<p>ಪರಿಸರ ಮತ್ತು ವನ್ಯಜೀವಿ ನಾಶ ತೀವ್ರಗತಿಯಲ್ಲಿ ಇರುವ ಸಂದರ್ಭದಲ್ಲಿ, ವನ್ಯಜೀವಿಗಳನ್ನು ಗುಂಡು ಹೊಡೆದು ಕೊಲ್ಲುವ, ಅವುಗಳ ಸಂತಾನಶಕ್ತಿ ಹರಣ ಮಾಡುವ, ಸ್ಥಳಾಂತರಿಸುವ ಚರ್ಚೆಗಳು, ಚಿಂತನೆಗಳು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಂದಲೇ ನಡೆಯುತ್ತಿವೆ.</p>.<p>ಕೆಲವು ತಿಂಗಳ ಹಿಂದೆ ಆನೆ ದಾಳಿಯಿಂದ ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟರು. ಆಗ, ಮಾಜಿ ಶಾಸಕ ಡಿ.ಎನ್. ಜೀವರಾಜ್, ‘20 ಲಕ್ಷ ರೂಪಾಯಿ ಕೊಡ್ತೀವಿ, ಆನೆ ಹೊಡೆಯೋದಕ್ಕೆ ಅನುಮತಿ ಕೊಡಿ’ ಎಂದು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಎದುರು ಹೇಳಿದ್ದರು. ಆ ವಿಡಿಯೊ ವೈರಲ್ ಆಗಿತ್ತು. ಕಳೆದ ವರ್ಷ ವಿಧಾನಸಭಾ ಅಧಿವೇಶನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ‘ಆನೆಗಳಿಂದ ಕಾಡಂಚಿನ ಜನರಿಗೆ ತೊಂದರೆ ಆಗುತ್ತಿದೆ. ರೈತರಿಗೆ ಕೋವಿ ಪಡೆಯಲು ಪರವಾನಗಿ ನೀಡಿ,ಆನೆಗಳನ್ನು ಕೊಲ್ಲಲು ಅನುಮತಿ ನೀಡಿ’ ಎಂದು ಆಗ್ರಹಿಸಿದ್ದರು. ಆ ಹೇಳಿಕೆ ಖಂಡಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ, ‘ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಾತನಾಡು ವುದು ದುರದೃಷ್ಟಕರ’ ಎಂದಿದ್ದರು. ವಿಪರ್ಯಾಸ ನೋಡಿ: ಈಗ ಈಶ್ವರ ಖಂಡ್ರೆಯವರೇ, ‘ಮಾನವ–ವನ್ಯಜೀವಿ ಸಂಘರ್ಷ ತಡೆಗೆ ಆಯ್ದ ವನ್ಯಜೀವಿಗಳ ಸಂತಾನಶಕ್ತಿ ಹರಣದ ಅಗತ್ಯ ಕುರಿತು ಸಾರ್ವಜನಿಕ ಚರ್ಚೆ ನಡೆಯಬೇಕು’ ಎಂದು ಹೇಳಿದ್ದಾರೆ. ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಬಗೆಗೆ ಖಂಡ್ರೆಯವರು ಜವಾಬ್ದಾರಿಯಿಂದ ಮಾತನಾಡುತ್ತಾರೆ. ಆದರೆ, ಈಗ ಸಮಸ್ಯೆಯ ಮೂಲ ಕಾರಣಗಳನ್ನು ಹುಡುಕಿ ಪರಿಹರಿಸುವ ಕೆಲಸ ಮಾಡದೆ, ಬಿಡುಬೀಸಾಗಿ ಮಾತನಾಡಿದ್ದಾರೆ.</p>.<p>ಮನುಷ್ಯ ಮತ್ತು ವನ್ಯಜೀವಿ ಸಂಘರ್ಷದ ಬಗ್ಗೆ ಯೋಚಿಸುವಾಗ ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆ ‘ವನ್ಯಜೀವಿಗಳು ಕಾಡಿನಿಂದ ನಾಡಿನೆಡೆಗೆ ಬರುವುದು ಏಕೆ? ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆ ದಾಳಿ ಪ್ರಕರಣಗಳು ಹೆಚ್ಚು. ಕಾರಣ ಹುಡುಕಿದರೆ, ಎತ್ತಿನಹೊಳೆ ಯೋಜನೆಯು ಆನೆಗಳ ಆವಾಸ ಸ್ಥಾನವನ್ನು ನಾಶ ಮಾಡಿರುವುದು ಮುನ್ನೆಲೆಗೆ ಬರುತ್ತದೆ. ತುಂಗಾ ಏತ ನೀರಾವರಿ ಯೋಜನೆ ಆನೆ ಕಾರಿಡಾರ್ಗಳನ್ನು ಕತ್ತರಿಸಿದೆ. ಪಶ್ಚಿಮಘಟ್ಟ ಭಾಗದಲ್ಲಿ ಸಾವಿರಾರು ಕಾಫಿ ಪ್ಲಾಂಟರ್ಗಳು ಲಕ್ಷಾಂತರ ಎಕರೆ ಅರಣ್ಯವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಆದ ಮೇಲೆ ಆನೆ ನಾಡಿಗೆ ಬಾರದಿರುತ್ತದೆಯೆ?</p>.<p>ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲೂ ಅಕ್ರಮ ರೆಸಾರ್ಟ್, ಹೋಂ ಸ್ಟೇಗಳು ರೂಪುಗೊಂಡಿವೆ. ಪ್ರವಾಸಿಗರ ಅಕ್ರಮ ಕಾಡು ಪ್ರವೇಶ, ವನ್ಯಜೀವಿಗಳ ಸಹಜ ಜೀವನಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಇದೆಲ್ಲದರಿಂದಾಗಿ ತಮ್ಮ ಮೂಲ ನೆಲೆಯಿಂದ ಹೊರಬಿದ್ದಿರುವ ಆನೆಗಳು ನೀರು–ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಬರುತ್ತಿವೆ.</p>.<p>ಮಲೆನಾಡಿನಲ್ಲಿ ಕಾಟಿಗಳು ಮೇಯುತ್ತಿದ್ದ ಶೋಲಾ ಹುಲ್ಲುಗಾವಲು ಈಗ ಅಕೇಶಿಯಾ ಮರಗಳ ಬೀಡಾಗಿದೆ. ವನ್ಯಜೀವಿಗಳು ಓಡಾಡುವ ದಾರಿ ಗಳನ್ನು ಹೆದ್ದಾರಿಗಳು ಕತ್ತರಿಸಿವೆ. ದೊಡ್ಡ ದೊಡ್ಡ ಯೋಜನೆಗಳು ವನ್ಯಜೀವಿಗಳ ಆವಾಸಸ್ಥಾನಗಳನ್ನು ಛಿದ್ರಗೊಳಿಸಿವೆ. ರೈತರ ಹೊಲ, ಗದ್ದೆಗಳು ಕಾಡುಗಳ ನಡುವಿನ ಸಂಪರ್ಕ ಕೊಂಡಿಯನ್ನೇ ತುಂಡ ರಿಸಿ, ಒಂದೊಂದು ಕಾಡನ್ನೂ ಒಂದೊಂದು ದ್ವೀಪವನ್ನಾಗಿಸಿದೆ. ಹೀಗಾಗಿ, ದಿಕ್ಕೆಟ್ಟ ವನ್ಯಜೀವಿಗಳು ಜನವಸತಿಗಳತ್ತ ಬರುತ್ತಿವೆ.</p>.<p>ಸರ್ಕಾರ ದೊಡ್ಡ ಒತ್ತುವರಿ ಗಳನ್ನು ತೆರವುಗೊಳಿಸುತ್ತಿಲ್ಲ. ವನ್ಯಜೀವಿಗಳ ಆವಾಸ ಸ್ಥಾನಗಳ ರಕ್ಷಣೆಗೆ ಅಗತ್ಯ ಕ್ರಮ ವಹಿಸುತ್ತಿಲ್ಲ. ಈಗ ಸಕಲ ಸಮಸ್ಯೆಗಳಿಗೂ ಮುಗ್ಧ ವನ್ಯಜೀವಿಗಳನ್ನು ಗುರಿಯಾಗಿಸಿ, ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ.</p>.