<blockquote><em>ಹೆಣ್ಣನ್ನು ದೇವಿ- ಅಥವಾ ತಾಯಿ ಎಂದು ಗೌರವಿಸುವುದರಿಂದ ಉಪಯೋಗವಿಲ್ಲ. ಗೃಹಕೃತ್ಯಗಳ ಹೊರತಾಗಿ ಮಹಿಳೆಯ ಸ್ವಂತಿಕೆ ಗುರ್ತಿಸುವ ಪ್ರಯತ್ನಗಳು ಅಗತ್ಯ.</em></blockquote>.<p>ಉತ್ತರಪ್ರದೇಶದ ಜಿಲ್ಲೆಯೊಂದರಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವು ತಾಳಲಾರದೆ ಚಾಕುವಿನಿಂದ ಹೊಟ್ಟೆ ಕೊಯ್ದುಕೊಂಡು ಮಗುವನ್ನು ಹೊರತೆಗೆಯಲು ಯತ್ನಿಸಿದ ಘಟನೆಯನ್ನು ಪತ್ರಿಕೆಗಳಲ್ಲಿ ಓದಿ ಮನಸ್ಸಿಗೆ ಖೇದವಾಯಿತು. ಆ ಘಟನೆ ನಡೆದ ಸಂದರ್ಭದಲ್ಲೇ ಬಳ್ಳಾರಿ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿ ಯನ್ನು ಲೈಂಗಿಕವಾಗಿ ಶೋಷಿಸಿ ಅಟ್ಟಹಾಸ ಮೆರೆದಿದ್ದಾನೆ. ಈ ಘಟನೆಗಳು ಮಹಿಳೆಯರ ಸ್ಥಿತಿಗತಿ ಮತ್ತು ಅವರ ಮೇಲಾಗುತ್ತಿರುವ ಶೋಷಣೆಗೆ ಜ್ವಲಂತ ಸಾಕ್ಷಿಯಾಗಿವೆ.</p><p>ಇವತ್ತಿಗೂ ಅಡುಗೆ ಮತ್ತಿತರ ಮನೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಬಗ್ಗೆ ಸಮಾಜ ಮತ್ತು ಕುಟುಂಬಗಳಲ್ಲಿ ಗೌರವದ ವಾತಾವರಣವಿಲ್ಲ. ಮನೆಕೆಲಸ ಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಅಸಡ್ಡೆಯಿಂದ ಕಾಣಲಾಗುತ್ತಿದೆ. ವೃತ್ತಿಯಲ್ಲಿರುವ ಮಹಿಳೆಯರೊಂದಿಗೆ ಹೋಲಿಸಿ ಮನೆಯ ಗೃಹಿಣಿಯರನ್ನು ಅಪ್ರಯೋಜಕರು ಎನ್ನುವ ಅರ್ಥದಲ್ಲಿ ನೋಡಲಾಗುತ್ತಿದೆ. ಅಡುಗೆ ಹಾಗೂ ಮನೆಯ ಇನ್ನಿತರ ಕೆಲಸಗಳು ಹೊರಜಗತ್ತಿನ ಬೇರೆ ಕೆಲಸ ಗಳಂತೆ ಶ್ರಮದಾಯಕ ಕಾರ್ಯಗಳಾದರೂ, ಅವುಗಳಿಗೆ ಪ್ರಾಮುಖ್ಯತೆ ಇಲ್ಲವಾಗಿದೆ.</p><p>ಕುಟುಂಬ ಘಟಕದಲ್ಲಿ ಮಹಿಳೆಯರದು ಎಂದಿಗೂ ತ್ಯಾಗ ಮತ್ತು ಬಲಿದಾನದ ಪಾತ್ರ ಎಂದು ಬಿಂಬಿಸಲಾಗುತ್ತಿದೆ. ಸೀತೆ, ಸಾವಿತ್ರಿ, ಮಂಡೋದರಿ, ಅಹಲ್ಯೆ ಮುಂತಾದ ವರನ್ನು ತ್ಯಾಗ ಮತ್ತು ಬಲಿದಾನಕ್ಕೆ ಶ್ರೇಷ್ಠ ಉದಾಹರಣೆಗಳಾಗಿ ಜನರ ನೆನಪಿನಲ್ಲಿ ಅಚ್ಚೊತ್ತಲಾಗಿದೆ. ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಈ ಪಾತ್ರಗಳನ್ನು ಮಾದರಿಯಾಗಿ ಮಹಿಳೆಯರಿಗೆ ಬೋಧಿಸಲಾಗುತ್ತಿದೆ. ಗಂಡಾಳ್ವಿಕೆಯನ್ನು ಧಿಕ್ಕರಿಸುವ ಎಲ್ಲಮ್ಮ, ಕಾಳಮ್ಮ, ದುರ್ಗಮ್ಮ, ಹುಲಿಗೆಮ್ಮ ದೇವತೆಗಳು ಮಹಿಳೆ ಯರಿಗೆ ಆದರ್ಶಪ್ರಾಯರು ಮತ್ತು ಅನುಕರಣೀಯರೂ ಆಗಿಲ್ಲದಿರುವುದು ಅಚ್ಚರಿಯ ಸಂಗತಿ.