<p>ಅಂಚೆ ಕಚೇರಿ ಎದುರಿನಲ್ಲಿ ಸಿಕ್ಕ ಆ ಪರಿಚಿತ ಹಿರಿಯರು ಬಳಲಿದಂತೆ ಕಾಣುತ್ತಿದ್ದರು. ಅವರು ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರು. ‘ಎನ್ಎಸ್ಸಿ ಠೇವಣಿ ಅವಧಿ ಮುಗಿದಿತ್ತು. ಅದರ ಹಣ ತೆಗೆದುಕೊಳ್ಳಲು ಬಂದಿದ್ದೆ. ಅಂತೂ ದುಡ್ಡು ಕೈಗೆ ಸಿಗಲು ಎರಡು ಗಂಟೆ ಹಿಡೀತು. ಮೂರು ಮೂರು ಚಲನ್ ತುಂಬಿಸಿ, ಉದ್ದನೆಯ ಸಾಲಲ್ಲಿ ನಿಂತು ಕೆಲಸ ಮುಗಿಸಬೇಕಾದರೆ ಸಾಕು ಸಾಕಾಯ್ತು. ನಮ್ಮಂತೋರಿಗೇ ಹೀಗಾದ್ರೆ ಇನ್ನು ಹಳ್ಳಿ ಜನರ ಪಾಡೇನು?’ ಎನ್ನುತ್ತಾ ಬೆವರೊರೆಸಿಕೊಂಡರು! ಆ ಹಿರಿಯರ ಅನುಭವ ವೈಯಕ್ತಿಕ ಮಾತ್ರವಲ್ಲ, ಅದು ಅನೇಕ ಹಿರಿಯ ನಾಗರಿಕರು ಎದುರಿಸುತ್ತಿರುವ ಸಮಸ್ಯೆಯೂ ಆಗಿದೆ.</p>.<p>ಅಂಚೆ ಇಲಾಖೆಯು ಸಾರ್ವಜನಿಕರಿಗೆ ಅಗತ್ಯ ಸೇವೆ ಗಳನ್ನು ಅತ್ಯಂತ ಕನಿಷ್ಠ ಶುಲ್ಕದಲ್ಲಿ ಒದಗಿಸುತ್ತಿದೆ. ಆದರೆ, ಕಚೇರಿಯೊಳಗಿನ ವಾತಾವರಣ ಅಷ್ಟೇನೂ ಹಿತಕರವಾಗಿಲ್ಲ, ಗ್ರಾಹಕಸ್ನೇಹಿಯಾಗಿಲ್ಲ. ತಂತ್ರಜ್ಞಾನವನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವಲ್ಲಿ ಹಾಗೂ ಬಳಸುವಲ್ಲಿ ಹಿಂದೆ ಬಿದ್ದಿರುವ<br />ಇಲಾಖೆ, ಇನ್ನೂ ತನ್ನ ಸಾಂಪ್ರದಾಯಿಕ ಕಾರ್ಯ ವಿಧಾನ ದಿಂದ ಹೊರಬಂದಿಲ್ಲದಿರುವುದು ಗ್ರಾಹಕರಿಗೆ ಕಿರಿ ಕಿರಿ ಉಂಟುಮಾಡುತ್ತಿದೆ.</p>.<p>ಉದ್ದುದ್ದ ಸರದಿ ಸಾಲುಗಳು, ತಾಲ್ಲೂಕು–ಜಿಲ್ಲಾ ಕಚೇರಿ ಗಳಲ್ಲಿ ಅಗತ್ಯ ಸಂಖ್ಯೆಯ ಸಿಬ್ಬಂದಿ ಇಲ್ಲದಿರುವುದು, ಗ್ರಾಹಕರೇ ಖುದ್ದು ಭರ್ತಿ ಮಾಡಬೇಕಾದ ಉದ್ದನೆಯ ಗೊಂದಲ ಮೂಡಿಸುವ ಅರ್ಜಿ ನಮೂನೆಗಳು, ಚಲನ್ಗಳು, ಹೆಚ್ಚಿನೆಡೆ ಕನ್ನಡದಲ್ಲಿ ನಮೂನೆಗಳು ಲಭ್ಯವಿಲ್ಲದಿರುವುದು, ಭರ್ತಿ ಮಾಡುವಾಗ ತುಸು ತಪ್ಪಾದರೂ ಮತ್ತೆ ಹೊಸದಾಗಿ ತುಂಬಿ ಪುನಃ ಸರದಿ ಸಾಲು ಹಿಡಿಯಬೇಕಿರುವ ಅನಿವಾರ್ಯತೆ... ಇಂತಹ ಸೇವಾವೈಖರಿಯ ಕಾರಣ ಒಂದು ಸಣ್ಣ ಕೆಲಸಕ್ಕೂ ಒಮ್ಮೊಮ್ಮೆ ತಾಸುಗಟ್ಟಲೆ ಸಮಯ ಬೇಕಾಗುತ್ತದೆ.