<p>ವನ್ಯಜೀವಿಗಳ ಸಂತಾನಶಕ್ತಿ ಹರಣಗೊಳಿಸುವ ಚಿಂತನೆ ಮಾಡುವ ಮೊದಲು ದೊಡ್ಡ ದೊಡ್ಡ ಕಾಫಿ–ಟೀ ಎಸ್ಟೇಟ್ ಒತ್ತುವರಿಗಳು ತೆರವುಗೊಳ್ಳಲಿ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇರುವ ಅಕ್ರಮ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ಗಳು ತೆರವುಗೊಳ್ಳಲಿ. ಸಂರಕ್ಷಿತ ಪ್ರದೇಶದೊಳಗೆ, ಅದರ ಸುತ್ತಮುತ್ತಲೂ ಅರಣ್ಯ ಇಲಾಖೆ ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಪ್ರವಾಸೋದ್ಯಮ ಚಟುವಟಿಕೆಗಳು ನಿಲ್ಲಲಿ. ಪರಿಸರ ನಾಶ ಮಾಡುವ, ರಾಜಕಾರಣಿಗಳು, ಗುತ್ತಿಗೆದಾರರು, ಅಧಿಕಾರಿಗಳಿಗೆ ಮಾತ್ರ ಬೇಕಾದ ಆಗುಂಬೆ ಸುರಂಗ ಮಾರ್ಗ, ಶೃಂಗೇರಿ ರೈಲು, ಚತುಷ್ಪಥ ಹೆದ್ದಾರಿ, ಶರಾವತಿ ಪಂಪ್ಡ್ ಸ್ಟೋರೇಜ್ ಮೊದಲಾದ ನಿಷ್ಪ್ರಯೋಜಕ ಯೋಜನೆಗಳು ನಿಲ್ಲಲಿ. ಇದೆಲ್ಲಾ ಆಗಿಯೂ ವನ್ಯಜೀವಿ ದಾಳಿ ಹತೋಟಿಗೆ ಬರಲಿಲ್ಲ ಎಂದರೆ ಮತ್ತೆ ಸಂತಾನಶಕ್ತಿ ಹರಣದ ಬಗೆಗೆ ಸರ್ಕಾರ, ಸಾರ್ವಜನಿಕರು ಚಿಂತನೆ ಮಾಡಬಹುದು. </p>.<p>ಹುಲಿ ಮತ್ತು ಚಿರತೆ ದಾಳಿಯಿಂದ ಜನರ ಸಾವುಗಳು ಆದಾಗ ಪ್ರತಿಭಟನೆಗಳು ನಡೆದವು. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯಲ್ಲಿ ಸರ್ಕಾರ ತಾತ್ಕಾಲಿಕವಾಗಿ ಸಫಾರಿ ನಿಲ್ಲಿಸಿತು. ಅಷ್ಟೂ ದಿನಗಳಲ್ಲಿ ಯಾವುದೇ ವನ್ಯಜೀವಿ ದಾಳಿ ಪ್ರಕರಣ ದಾಖಲಾ ಗಲಿಲ್ಲ. ಪರಿಸ್ಥಿತಿ ಸುಧಾರಿಸಿತ್ತು. ಈಗ ಅರಣ್ಯ ಇಲಾಖೆಯು ಸಫಾರಿ ಪುನರಾರಂಭಿಸಿದೆ. ರೈತರು ಪ್ರತಿಭಟನೆ ನಡೆಸುತ್ತಿ ದ್ದಾರೆ. ನೆಲ ಮೂಲದ ಜನರ ಅನುಭವಜನ್ಯ ವಿವೇಕದ ಮಾತುಗಳನ್ನು ಕೇಳಿಸಿಕೊಳ್ಳಲು ಆಡಳಿತ ನಡೆಸುವವರಿಗೆ ಆಸಕ್ತಿಯಿಲ್ಲ.</p>.<p>ಮನುಷ್ಯರು ಕಾಡಿನ ತಂಟೆಗೆ ಹೋಗುವುದು ನಿಂತರೆ ವನ್ಯಜೀವಿಗಳು ನಾಡಿನ ತಂಟೆಗೆ ಬರುವುದು ಕಡಿಮೆ ಆಗುತ್ತದೆ.</p>.<p>ಭಾರತ ಸಂವಿಧಾನದ 51ಎ(ಜಿ) ಪ್ರಕಾರ, ‘ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಹಾಗೂ ಅಭಿವೃದ್ಧಿ ಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸು ವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ’. ಇದನ್ನು ಅಧಿಕಾರದಲ್ಲಿ ಇರುವವರಿಗೆ ನೆನಪಿಸಬೇಕಿದೆ. ಪ್ರಾಣಿಗಳಿಗೂ ಜೀವಿಸುವ ಹಕ್ಕಿರುವುದನ್ನು