<p>ಸಂಸತ್ ಹಾಗೂ ವಿಧಾನಮಂಡಲ ಅಧಿವೇಶನಗಳನ್ನು ಗಮನಿಸಿದಾಗ ಎದುರಾಗುವ ಪ್ರಶ್ನೆ: ದೇಶದ ಸಂಸದೀಯ ಪರಂಪರೆ ಅಧೋಗತಿಯತ್ತ ಸಾಗುತ್ತಿದೆಯೆ?</p>.<p>ಇತ್ತೀಚಿನ ವಿಧಾನಸಭೆ ಕಲಾಪದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ಅವರ ನಡುವಿನ ವೈಯಕ್ತಿಕ ವಾಗ್ವಾದ ದೊಡ್ಡ ಸುದ್ದಿಯಾಗಿತ್ತು. ಆ ಘಟನೆಯನ್ನು ವರದಿ ಮಾಡದಂತೆ ಸಭಾಧ್ಯಕ್ಷರೇ ಮಾಧ್ಯಮ ಗಳಿಗೆ ಮನವಿ ಮಾಡಿದ್ದನ್ನು ಗಮನಿಸಿದರೆ, ಇಬ್ಬರು ಜನಪ್ರತಿ ನಿಧಿಗಳ ಬಾಯಿಗಳಿಂದ ಹೊರಹೊಮ್ಮಿದ ಪದಗಳು ಎಂತಹದ್ದಿರಬಹುದೆಂದು ಊಹಿಸಬಹುದು.</p>.<p>ಜನಸಾಮಾನ್ಯರ ಸಮಸ್ಯೆಗಳು ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನಕ್ಕೆ ಮುಟ್ಟುವಲ್ಲಿ ಸದನಗಳಿಗೆ ವಿಶೇಷ ಮಹತ್ವವಿದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಕಲಾಪಗಳನ್ನು ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ನೋಡಿ ಕೊಳ್ಳುವ ಹೊಣೆಗಾರಿಕೆ ಜನಪ್ರತಿನಿಧಿಗಳದ್ದಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಗದ್ದಲ, ಕೋಲಾಹಲ, ಬಹಿಷ್ಕಾರ ಮತ್ತು ಪ್ರತಿಭಟನೆಗಳಲ್ಲಿ ಕಲಾಪದ ಅಮೂಲ್ಯ ಸಮಯವು ವ್ಯರ್ಥವಾಗುತ್ತಿದೆ. ವ್ಯಕ್ತಿಗತ ನಿಂದನೆ ಮತ್ತು ಕೀಳುಮಟ್ಟದ ಶಬ್ದ ಪ್ರಯೋಗಗಳು ಹೆಚ್ಚುತ್ತಿರುವುದು ಸದನ ತಲಪಿರುವ ಅಧೋಗತಿಗೆ ನಿದರ್ಶನದಂತಿದೆ.</p>.<p>ರಾಜ್ಯ–ರಾಷ್ಟ್ರದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಉತ್ತರ ಕಂಡುಕೊಳ್ಳ ಬೇಕಾದ ಜನಪ್ರತಿನಿಧಿಗಳು ಸದನವನ್ನು ಕದನಭೂಮಿ ಆಗಿಸುತ್ತಿದ್ದಾರೆ. ಜನ ಸಾಮಾನ್ಯರ ಹಿತದೃಷ್ಟಿಯಿಂದ ಚರ್ಚೆ ಆಗಬೇಕಾದ ಮುಖ್ಯ ಸಂಗತಿಗಳು ನೇಪಥ್ಯಕ್ಕೆ ಸರಿದು, ಕ್ಷುಲ್ಲಕ ವಿಷಯಗಳು ಮುನ್ನೆಲೆಗೆ ಬರುತ್ತಿವೆ. ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಅಧಿವೇಶನ ಸೀಮಿತವಾಗುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳನ್ನು ಅಣಕಿಸುವಂತಿದೆ.</p>.<p>ಜನಪ್ರತಿನಿಧಿ ಎನ್ನಿಸಿಕೊಂಡವರು ಸದನದಲ್ಲಿ ತೋರುತ್ತಿ ರುವ ಪ್ರೌಢಿಮೆಯಂತೂ ಹೇಳತೀರದು. ಸಭ್ಯರು ಕಲಾಪವನ್ನು ವೀಕ್ಷಿಸಲೂಬಾರದು, ಕೇಳಿಸಿಕೊಳ್ಳಲೂಬಾರದು ಎಂಬ ರೀತಿಯಲ್ಲಿ ಅವರ ವರ್ತನೆಗಳಿರುತ್ತವೆ ಎನ್ನುವುದಕ್ಕೆ, ಕಳೆದ ಎರಡು ದಶಕಗಳ ವಿಧಾನಮಂಡಲ ಕಲಾಪವನ್ನು ಗಮನಿಸಿ ದರೆ ಹಲವು ಉದಾಹರಣೆಗಳು ಸಿಗುತ್ತವೆ.</p>.<p>ಜನಾರ್ದನ ರೆಡ್ಡಿ ಮತ್ತು ಸಿದ್ದರಾಮಯ್ಯನವರ ನಡುವೆ ಸದನದಲ್ಲಿ ಈ ಹಿಂದೆ ನಡೆದ ವಾಗ್ವಾದ ತೊಡೆ ತಟ್ಟುವವರೆಗೆ ಹೋಗಿತ್ತು. ಡಿ.ಕೆ. ಶಿವಕುಮಾರ್ ಮತ್ತು ಕೆ.ಎಸ್. ಈಶ್ವರಪ್ಪ ತೋಳೇರಿಸಿಕೊಂಡು ಸದನವನ್ನು ಯುದ್ಧರಂಗವನ್ನಾಗಿಸಿ ದ್ದರು. ಆರೋಪ ಪ್ರತ್ಯಾರೋಪಗಳನ್ನು ವೈಯಕ್ತಿಕ ಪ್ರತಿಷ್ಠೆಯ<br>ವಿಚಾರ ಮಾಡಿಕೊಂಡು, ಸಂಘರ್ಷಕ್ಕೆ ಆಹ್ವಾನಿಸುವಂತೆ ತೊಡೆತಟ್ಟುವುದು ಸದನಕ್ಕೆ ಶೋಭೆ ತರುವ ನಡವಳಿಕೆಯಲ್ಲ. ಗೂಳಿಹಟ್ಟಿ ಶೇಖರ್ ಸದನದೊಳಗೆ ಅಂಗಿಯನ್ನು ಹರಿದು ಕೊಂಡಿದ್ದು, ಸಂಗಮೇಶ್ ಅವರು ಅಂಗಿ ತೆಗೆದಿದ್ದು ಕೂಡ ಅಶಿಸ್ತಿನ ನಡವಳಿಕೆಗಳೇ. ಸದನದೊಳಗೆ ನೀಲಿ ಚಿತ್ರ ವೀಕ್ಷಿಸಿದ ಮಹನೀಯರನ್ನು ಕೂಡ ನಮ್ಮ ಪ್ರಜಾತಂತ್ರ ಕಂಡಿದೆ!</p>.<p>ಸರ್ಕಾರದ ಮುಖ್ಯಸ್ಥರಾದ ರಾಜ್ಯಪಾಲರಿಗೆ ಅಗೌರವ ತೋರಿದ ಘಟನೆಗಳಿಗೂ ಸದನ ಸಾಕ್ಷಿಯಾಗಿದೆ. ಸಾಂವಿಧಾನಿಕವಾಗಿ ಇರುವ ಉನ್ನತ ಹುದ್ದೆಗಳನ್ನು ಗೌರವಿಸುವುದು ಜನ<br>ಪ್ರತಿನಿಧಿಗಳ ಶಿಸ್ತಿನ ಭಾಗ ಎನ್ನುವು ದನ್ನು ಹಲವರು ಮರೆತಿದ್ದಾರೆ.</p>.