</p>.<p>ಗ್ರಾಹಕರ ‘ಎನ್ಎಸ್ಸಿ’, ‘ಕೆವಿಪಿ’ಯಂತಹ ಹೂಡಿಕೆಗಳು ಪಕ್ವಗೊಂಡಾಗ ಹಣವನ್ನು ಹಿಂಪಡೆಯಲು ಆ ಠೇವಣಿ ಪತ್ರಕ್ಕೆ ಸಹಿ ಮಾಡಿ ಹಿಂದಿರುಗಿಸುವ ಜೊತೆಗೆ, ಅದನ್ನು ಮುಕ್ತಾಯಗೊಳಿಸಲು ಅರ್ಜಿ ನಮೂನೆಯೊಂದನ್ನು ತುಂಬಿಸಿಕೊಡ ಬೇಕು. ಪೂರ್ಣ ಮೊತ್ತ ಮೊದಲು ಉಳಿತಾಯ ಖಾತೆಗೆ ಜಮೆ ಆಗಬೇಕಿರುವುದರಿಂದ ಖಾತೆ ಸಂಖ್ಯೆಯೊಂದಿಗೆ ಮತ್ತೊಂದು ನಮೂನೆ ತುಂಬಿಸಿ ಕೊಡಬೇಕು. ನಂತರದಲ್ಲಿ ಹಣ ಪಡೆದು ಕೊಳ್ಳಲು ಚಲನ್ ತುಂಬಿಸಿ ಕೊಡಬೇಕು. ಹೀಗೆ ವಾಯಿದೆ ನಂತರ ಹಣ ಮರಳಿ ಪಡೆಯಲು ಮೂರು ಮೂರು ನಮೂನೆಗಳನ್ನು ಸಲ್ಲಿಸಬೇಕು! ಇದು ಸಿಬ್ಬಂದಿಗೆ ಕೆಲಸದ ಹೊರೆಯನ್ನು ಹೆಚ್ಚು ಮಾಡುವುದಲ್ಲದೆ, ಗ್ರಾಹಕನ ಸಮಯವನ್ನೂ ವೃಥಾ ಪೋಲು ಮಾಡುತ್ತದೆ.</p>.<p>ಭಾರತೀಯ ಅಂಚೆ ಇಲಾಖೆ (ಇಂಡಿಯಾ ಪೋಸ್ಟ್) ವಿಶ್ವದಲ್ಲೇ ಅತಿ ದೊಡ್ಡ ಸೇವಾ ಜಾಲ ಹೊಂದಿರುವ ಸಂಸ್ಥೆ. ಬ್ರಿಟಿಷರ ಕಾಲದಲ್ಲಿ ಆರಂಭವಾಗಿ, ಒಂದೂಮುಕ್ಕಾಲು ಶತಮಾನ ಕಾಣುತ್ತಿರುವ ಇದು ಕಾಲಕ್ಕೆ ತಕ್ಕಂತೆ ತನ್ನ ಕಾರ್ಯಚಟು ವಟಿಕೆಗಳನ್ನು ವೈವಿಧ್ಯಮಯಗೊಳಿ ಸುತ್ತಾ ಬಂದಿದೆ. ಸಾಮಾನ್ಯ ಪತ್ರಗಳು, ಸ್ಪೀಡ್ ಪೋಸ್ಟ್ನಂತಹ ತನ್ನ ಸಾಂಪ್ರದಾಯಿಕ ಕೆಲಸಗಳಲ್ಲದೆ, ಪಾರ್ಸೆಲ್ ಸೇವೆ, ಜನತೆಗೆ ಅದರಲ್ಲೂ ಗ್ರಾಮೀಣರಿಗೆ ಬ್ಯಾಂಕಿಂಗ್ ಸೌಲಭ್ಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸು ತ್ತಿದೆ. ಅಂಚೆ ಜೀವವಿಮೆಯಂತೂ ಕಡಿಮೆ ಪ್ರೀಮಿಯಂನಲ್ಲಿ ಗ್ರಾಹಕರಿಗೆ ಜೀವವಿಮಾ ರಕ್ಷಣೆಯನ್ನು ಒದಗಿಸುತ್ತಿದೆ.</p>.<p>ಇ–ಮನಿ ಆರ್ಡರ್ ಮೂಲಕ ಗ್ರಾಹಕನ ಮನೆ ಬಾಗಿಲಿಗೆ ಅಂದೇ ಹಣ ತಲಪಿಸುವ ವ್ಯವಸ್ಥೆ, ಪಿಂಚಣಿದಾರರು ಅವರಿ ದ್ದಲ್ಲೇ ತಮ್ಮ ಇರುವಿಕೆಯ ಬಗ್ಗೆ ಡಿಜಿಟಲ್ ಪ್ರಮಾಣ ಪತ್ರ ಪಡೆಯುವ ಸೌಲಭ್ಯ, ಆಧಾರ್ ಜೋಡಿತ ಉಳಿತಾಯ ಖಾತೆ ಯಿಂದ ಅಂಚೆಯಣ್ಣನ ಮೂಲಕ ಮನೆಯಲ್ಲೇ ನಗದು ಪಡೆಯುವ ಸವಲತ್ತು ನಿಜಕ್ಕೂ ಅಂಚೆ ಇಲಾಖೆಯ ಜನಪರ ಕಾಳಜಿಯ ಯೋಜನೆಗಳೇ ಸರಿ. ಸರ್ಕಾರದ ಹಲವು ಕಲ್ಯಾಣ ಯೋಜನೆಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲಪಿಸುತ್ತಿರುವ ಇಲಾಖೆಯ ಸಾಮಾಜಿಕ ಬದ್ಧತೆ ಶ್ಲಾಘನೀಯ.</p>.<p>ಇಲಾಖೆಯ ಕೆವಿಪಿ, ಎನ್ಎಸ್ಸಿ, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಬ್ಯಾಂಕ್ ಠೇವಣಿಗಿಂತ ಹೆಚ್ಚು ಬಡ್ಡಿ ತರುತ್ತವೆ. ಕೆಲವು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿಯೂ ಇದೆ. ಜೊತೆಗೆ ಇಲ್ಲಿ ತೊಡಗಿಸುವ ಹಣಕ್ಕೆ ಕೇಂದ್ರ ಸರ್ಕಾರದ ಗ್ಯಾರಂಟಿ ಇರುವುದರಿಂದ ಸಂಪೂರ್ಣ ಸುರಕ್ಷಿತ. ವರಮಾನ, ಸುರಕ್ಷತೆ, ತೆರಿಗೆ ಉಳಿತಾಯ ಎಲ್ಲಾ ದೃಷ್ಟಿಯಿಂದಲೂ ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಹಣ ಹೂಡುವುದು ಲಾಭಕರ. ಆದರೆ ಸಮಸ್ಯೆಯಿರುವುದು ಗ್ರಾಹಕರಿಗೆ ಒದಗಿಸುವ ಸೇವೆ ಸಂಕೀರ್ಣವಾಗಿರುವುದರಲ್ಲಿ.</p>.<p>ಕಚೇರಿಯಲ್ಲಿನ ಉದ್ದನೆಯ ಸರದಿ ಸಾಲು, ಸುಲಭವಾಗಿ ತುಂಬಿಸಲಾಗದ ನಮೂನೆಗಳು, ಕಾಯುವಿಕೆ, ಮುಂತಾದ ಕಾರಣಗಳಿಂದ ಜನರು ಅಂಚೆ ಇಲಾಖೆಯ ಸೌಲಭ್ಯ ಬಳಸಿ ಕೊಳ್ಳಲು ಹಿಂದೇಟು ಹಾಕುತ್ತಾರೆ. ಬ್ಯಾಂಕುಗಳಂತೆ ಅಂಚೆ ಕಚೇರಿಯೂ ಸರಳಗೊಳ್ಳುವುದರ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳಬೇಕಿದೆ. ಆನ್ಲೈನ್ನಲ್ಲೇ ಖಾತೆಗಳನ್ನು ತೆರೆಯುವ, ಕೆವೈಸಿ ದಾಖಲಿ ಸುವ ಹಾಗೂ ವಿವಿಧ ಉತ್ಪನ್ನಗಳನ್ನು ಖರೀದಿಸುವಂತಹ ಸೌಲಭ್ಯವನ್ನು ಒದಗಿಸಬೇಕು.