿಸಿ ಲಭ್ಯತೆಯನ್ನು ಹೆಚ್ಚಿಸಬೇಕು.</p>.<p>ಕಾಯಿಲೆಗೆ ಶಾಶ್ವತ ಪರಿಹಾರ ನೀಡಬಲ್ಲ ಅಸ್ಥಿಮಜ್ಜೆ ಕಸಿ ಸೌಲಭ್ಯವು ಸದ್ಯಕ್ಕೆ ಕೆಲವೇ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಮೂಲ ಸೌಕರ್ಯಗಳನ್ನು ವಿಸ್ತರಿಸಬೇಕಾದ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರತಿವರ್ಷ ಬೇಸಿಗೆಯ ಸಮಯದಲ್ಲಿ ಕಾಣಿಸಿಕೊಳ್ಳುವ ರಕ್ತದ ಕೊರತೆಯನ್ನು ನೀಗಿಸಲು, ವರ್ಷಪೂರ್ತಿಸ್ವಯಂಪ್ರೇರಿತ ರಕ್ತದಾನ ಹೆಚ್ಚಿಸುವುದು ಅನಿವಾರ್ಯ ಆಗಿದೆ.</p>.<p>ರಕ್ತಸಂಬಂಧಗಳಲ್ಲಿ ನಡೆಯುವ ಮದುವೆಗಳಿಂದ ಈ ಆನುವಂಶಿಕ ಕಾಯಿಲೆ ಹೆಚ್ಚುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಶಾಲಾ–ಕಾಲೇಜು ಹಂತದಲ್ಲೇ ಜಾಗೃತಿ ಮೂಡಿಸಿದರೆ, ಮುಂದಿನ ಪೀಳಿಗೆಯನ್ನು ಥಲಸ್ಸೇಮಿಯಾ ಕಾಯಿಲೆಯಿಂದ ಮುಕ್ತಗೊಳಿಸಲು ಪ್ರಯತ್ನಿಸಬಹುದು.</p>.<p>ಥಲಸ್ಸೇಮಿಯಾ ರೋಗಿಗಳು ಬದುಕಲು ಆರೋಗ್ಯವಂತ ವ್ಯಕ್ತಿಗಳ ರಕ್ತವೇ ಆಧಾರ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಡೂರು ಪೊಲೀಸ್ ಠಾಣೆಯ ಸಿಬ್ಬಂದಿ, ಕಳೆದ ಏಳು ವರ್ಷಗಳಿಂದ ರಕ್ತದಾನ ಮಾಡುತ್ತ ಥಲಸ್ಸೇಮಿಯಾ ರೋಗಿಗಳಿಗೆ ನೆರವಾಗುತ್ತಿದ್ದಾರೆ. ಇಂಥವರ ಸಂಖ್ಯೆ ಹೆಚ್ಚಾಗಬೇಕು. ಥಲಸ್ಸೇಮಿಯಾ ವೈದ್ಯಕೀಯ ಸಮಸ್ಯೆ ಆಗಿರು ವಂತೆಯೇ, ಅದರ ಕುರಿತ ಜಾಗೃತಿ ಮೂಡಿಸುವುದು ಹಾಗೂ ರೋಗಿಗಳಿಗೆ ಅಗತ್ಯವಾದ ರಕ್ತವನ್ನು ಒದಗಿಸುವುದು ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>