<p>ಚಿಂತಕರ ಚಾವಡಿ ಎನ್ನುವ ಹಿರಿಮೆಯ ವಿಧಾನ ಪರಿಷತ್ ಕೂಡ ಆಕ್ಷೇಪಾರ್ಹ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದು ಖೇದಕರ. ಬಿಜೆಪಿಯ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ವಿರುದ್ಧ ಅವಾಚ್ಯ ಪದ ಬಳಸಿದ್ದಾರೆ ಎನ್ನುವ ಆರೋಪವು ತೀವ್ರ ಗದ್ದಲಕ್ಕೆ ಕಾರಣವಾಗಿತ್ತು. ಸಭ್ಯತೆಯ ಪರಿಭಾಷೆ ಯಾವುದು ಎನ್ನುವುದನ್ನು ನಮ್ಮ ಜನಪ್ರತಿನಿಧಿಗಳು ಮರೆತಿರುವಂತಿದೆ.</p>.<p>ಒಂದು ಕಾಲದಲ್ಲಿ ಕರ್ನಾಟಕದ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳು ರಾಷ್ಟ್ರದ ಸಂಸದೀಯ ಪರಂಪರೆಯ ಕೀರ್ತಿಕಲಶದಂತಿದ್ದವು. ‘ವಿಧಾನ ಪರಿಷತ್ ಕಲಾಪದಲ್ಲಿ ಗಂಭೀರ ಚರ್ಚೆ ಮೂಲಕ ತಮ್ಮ ಪ್ರಜ್ಞಾವಂತಿಕೆ ಯನ್ನು ತೋರುತ್ತಿದ್ದ ಕವಿಗಳಾದ ಚಂದ್ರಶೇಖರ ಕಂಬಾರ, ಸಿದ್ಧಲಿಂಗಯ್ಯ ಅಂಥವರು ಸದನದ ಗೌರವವನ್ನು ಹೆಚ್ಚಿಸಿ ದ್ದರು. ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ವಿಷಯಗಳಲ್ಲಿ ನಡೆಸಿದ ವಿದ್ವತ್ಪೂರ್ಣ ಚರ್ಚೆಗಳನ್ನು ಈಗಲೂ ನೆನಪಿಸಿ ಕೊಳ್ಳುವವರು ಇದ್ದಾರೆ. ಅಂತಹ ಮೌಲ್ಯಯುತ ಚರ್ಚೆಗಳು ಇಂದು ವಿರಳವಾಗಿವೆ. ಮೇಲ್ಮನೆಯಲ್ಲಿ ಸುದೀರ್ಘ ಅನುಭವ ಇರುವ ಸಭಾಪತಿ ಬಸವರಾಜ ಹೊರಟ್ಟಿ ಅವರೇ ಸಂದರ್ಶನ ವೊಂದರಲ್ಲಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಅಧಿವೇಶನದ ಮಹತ್ವವನ್ನು ನಿರ್ಲಕ್ಷಿಸಿರುವ ಸಚಿವರು ಹಾಗೂ ಅಧಿಕಾರಿಗಳು ಮೈಮರೆತಿದ್ದಾರೆ ಎನ್ನುವುದಕ್ಕೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಇತ್ತೀಚೆಗೆ ಸಭಾತ್ಯಾಗ ಮಾಡಿದ ಘಟನೆ ಉದಾಹರಣೆಯಂತಿದೆ. ಶಾಸಕರು ಲಿಖಿತ ರೂಪದಲ್ಲಿ ಕೇಳಿದ 230 ಪ್ರಶ್ನೆಗಳ ಪೈಕಿ ಕೇವಲ 84 ಪ್ರಶ್ನೆ ಗಳಿಗೆ ಮಾತ್ರ ಉತ್ತರ ನೀಡಲಾಗಿತ್ತು. ಈ ಬಗ್ಗೆ ಸಭಾಪತಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಭಿವೃದ್ಧಿ ಮತ್ತು ಇನ್ನಿತರ ವಿಚಾರವಾಗಿ ಆಡಳಿತಯಂತ್ರದಿಂದ ಸಮರ್ಪಕ ಉತ್ತರ ಪಡೆಯಲು ಶಾಸಕರಿಗೆ ವೇದಿಕೆಯಾಗಬೇಕಾದ ಸದನದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾದುದು ಸದನದ ಗಾಂಭೀರ್ಯವನ್ನು ಅಣಕಿಸುವಂತಿತ್ತು.</p>.<p>ದೇಶದ ಭವ್ಯ ಸಂಸದೀಯ ಪರಂಪರೆಗೆ ಚ್ಯುತಿಯಾಗು ವಂಥ ಘಟನೆಗಳು ಪದೇ ಪದೇ ಘಟಿಸುತ್ತಿವೆ. ಸಂಸದೀಯ ವ್ಯವಸ್ಥೆ ಸಾಗುತ್ತಿರುವ ಹಾದಿಯ ಬಗ್ಗೆ ಪರಾಮರ್ಶೆ ನಡೆಯ ಬೇಕಾದ ತುರ್ತು ಇಂದಿನದು. ಪ್ರಜಾಪ್ರಭುತ್ವ ವ್ಯವಸ್ಥೆಯ ಮಿದುಳಿನಂತಿರುವ ಅಧಿವೇಶನವು ಮತ್ತೆ ತನ್ನ ಗತವೈಭವಕ್ಕೆ ಮರಳಬೇಕಾಗಿದೆ. ಗದ್ದಲ, ಕೋಲಾಹಲ, ಅಶಿಸ್ತಿನ ಹೊರತಾಗಿ, ಅರ್ಥಪೂರ್ಣ ಚರ್ಚೆಗಳು ಸದನದ ಗೌರವ ಹೆಚ್ಚಿಸುತ್ತವೆ ಹಾಗೂ ಜನರಿಗೆ ಉತ್ತರದಾಯಿ ಆಗಿರುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಸತ್ ಹಾಗೂ ವಿಧಾನಮಂಡಲ ಅಧಿವೇಶನಗಳನ್ನು ಗಮನಿಸಿದಾಗ ಎದುರಾಗುವ ಪ್ರಶ್ನೆ: ದೇಶದ ಸಂಸದೀಯ ಪರಂಪರೆ ಅಧೋಗತಿಯತ್ತ ಸಾಗುತ್ತಿದೆಯೆ?</p>.<p>ಇತ್ತೀಚಿನ ವಿಧಾನಸಭೆ ಕಲಾಪದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ಅವರ ನಡುವಿನ ವೈಯಕ್ತಿಕ ವಾಗ್ವಾದ ದೊಡ್ಡ ಸುದ್ದಿಯಾಗಿತ್ತು. ಆ ಘಟನೆಯನ್ನು ವರದಿ ಮಾಡದಂತೆ ಸಭಾಧ್ಯಕ್ಷರೇ ಮಾಧ್ಯಮ ಗಳಿಗೆ ಮನವಿ ಮಾಡಿದ್ದನ್ನು ಗಮನಿಸಿದರೆ, ಇಬ್ಬರು ಜನಪ್ರತಿ ನಿಧಿಗಳ ಬಾಯಿಗಳಿಂದ ಹೊರಹೊಮ್ಮಿದ ಪದಗಳು ಎಂತಹದ್ದಿರಬಹುದೆಂದು ಊಹಿಸಬಹುದು.</p>.