</p>.<p>ಭಾರತೀಯ ಅಂಚೆಯು ಬರೀ ಒಂದು ಸರ್ಕಾರಿ ಸಂಸ್ಥೆ ಯಲ್ಲ. ಅದು ದೇಶದ ಭಾವನಾತ್ಮಕ ಕೊಂಡಿಯಾಗಿದೆ. ಖಾಸಗಿ ಸಂಸ್ಥೆಗಳು ಲಾಭವಿಲ್ಲದ ಕಡೆ ಸೇವೆ ನೀಡಲು ಹಿಂಜರಿಯುವಾಗ ಅಂಚೆ ಇಲಾಖೆಯೇ ಸಾಮಾನ್ಯ ಜನರ ಆಶಾಕಿರಣವಾಗಿದೆ. ತಂತ್ರಜ್ಞಾನದ ಅಳವಡಿಕೆ, ಸಿಬ್ಬಂದಿಯ ದಕ್ಷತೆ ಮತ್ತು ಗ್ರಾಹಕ ಕೇಂದ್ರಿತ ಮನೋಭಾವನೆಯನ್ನು ಮೈಗೂಡಿಸಿ ಕೊಂಡರೆ ಮಾತ್ರ ಭಾರತೀಯ ಅಂಚೆ ಇಲಾಖೆಯು ಮುಂಬರುವ ದಿನಗಳಲ್ಲೂ ಜಾಗತಿಕ ಮಟ್ಟದ ಜನಪ್ರಿಯ ಸೇವಾಸಂಸ್ಥೆ ಯಾಗಿ ಮುಂದುವರಿಯಲಿದೆ. ಹಾಗೆ ಉಳಿಯುವುದು ಜನಸಾಮಾನ್ಯರ ಹಿತದೃಷ್ಟಿಯಿಂದ ಅಗತ್ಯವೂ ಹೌದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂಚೆ ಕಚೇರಿ ಎದುರಿನಲ್ಲಿ ಸಿಕ್ಕ ಆ ಪರಿಚಿತ ಹಿರಿಯರು ಬಳಲಿದಂತೆ ಕಾಣುತ್ತಿದ್ದರು. ಅವರು ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರು. ‘ಎನ್ಎಸ್ಸಿ ಠೇವಣಿ ಅವಧಿ ಮುಗಿದಿತ್ತು. ಅದರ ಹಣ ತೆಗೆದುಕೊಳ್ಳಲು ಬಂದಿದ್ದೆ. ಅಂತೂ ದುಡ್ಡು ಕೈಗೆ ಸಿಗಲು ಎರಡು ಗಂಟೆ ಹಿಡೀತು. ಮೂರು ಮೂರು ಚಲನ್ ತುಂಬಿಸಿ, ಉದ್ದನೆಯ ಸಾಲಲ್ಲಿ ನಿಂತು ಕೆಲಸ ಮುಗಿಸಬೇಕಾದರೆ ಸಾಕು ಸಾಕಾಯ್ತು. ನಮ್ಮಂತೋರಿಗೇ ಹೀಗಾದ್ರೆ ಇನ್ನು ಹಳ್ಳಿ ಜನರ ಪಾಡೇನು?’ ಎನ್ನುತ್ತಾ ಬೆವರೊರೆಸಿಕೊಂಡರು! ಆ ಹಿರಿಯರ ಅನುಭವ ವೈಯಕ್ತಿಕ ಮಾತ್ರವಲ್ಲ, ಅದು ಅನೇಕ ಹಿರಿಯ ನಾಗರಿಕರು ಎದುರಿಸುತ್ತಿರುವ ಸಮಸ್ಯೆಯೂ ಆಗಿದೆ.</p>.