ಮರೆಯಬಾರದು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪರಿಸರ ಮತ್ತು ವನ್ಯಜೀವಿ ನಾಶ ತೀವ್ರಗತಿಯಲ್ಲಿ ಇರುವ ಸಂದರ್ಭದಲ್ಲಿ, ವನ್ಯಜೀವಿಗಳನ್ನು ಗುಂಡು ಹೊಡೆದು ಕೊಲ್ಲುವ, ಅವುಗಳ ಸಂತಾನಶಕ್ತಿ ಹರಣ ಮಾಡುವ, ಸ್ಥಳಾಂತರಿಸುವ ಚರ್ಚೆಗಳು, ಚಿಂತನೆಗಳು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಂದಲೇ ನಡೆಯುತ್ತಿವೆ.</p>.<p>ಕೆಲವು ತಿಂಗಳ ಹಿಂದೆ ಆನೆ ದಾಳಿಯಿಂದ ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟರು. ಆಗ, ಮಾಜಿ ಶಾಸಕ ಡಿ.ಎನ್. ಜೀವರಾಜ್, ‘20 ಲಕ್ಷ ರೂಪಾಯಿ ಕೊಡ್ತೀವಿ, ಆನೆ ಹೊಡೆಯೋದಕ್ಕೆ ಅನುಮತಿ ಕೊಡಿ’ ಎಂದು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಎದುರು ಹೇಳಿದ್ದರು. ಆ ವಿಡಿಯೊ ವೈರಲ್ ಆಗಿತ್ತು. ಕಳೆದ ವರ್ಷ ವಿಧಾನಸಭಾ ಅಧಿವೇಶನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ‘ಆನೆಗಳಿಂದ ಕಾಡಂಚಿನ ಜನರಿಗೆ ತೊಂದರೆ ಆಗುತ್ತಿದೆ. ರೈತರಿಗೆ ಕೋವಿ ಪಡೆಯಲು ಪರವಾನಗಿ ನೀಡಿ,ಆನೆಗಳನ್ನು ಕೊಲ್ಲಲು ಅನುಮತಿ ನೀಡಿ’ ಎಂದು ಆಗ್ರಹಿಸಿದ್ದರು. ಆ ಹೇಳಿಕೆ ಖಂಡಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ, ‘ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಾತನಾಡು ವುದು ದುರದೃಷ್ಟಕರ’ ಎಂದಿದ್ದರು. ವಿಪರ್ಯಾಸ ನೋಡಿ: ಈಗ ಈಶ್ವರ ಖಂಡ್ರೆಯವರೇ, ‘ಮಾನವ–ವನ್ಯಜೀವಿ ಸಂಘರ್ಷ ತಡೆಗೆ ಆಯ್ದ ವನ್ಯಜೀವಿಗಳ ಸಂತಾನಶಕ್ತಿ ಹರಣದ ಅಗತ್ಯ ಕುರಿತು ಸಾರ್ವಜನಿಕ ಚರ್ಚೆ ನಡೆಯಬೇಕು’ ಎಂದು ಹೇಳಿದ್ದಾರೆ. ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಬಗೆಗೆ ಖಂಡ್ರೆಯವರು ಜವಾಬ್ದಾರಿಯಿಂದ ಮಾತನಾಡುತ್ತಾರೆ. ಆದರೆ, ಈಗ ಸಮಸ್ಯೆಯ ಮೂಲ ಕಾರಣಗಳನ್ನು ಹುಡುಕಿ ಪರಿಹರಿಸುವ ಕೆಲಸ ಮಾಡದೆ, ಬಿಡುಬೀಸಾಗಿ ಮಾತನಾಡಿದ್ದಾರೆ.</p>.<p>ಮನುಷ್ಯ ಮತ್ತು ವನ್ಯಜೀವಿ ಸಂಘರ್ಷದ ಬಗ್ಗೆ ಯೋಚಿಸುವಾಗ ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆ ‘ವನ್ಯಜೀವಿಗಳು ಕಾಡಿನಿಂದ ನಾಡಿನೆಡೆಗೆ ಬರುವುದು ಏಕೆ? ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆ ದಾಳಿ ಪ್ರಕರಣಗಳು ಹೆಚ್ಚು. ಕಾರಣ ಹುಡುಕಿದರೆ, ಎತ್ತಿನಹೊಳೆ ಯೋಜನೆಯು ಆನೆಗಳ ಆವಾಸ ಸ್ಥಾನವನ್ನು ನಾಶ ಮಾಡಿರುವುದು ಮುನ್ನೆಲೆಗೆ ಬರುತ್ತದೆ. ತುಂಗಾ ಏತ ನೀರಾವರಿ ಯೋಜನೆ ಆನೆ ಕಾರಿಡಾರ್ಗಳನ್ನು ಕತ್ತರಿಸಿದೆ. ಪಶ್ಚಿಮಘಟ್ಟ ಭಾಗದಲ್ಲಿ ಸಾವಿರಾರು ಕಾಫಿ ಪ್ಲಾಂಟರ್ಗಳು ಲಕ್ಷಾಂತರ ಎಕರೆ ಅರಣ್ಯವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಆದ ಮೇಲೆ ಆನೆ ನಾಡಿಗೆ ಬಾರದಿರುತ್ತದೆಯೆ?</p>.<p>ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲೂ ಅಕ್ರಮ ರೆಸಾರ್ಟ್, ಹೋಂ ಸ್ಟೇಗಳು ರೂಪುಗೊಂಡಿವೆ. ಪ್ರವಾಸಿಗರ ಅಕ್ರಮ ಕಾಡು ಪ್ರವೇಶ, ವನ್ಯಜೀವಿಗಳ ಸಹಜ ಜೀವನಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಇದೆಲ್ಲದರಿಂದಾಗಿ ತಮ್ಮ ಮೂಲ ನೆಲೆಯಿಂದ ಹೊರಬಿದ್ದಿರುವ ಆನೆಗಳು ನೀರು–ಆಹಾರ ಅರಸಿ ಜನವಸತಿ ಪ್ರದೇಶಗಳತ್ತ ಬರುತ್ತಿವೆ.</p>.<p>ಮಲೆನಾಡಿನಲ್ಲಿ ಕಾಟಿಗಳು ಮೇಯುತ್ತಿದ್ದ ಶೋಲಾ ಹುಲ್ಲುಗಾವಲು ಈಗ ಅಕೇಶಿಯಾ ಮರಗಳ ಬೀಡಾಗಿದೆ. ವನ್ಯಜೀವಿಗಳು ಓಡಾಡುವ ದಾರಿ ಗಳನ್ನು ಹೆದ್ದಾರಿಗಳು ಕತ್ತರಿಸಿವೆ. ದೊಡ್ಡ ದೊಡ್ಡ ಯೋಜನೆಗಳು ವನ್ಯಜೀವಿಗಳ ಆವಾಸಸ್ಥಾನಗಳನ್ನು ಛಿದ್ರಗೊಳಿಸಿವೆ. ರೈತರ ಹೊಲ, ಗದ್ದೆಗಳು ಕಾಡುಗಳ ನಡುವಿನ ಸಂಪರ್ಕ ಕೊಂಡಿಯನ್ನೇ ತುಂಡ ರಿಸಿ, ಒಂದೊಂದು ಕಾಡನ್ನೂ ಒಂದೊಂದು ದ್ವೀಪವನ್ನಾಗಿಸಿದೆ. ಹೀಗಾಗಿ, ದಿಕ್ಕೆಟ್ಟ ವನ್ಯಜೀವಿಗಳು ಜನವಸತಿಗಳತ್ತ ಬರುತ್ತಿವೆ.</p>.<p>ಸರ್ಕಾರ ದೊಡ್ಡ ಒತ್ತುವರಿ ಗಳನ್ನು ತೆರವುಗೊಳಿಸುತ್ತಿಲ್ಲ. ವನ್ಯಜೀವಿಗಳ ಆವಾಸ ಸ್ಥಾನಗಳ ರಕ್ಷಣೆಗೆ ಅಗತ್ಯ ಕ್ರಮ ವಹಿಸುತ್ತಿಲ್ಲ. ಈಗ ಸಕಲ ಸಮಸ್ಯೆಗಳಿಗೂ ಮುಗ್ಧ ವನ್ಯಜೀವಿಗಳನ್ನು ಗುರಿಯಾಗಿಸಿ, ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ.</p>.