<p>ಜನಸಾಮಾನ್ಯರ ಸಮಸ್ಯೆಗಳು ಜನಪ್ರತಿನಿಧಿಗಳ ಮೂಲಕ ಸರ್ಕಾರದ ಗಮನಕ್ಕೆ ಮುಟ್ಟುವಲ್ಲಿ ಸದನಗಳಿಗೆ ವಿಶೇಷ ಮಹತ್ವವಿದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಕಲಾಪಗಳನ್ನು ಸರಿಯಾದ ದಿಕ್ಕಿನಲ್ಲಿ ನಡೆಯುವಂತೆ ನೋಡಿ ಕೊಳ್ಳುವ ಹೊಣೆಗಾರಿಕೆ ಜನಪ್ರತಿನಿಧಿಗಳದ್ದಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಗದ್ದಲ, ಕೋಲಾಹಲ, ಬಹಿಷ್ಕಾರ ಮತ್ತು ಪ್ರತಿಭಟನೆಗಳಲ್ಲಿ ಕಲಾಪದ ಅಮೂಲ್ಯ ಸಮಯವು ವ್ಯರ್ಥವಾಗುತ್ತಿದೆ. ವ್ಯಕ್ತಿಗತ ನಿಂದನೆ ಮತ್ತು ಕೀಳುಮಟ್ಟದ ಶಬ್ದ ಪ್ರಯೋಗಗಳು ಹೆಚ್ಚುತ್ತಿರುವುದು ಸದನ ತಲಪಿರುವ ಅಧೋಗತಿಗೆ ನಿದರ್ಶನದಂತಿದೆ.</p>.<p>ರಾಜ್ಯ–ರಾಷ್ಟ್ರದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಉತ್ತರ ಕಂಡುಕೊಳ್ಳ ಬೇಕಾದ ಜನಪ್ರತಿನಿಧಿಗಳು ಸದನವನ್ನು ಕದನಭೂಮಿ ಆಗಿಸುತ್ತಿದ್ದಾರೆ. ಜನ ಸಾಮಾನ್ಯರ ಹಿತದೃಷ್ಟಿಯಿಂದ ಚರ್ಚೆ ಆಗಬೇಕಾದ ಮುಖ್ಯ ಸಂಗತಿಗಳು ನೇಪಥ್ಯಕ್ಕೆ ಸರಿದು, ಕ್ಷುಲ್ಲಕ ವಿಷಯಗಳು ಮುನ್ನೆಲೆಗೆ ಬರುತ್ತಿವೆ. ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಅಧಿವೇಶನ ಸೀಮಿತವಾಗುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳನ್ನು ಅಣಕಿಸುವಂತಿದೆ.</p>.<p>ಜನಪ್ರತಿನಿಧಿ ಎನ್ನಿಸಿಕೊಂಡವರು ಸದನದಲ್ಲಿ ತೋರುತ್ತಿ ರುವ ಪ್ರೌಢಿಮೆಯಂತೂ ಹೇಳತೀರದು. ಸಭ್ಯರು ಕಲಾಪವನ್ನು ವೀಕ್ಷಿಸಲೂಬಾರದು, ಕೇಳಿಸಿಕೊಳ್ಳಲೂಬಾರದು ಎಂಬ ರೀತಿಯಲ್ಲಿ ಅವರ ವರ್ತನೆಗಳಿರುತ್ತವೆ ಎನ್ನುವುದಕ್ಕೆ, ಕಳೆದ ಎರಡು ದಶಕಗಳ ವಿಧಾನಮಂಡಲ ಕಲಾಪವನ್ನು ಗಮನಿಸಿ ದರೆ ಹಲವು ಉದಾಹರಣೆಗಳು ಸಿಗುತ್ತವೆ.</p>.<p>ಜನಾರ್ದನ ರೆಡ್ಡಿ ಮತ್ತು ಸಿದ್ದರಾಮಯ್ಯನವರ ನಡುವೆ ಸದನದಲ್ಲಿ ಈ ಹಿಂದೆ ನಡೆದ ವಾಗ್ವಾದ ತೊಡೆ ತಟ್ಟುವವರೆಗೆ ಹೋಗಿತ್ತು. ಡಿ.ಕೆ. ಶಿವಕುಮಾರ್ ಮತ್ತು ಕೆ.