<p>ಅಂಚೆ ಇಲಾಖೆಯು ಸಾರ್ವಜನಿಕರಿಗೆ ಅಗತ್ಯ ಸೇವೆ ಗಳನ್ನು ಅತ್ಯಂತ ಕನಿಷ್ಠ ಶುಲ್ಕದಲ್ಲಿ ಒದಗಿಸುತ್ತಿದೆ. ಆದರೆ, ಕಚೇರಿಯೊಳಗಿನ ವಾತಾವರಣ ಅಷ್ಟೇನೂ ಹಿತಕರವಾಗಿಲ್ಲ, ಗ್ರಾಹಕಸ್ನೇಹಿಯಾಗಿಲ್ಲ. ತಂತ್ರಜ್ಞಾನವನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವಲ್ಲಿ ಹಾಗೂ ಬಳಸುವಲ್ಲಿ ಹಿಂದೆ ಬಿದ್ದಿರುವ<br />ಇಲಾಖೆ, ಇನ್ನೂ ತನ್ನ ಸಾಂಪ್ರದಾಯಿಕ ಕಾರ್ಯ ವಿಧಾನ ದಿಂದ ಹೊರಬಂದಿಲ್ಲದಿರುವುದು ಗ್ರಾಹಕರಿಗೆ ಕಿರಿ ಕಿರಿ ಉಂಟುಮಾಡುತ್ತಿದೆ.</p>.<p>ಉದ್ದುದ್ದ ಸರದಿ ಸಾಲುಗಳು, ತಾಲ್ಲೂಕು–ಜಿಲ್ಲಾ ಕಚೇರಿ ಗಳಲ್ಲಿ ಅಗತ್ಯ ಸಂಖ್ಯೆಯ ಸಿಬ್ಬಂದಿ ಇಲ್ಲದಿರುವುದು, ಗ್ರಾಹಕರೇ ಖುದ್ದು ಭರ್ತಿ ಮಾಡಬೇಕಾದ ಉದ್ದನೆಯ ಗೊಂದಲ ಮೂಡಿಸುವ ಅರ್ಜಿ ನಮೂನೆಗಳು, ಚಲನ್ಗಳು, ಹೆಚ್ಚಿನೆಡೆ ಕನ್ನಡದಲ್ಲಿ ನಮೂನೆಗಳು ಲಭ್ಯವಿಲ್ಲದಿರುವುದು, ಭರ್ತಿ ಮಾಡುವಾಗ ತುಸು ತಪ್ಪಾದರೂ ಮತ್ತೆ ಹೊಸದಾಗಿ ತುಂಬಿ ಪುನಃ ಸರದಿ ಸಾಲು ಹಿಡಿಯಬೇಕಿರುವ ಅನಿವಾರ್ಯತೆ... ಇಂತಹ ಸೇವಾವೈಖರಿಯ ಕಾರಣ ಒಂದು ಸಣ್ಣ ಕೆಲಸಕ್ಕೂ ಒಮ್ಮೊಮ್ಮೆ ತಾಸುಗಟ್ಟಲೆ ಸಮಯ ಬೇಕಾಗುತ್ತದೆ.</p>.<p>ಗ್ರಾಹಕರ ‘ಎನ್ಎಸ್ಸಿ’, ‘ಕೆವಿಪಿ’ಯಂತಹ ಹೂಡಿಕೆಗಳು ಪಕ್ವಗೊಂಡಾಗ ಹಣವನ್ನು ಹಿಂಪಡೆಯಲು ಆ ಠೇವಣಿ ಪತ್ರಕ್ಕೆ ಸಹಿ ಮಾಡಿ ಹಿಂದಿರುಗಿಸುವ ಜೊತೆಗೆ, ಅದನ್ನು ಮುಕ್ತಾಯಗೊಳಿಸಲು ಅರ್ಜಿ ನಮೂನೆಯೊಂದನ್ನು ತುಂಬಿಸಿಕೊಡ ಬೇಕು. ಪೂರ್ಣ ಮೊತ್ತ ಮೊದಲು ಉಳಿತಾಯ ಖಾತೆಗೆ ಜಮೆ ಆಗಬೇಕಿರುವುದರಿಂದ ಖಾತೆ ಸಂಖ್ಯೆಯೊಂದಿಗೆ ಮತ್ತೊಂದು ನಮೂನೆ ತುಂಬಿಸಿ ಕೊಡಬೇಕು. ನಂತರದಲ್ಲಿ ಹಣ ಪಡೆದು ಕೊಳ್ಳಲು ಚಲನ್ ತುಂಬಿಸಿ ಕೊಡಬೇಕು. ಹೀಗೆ ವಾಯಿದೆ ನಂತರ ಹಣ ಮರಳಿ ಪಡೆಯಲು ಮೂರು ಮೂರು ನಮೂನೆಗಳನ್ನು ಸಲ್ಲಿಸಬೇಕು! ಇದು ಸಿಬ್ಬಂದಿಗೆ ಕೆಲಸದ ಹೊರೆಯನ್ನು ಹೆಚ್ಚು ಮಾಡುವುದಲ್ಲದೆ, ಗ್ರಾಹಕನ ಸಮಯವನ್ನೂ ವೃಥಾ ಪೋಲು ಮಾಡುತ್ತದೆ.