<p>ವನ್ಯಜೀವಿಗಳ ಸಂತಾನಶಕ್ತಿ ಹರಣಗೊಳಿಸುವ ಚಿಂತನೆ ಮಾಡುವ ಮೊದಲು ದೊಡ್ಡ ದೊಡ್ಡ ಕಾಫಿ–ಟೀ ಎಸ್ಟೇಟ್ ಒತ್ತುವರಿಗಳು ತೆರವುಗೊಳ್ಳಲಿ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇರುವ ಅಕ್ರಮ ಹೋಂ ಸ್ಟೇ, ರೆಸಾರ್ಟ್, ಹೋಟೆಲ್ಗಳು ತೆರವುಗೊಳ್ಳಲಿ. ಸಂರಕ್ಷಿತ ಪ್ರದೇಶದೊಳಗೆ, ಅದರ ಸುತ್ತಮುತ್ತಲೂ ಅರಣ್ಯ ಇಲಾಖೆ ಮತ್ತು ಖಾಸಗಿ ವ್ಯಕ್ತಿಗಳು ನಡೆಸುವ ಪ್ರವಾಸೋದ್ಯಮ ಚಟುವಟಿಕೆಗಳು ನಿಲ್ಲಲಿ. ಪರಿಸರ ನಾಶ ಮಾಡುವ, ರಾಜಕಾರಣಿಗಳು, ಗುತ್ತಿಗೆದಾರರು, ಅಧಿಕಾರಿಗಳಿಗೆ ಮಾತ್ರ ಬೇಕಾದ ಆಗುಂಬೆ ಸುರಂಗ ಮಾರ್ಗ, ಶೃಂಗೇರಿ ರೈಲು, ಚತುಷ್ಪಥ ಹೆದ್ದಾರಿ, ಶರಾವತಿ ಪಂಪ್ಡ್ ಸ್ಟೋರೇಜ್ ಮೊದಲಾದ ನಿಷ್ಪ್ರಯೋಜಕ ಯೋಜನೆಗಳು ನಿಲ್ಲಲಿ. ಇದೆಲ್ಲಾ ಆಗಿಯೂ ವನ್ಯಜೀವಿ ದಾಳಿ ಹತೋಟಿಗೆ ಬರಲಿಲ್ಲ ಎಂದರೆ ಮತ್ತೆ ಸಂತಾನಶಕ್ತಿ ಹರಣದ ಬಗೆಗೆ ಸರ್ಕಾರ, ಸಾರ್ವಜನಿಕರು ಚಿಂತನೆ ಮಾಡಬಹುದು. </p>.<p>ಹುಲಿ ಮತ್ತು ಚಿರತೆ ದಾಳಿಯಿಂದ ಜನರ ಸಾವುಗಳು ಆದಾಗ ಪ್ರತಿಭಟನೆಗಳು ನಡೆದವು. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯಲ್ಲಿ ಸರ್ಕಾರ ತಾತ್ಕಾಲಿಕವಾಗಿ ಸಫಾರಿ ನಿಲ್ಲಿಸಿತು. ಅಷ್ಟೂ ದಿನಗಳಲ್ಲಿ ಯಾವುದೇ ವನ್ಯಜೀವಿ ದಾಳಿ ಪ್ರಕರಣ ದಾಖಲಾ ಗಲಿಲ್ಲ. ಪರಿಸ್ಥಿತಿ ಸುಧಾರಿಸಿತ್ತು. ಈಗ ಅರಣ್ಯ ಇಲಾಖೆಯು ಸಫಾರಿ ಪುನರಾರಂಭಿಸಿದೆ. ರೈತರು ಪ್ರತಿಭಟನೆ ನಡೆಸುತ್ತಿ ದ್ದಾರೆ. ನೆಲ ಮೂಲದ ಜನರ ಅನುಭವಜನ್ಯ ವಿವೇಕದ ಮಾತುಗಳನ್ನು ಕೇಳಿಸಿಕೊಳ್ಳಲು ಆಡಳಿತ ನಡೆಸುವವರಿಗೆ ಆಸಕ್ತಿಯಿಲ್ಲ.</p>.<p>ಮನುಷ್ಯರು ಕಾಡಿನ ತಂಟೆಗೆ ಹೋಗುವುದು ನಿಂತರೆ ವನ್ಯಜೀವಿಗಳು ನಾಡಿನ ತಂಟೆಗೆ ಬರುವುದು ಕಡಿಮೆ ಆಗುತ್ತದೆ.</p>.<p>ಭಾರತ ಸಂವಿಧಾನದ 51ಎ(ಜಿ) ಪ್ರಕಾರ, ‘ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಹಾಗೂ ಅಭಿವೃದ್ಧಿ ಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸು ವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ’. ಇದನ್ನು ಅಧಿಕಾರದಲ್ಲಿ ಇರುವವರಿಗೆ ನೆನಪಿಸಬೇಕಿದೆ. ಪ್ರಾಣಿಗಳಿಗೂ ಜೀವಿಸುವ ಹಕ್ಕಿರುವುದನ್ನು ಮರೆಯಬಾರದು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>