ಎಸ್. ಈಶ್ವರಪ್ಪ ತೋಳೇರಿಸಿಕೊಂಡು ಸದನವನ್ನು ಯುದ್ಧರಂಗವನ್ನಾಗಿಸಿ ದ್ದರು. ಆರೋಪ ಪ್ರತ್ಯಾರೋಪಗಳನ್ನು ವೈಯಕ್ತಿಕ ಪ್ರತಿಷ್ಠೆಯ<br>ವಿಚಾರ ಮಾಡಿಕೊಂಡು, ಸಂಘರ್ಷಕ್ಕೆ ಆಹ್ವಾನಿಸುವಂತೆ ತೊಡೆತಟ್ಟುವುದು ಸದನಕ್ಕೆ ಶೋಭೆ ತರುವ ನಡವಳಿಕೆಯಲ್ಲ. ಗೂಳಿಹಟ್ಟಿ ಶೇಖರ್ ಸದನದೊಳಗೆ ಅಂಗಿಯನ್ನು ಹರಿದು ಕೊಂಡಿದ್ದು, ಸಂಗಮೇಶ್ ಅವರು ಅಂಗಿ ತೆಗೆದಿದ್ದು ಕೂಡ ಅಶಿಸ್ತಿನ ನಡವಳಿಕೆಗಳೇ. ಸದನದೊಳಗೆ ನೀಲಿ ಚಿತ್ರ ವೀಕ್ಷಿಸಿದ ಮಹನೀಯರನ್ನು ಕೂಡ ನಮ್ಮ ಪ್ರಜಾತಂತ್ರ ಕಂಡಿದೆ!</p>.<p>ಸರ್ಕಾರದ ಮುಖ್ಯಸ್ಥರಾದ ರಾಜ್ಯಪಾಲರಿಗೆ ಅಗೌರವ ತೋರಿದ ಘಟನೆಗಳಿಗೂ ಸದನ ಸಾಕ್ಷಿಯಾಗಿದೆ. ಸಾಂವಿಧಾನಿಕವಾಗಿ ಇರುವ ಉನ್ನತ ಹುದ್ದೆಗಳನ್ನು ಗೌರವಿಸುವುದು ಜನ<br>ಪ್ರತಿನಿಧಿಗಳ ಶಿಸ್ತಿನ ಭಾಗ ಎನ್ನುವು ದನ್ನು ಹಲವರು ಮರೆತಿದ್ದಾರೆ.</p>.<p>ಚಿಂತಕರ ಚಾವಡಿ ಎನ್ನುವ ಹಿರಿಮೆಯ ವಿಧಾನ ಪರಿಷತ್ ಕೂಡ ಆಕ್ಷೇಪಾರ್ಹ ಘಟನೆಗಳಿಗೆ ಸಾಕ್ಷಿಯಾಗುತ್ತಿರುವುದು ಖೇದಕರ. ಬಿಜೆಪಿಯ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ವಿರುದ್ಧ ಅವಾಚ್ಯ ಪದ ಬಳಸಿದ್ದಾರೆ ಎನ್ನುವ ಆರೋಪವು ತೀವ್ರ ಗದ್ದಲಕ್ಕೆ ಕಾರಣವಾಗಿತ್ತು. ಸಭ್ಯತೆಯ ಪರಿಭಾಷೆ ಯಾವುದು ಎನ್ನುವುದನ್ನು ನಮ್ಮ ಜನಪ್ರತಿನಿಧಿಗಳು ಮರೆತಿರುವಂತಿದೆ.</p>.<p>ಒಂದು ಕಾಲದಲ್ಲಿ ಕರ್ನಾಟಕದ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳು ರಾಷ್ಟ್ರದ ಸಂಸದೀಯ ಪರಂಪರೆಯ ಕೀರ್ತಿಕಲಶದಂತಿದ್ದವು. ‘ವಿಧಾನ ಪರಿಷತ್ ಕಲಾಪದಲ್ಲಿ ಗಂಭೀರ ಚರ್ಚೆ ಮೂಲಕ ತಮ್ಮ ಪ್ರಜ್ಞಾವಂತಿಕೆ ಯನ್ನು ತೋರುತ್ತಿದ್ದ ಕವಿಗಳಾದ ಚಂದ್ರಶೇಖರ ಕಂಬಾರ, ಸಿದ್ಧಲಿಂಗಯ್ಯ ಅಂಥವರು ಸದನದ ಗೌರವವನ್ನು ಹೆಚ್ಚಿಸಿ ದ್ದರು. ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ವಿಷಯಗಳಲ್ಲಿ ನಡೆಸಿದ ವಿದ್ವತ್ಪೂರ್ಣ ಚರ್ಚೆಗಳನ್ನು ಈಗಲೂ ನೆನಪಿಸಿ ಕೊಳ್ಳುವವರು ಇದ್ದಾರೆ. ಅಂತಹ ಮೌಲ್ಯಯುತ ಚರ್ಚೆಗಳು ಇಂದು ವಿರಳವಾಗಿವೆ. ಮೇಲ್ಮನೆಯಲ್ಲಿ ಸುದೀರ್ಘ ಅನುಭವ ಇರುವ ಸಭಾಪತಿ ಬಸವರಾಜ ಹೊರಟ್ಟಿ ಅವರೇ ಸಂದರ್ಶನ ವೊಂದರಲ್ಲಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>ಅಧಿವೇಶನದ ಮಹತ್ವವನ್ನು ನಿರ್ಲಕ್ಷಿಸಿರುವ ಸಚಿವರು ಹಾಗೂ ಅಧಿಕಾರಿಗಳು ಮೈಮರೆತಿದ್ದಾರೆ ಎನ್ನುವುದಕ್ಕೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಇತ್ತೀಚೆಗೆ ಸಭಾತ್ಯಾಗ ಮಾಡಿದ ಘಟನೆ ಉದಾಹರಣೆಯಂತಿದೆ. ಶಾಸಕರು ಲಿಖಿತ ರೂಪದಲ್ಲಿ ಕೇಳಿದ 230 ಪ್ರಶ್ನೆಗಳ ಪೈಕಿ ಕೇವಲ 84 ಪ್ರಶ್ನೆ ಗಳಿಗೆ ಮಾತ್ರ ಉತ್ತರ ನೀಡಲಾಗಿತ್ತು. ಈ ಬಗ್ಗೆ ಸಭಾಪತಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಭಿವೃದ್ಧಿ ಮತ್ತು ಇನ್ನಿತರ ವಿಚಾರವಾಗಿ ಆಡಳಿತಯಂತ್ರದಿಂದ ಸಮರ್ಪಕ ಉತ್ತರ ಪಡೆಯಲು ಶಾಸಕರಿಗೆ ವೇದಿಕೆಯಾಗಬೇಕಾದ ಸದನದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾದುದು ಸದನದ ಗಾಂಭೀರ್ಯವನ್ನು ಅಣಕಿಸುವಂತಿತ್ತು.</p>.<p>ದೇಶದ ಭವ್ಯ ಸಂಸದೀಯ ಪರಂಪರೆಗೆ ಚ್ಯುತಿಯಾಗು ವಂಥ ಘಟನೆಗಳು ಪದೇ ಪದೇ ಘಟಿಸುತ್ತಿವೆ. ಸಂಸದೀಯ ವ್ಯವಸ್ಥೆ ಸಾಗುತ್ತಿರುವ ಹಾದಿಯ ಬಗ್ಗೆ ಪರಾಮರ್ಶೆ ನಡೆಯ ಬೇಕಾದ ತುರ್ತು ಇಂದಿನದು. ಪ್ರಜಾಪ್ರಭುತ್ವ ವ್ಯವಸ್ಥೆಯ ಮಿದುಳಿನಂತಿರುವ ಅಧಿವೇಶನವು ಮತ್ತೆ ತನ್ನ ಗತವೈಭವಕ್ಕೆ ಮರಳಬೇಕಾಗಿದೆ. ಗದ್ದಲ, ಕೋಲಾಹಲ, ಅಶಿಸ್ತಿನ ಹೊರತಾಗಿ, ಅರ್ಥಪೂರ್ಣ ಚರ್ಚೆಗಳು ಸದನದ ಗೌರವ ಹೆಚ್ಚಿಸುತ್ತವೆ ಹಾಗೂ ಜನರಿಗೆ ಉತ್ತರದಾಯಿ ಆಗಿರುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>