</p>.<p>ಭಾರತೀಯ ಅಂಚೆ ಇಲಾಖೆ (ಇಂಡಿಯಾ ಪೋಸ್ಟ್) ವಿಶ್ವದಲ್ಲೇ ಅತಿ ದೊಡ್ಡ ಸೇವಾ ಜಾಲ ಹೊಂದಿರುವ ಸಂಸ್ಥೆ. ಬ್ರಿಟಿಷರ ಕಾಲದಲ್ಲಿ ಆರಂಭವಾಗಿ, ಒಂದೂಮುಕ್ಕಾಲು ಶತಮಾನ ಕಾಣುತ್ತಿರುವ ಇದು ಕಾಲಕ್ಕೆ ತಕ್ಕಂತೆ ತನ್ನ ಕಾರ್ಯಚಟು ವಟಿಕೆಗಳನ್ನು ವೈವಿಧ್ಯಮಯಗೊಳಿ ಸುತ್ತಾ ಬಂದಿದೆ. ಸಾಮಾನ್ಯ ಪತ್ರಗಳು, ಸ್ಪೀಡ್ ಪೋಸ್ಟ್ನಂತಹ ತನ್ನ ಸಾಂಪ್ರದಾಯಿಕ ಕೆಲಸಗಳಲ್ಲದೆ, ಪಾರ್ಸೆಲ್ ಸೇವೆ, ಜನತೆಗೆ ಅದರಲ್ಲೂ ಗ್ರಾಮೀಣರಿಗೆ ಬ್ಯಾಂಕಿಂಗ್ ಸೌಲಭ್ಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸು ತ್ತಿದೆ. ಅಂಚೆ ಜೀವವಿಮೆಯಂತೂ ಕಡಿಮೆ ಪ್ರೀಮಿಯಂನಲ್ಲಿ ಗ್ರಾಹಕರಿಗೆ ಜೀವವಿಮಾ ರಕ್ಷಣೆಯನ್ನು ಒದಗಿಸುತ್ತಿದೆ.</p>.<p>ಇ–ಮನಿ ಆರ್ಡರ್ ಮೂಲಕ ಗ್ರಾಹಕನ ಮನೆ ಬಾಗಿಲಿಗೆ ಅಂದೇ ಹಣ ತಲಪಿಸುವ ವ್ಯವಸ್ಥೆ, ಪಿಂಚಣಿದಾರರು ಅವರಿ ದ್ದಲ್ಲೇ ತಮ್ಮ ಇರುವಿಕೆಯ ಬಗ್ಗೆ ಡಿಜಿಟಲ್ ಪ್ರಮಾಣ ಪತ್ರ ಪಡೆಯುವ ಸೌಲಭ್ಯ, ಆಧಾರ್ ಜೋಡಿತ ಉಳಿತಾಯ ಖಾತೆ ಯಿಂದ ಅಂಚೆಯಣ್ಣನ ಮೂಲಕ ಮನೆಯಲ್ಲೇ ನಗದು ಪಡೆಯುವ ಸವಲತ್ತು ನಿಜಕ್ಕೂ ಅಂಚೆ ಇಲಾಖೆಯ ಜನಪರ ಕಾಳಜಿಯ ಯೋಜನೆಗಳೇ ಸರಿ. ಸರ್ಕಾರದ ಹಲವು ಕಲ್ಯಾಣ ಯೋಜನೆಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲಪಿಸುತ್ತಿರುವ ಇಲಾಖೆಯ ಸಾಮಾಜಿಕ ಬದ್ಧತೆ ಶ್ಲಾಘನೀಯ.</p>.<p>ಇಲಾಖೆಯ ಕೆವಿಪಿ, ಎನ್ಎಸ್ಸಿ, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಬ್ಯಾಂಕ್ ಠೇವಣಿಗಿಂತ ಹೆಚ್ಚು ಬಡ್ಡಿ ತರುತ್ತವೆ. ಕೆಲವು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿಯೂ ಇದೆ. ಜೊತೆಗೆ ಇಲ್ಲಿ ತೊಡಗಿಸುವ ಹಣಕ್ಕೆ ಕೇಂದ್ರ ಸರ್ಕಾರದ ಗ್ಯಾರಂಟಿ ಇರುವುದರಿಂದ ಸಂಪೂರ್ಣ ಸುರಕ್ಷಿತ. ವರಮಾನ, ಸುರಕ್ಷತೆ, ತೆರಿಗೆ ಉಳಿತಾಯ ಎಲ್ಲಾ ದೃಷ್ಟಿಯಿಂದಲೂ ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಹಣ ಹೂಡುವುದು ಲಾಭಕರ. ಆದರೆ ಸಮಸ್ಯೆಯಿರುವುದು ಗ್ರಾಹಕರಿಗೆ ಒದಗಿಸುವ ಸೇವೆ ಸಂಕೀರ್ಣವಾಗಿರುವುದರಲ್ಲಿ.</p>.<p>ಕಚೇರಿಯಲ್ಲಿನ ಉದ್ದನೆಯ ಸರದಿ ಸಾಲು, ಸುಲಭವಾಗಿ ತುಂಬಿಸಲಾಗದ ನಮೂನೆಗಳು, ಕಾಯುವಿಕೆ, ಮುಂತಾದ ಕಾರಣಗಳಿಂದ ಜನರು ಅಂಚೆ ಇಲಾಖೆಯ ಸೌಲಭ್ಯ ಬಳಸಿ ಕೊಳ್ಳಲು ಹಿಂದೇಟು ಹಾಕುತ್ತಾರೆ. ಬ್ಯಾಂಕುಗಳಂತೆ ಅಂಚೆ ಕಚೇರಿಯೂ ಸರಳಗೊಳ್ಳುವುದರ ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳಬೇಕಿದೆ. ಆನ್ಲೈನ್ನಲ್ಲೇ ಖಾತೆಗಳನ್ನು ತೆರೆಯುವ, ಕೆವೈಸಿ ದಾಖಲಿ ಸುವ ಹಾಗೂ ವಿವಿಧ ಉತ್ಪನ್ನಗಳನ್ನು ಖರೀದಿಸುವಂತಹ ಸೌಲಭ್ಯವನ್ನು ಒದಗಿಸಬೇಕು.</p>.<p>ಭಾರತೀಯ ಅಂಚೆಯು ಬರೀ ಒಂದು ಸರ್ಕಾರಿ ಸಂಸ್ಥೆ ಯಲ್ಲ. ಅದು ದೇಶದ ಭಾವನಾತ್ಮಕ ಕೊಂಡಿಯಾಗಿದೆ. ಖಾಸಗಿ ಸಂಸ್ಥೆಗಳು ಲಾಭವಿಲ್ಲದ ಕಡೆ ಸೇವೆ ನೀಡಲು ಹಿಂಜರಿಯುವಾಗ ಅಂಚೆ ಇಲಾಖೆಯೇ ಸಾಮಾನ್ಯ ಜನರ ಆಶಾಕಿರಣವಾಗಿದೆ. ತಂತ್ರಜ್ಞಾನದ ಅಳವಡಿಕೆ, ಸಿಬ್ಬಂದಿಯ ದಕ್ಷತೆ ಮತ್ತು ಗ್ರಾಹಕ ಕೇಂದ್ರಿತ ಮನೋಭಾವನೆಯನ್ನು ಮೈಗೂಡಿಸಿ ಕೊಂಡರೆ ಮಾತ್ರ ಭಾರತೀಯ ಅಂಚೆ ಇಲಾಖೆಯು ಮುಂಬರುವ ದಿನಗಳಲ್ಲೂ ಜಾಗತಿಕ ಮಟ್ಟದ ಜನಪ್ರಿಯ ಸೇವಾಸಂಸ್ಥೆ ಯಾಗಿ ಮುಂದುವರಿಯಲಿದೆ. ಹಾಗೆ ಉಳಿಯುವುದು ಜನಸಾಮಾನ್ಯರ ಹಿತದೃಷ್ಟಿಯಿಂದ ಅಗತ್ಯವೂ ಹೌದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>