</p><p>ಕೆಲವು ಮಡಿವಂತ ಕುಟುಂಬಗಳಲ್ಲಿ ಮನೆಯ ಮಹಿಳಾ ಸದಸ್ಯರನ್ನು ಈಗಲೂ ಅಸ್ಪೃಶ್ಯರಂತೆ ನಡೆಸಿಕೊಳ್ಳಲಾಗುತ್ತದೆ. ಮುಟ್ಟಾದ ಸಂದರ್ಭದಲ್ಲಿ ಮಹಿಳೆಯರಿಗೆ ಅಡುಗೆಮನೆ ಮತ್ತು ದೇವರಕೋಣೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಮನೆಯ ಸದಸ್ಯರನ್ನೂ ಮುಟ್ಟಿಸಿಕೊಳ್ಳದಂತೆ ಪ್ರತ್ಯೇಕವಾಗಿ ವಾಸಿಸಬೇಕು. ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ.</p><p>ಹೆಚ್ಚಿನ ಪಾಲಕರು ಹೆಣ್ಣುಮಕ್ಕಳ ಶಿಕ್ಷಣವನ್ನು ನಿರ್ಲಕ್ಷಿಸಿ ಗಂಡುಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡುವುದು ಸಾಮಾನ್ಯ ಎನ್ನುವಂತಾಗಿದೆ. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯ ಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳಿಂದ ಹಾಗೂ ಬೋಧಕರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ನಿರಂತರವಾಗಿ ಮುಂದುವರಿದಿದೆ. ವೃತ್ತಿ ಕ್ಷೇತ್ರ ದಲ್ಲಿ ಮಹಿಳೆಯರನ್ನು ಎರಡನೇ ದರ್ಜೆ ನಾಗರಿಕರಂತೆ ನೋಡಲಾಗುತ್ತಿದೆ. ಅದೆಷ್ಟೋ ಕ್ಷೇತ್ರಗಳಲ್ಲಿ ಮಹಿಳೆಯರು ಬೌದ್ಧಿಕ ವಾಗಿ ಮತ್ತು ವೈಚಾರಿಕವಾಗಿ ಹಿಂದುಳಿದವರು ಎನ್ನುವ ಭಾವನೆ ಬಲವಾಗಿದೆ. ಮಹಿಳಾ ಶೋಷಣೆಯು ನಾಗರಿಕ ಮತ್ತು ಸುಸಂಸ್ಕೃತ ಸಮಾಜದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರು ವುದು ವ್ಯಂಗ್ಯವಾದರೂ ಕಟುಸತ್ಯ. ಪ್ರತಿಭಟಿಸಿದರೆ ಕುಟುಂಬ ಘಟಕ ಒಡೆದು ಛಿದ್ರವಾಗುವುದೆಂಬ ಭಯ ವಿದ್ಯಾವಂತ ಮಹಿಳೆಯರು ಶೋಷಣೆ ಯನ್ನು ಸಹಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ಹಿಂದುಳಿದ ಮತ್ತು ಅನಕ್ಷ ರಸ್ಥ ಸಮಾಜದಲ್ಲಿನ ಮಹಿಳೆಯರಲ್ಲಿರುವ ಪ್ರತಿಭಟನೆಯ ಧಾಡಸೀತನವನ್ನು ಸುಸಂಸ್ಕೃತ ಸಮಾಜದ ಮಹಿಳೆಯರು ಇನ್ನೂ ಮೈಗೂಡಿಸಿಕೊಂಡಿಲ್ಲ.</p><p>ಶತಮಾನ ಕಳೆದರೂ ಸಿನಿಮಾ ಮಾಧ್ಯಮ ಪುರುಷ ಪಾರಮ್ಯದಿಂದ ಹೊರಬಂದಿಲ್ಲ. ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳನ್ನು ಅಂಗಾಂಗ ಪ್ರದರ್ಶನಕ್ಕೆ ಇಲ್ಲವೇ ಶೋಷಣೆ ಗೊಳಗಾಗುವುದಕ್ಕೆ ಸೀಮಿತಗೊಳಿಸಲಾಗುತ್ತಿದೆ. ಸಿನಿಮಾ ಕ್ಷೇತ್ರದಲ್ಲಿ ಮಹಿಳಾ ಕಲಾವಿದರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ‘ಮೀ–ಟೂ’ ಅಭಿಯಾನ ಅನಾವರಣ ಗೊಳಿಸಿದೆ. ಗುಪ್ತವಾಗಿ ನಡೆಯುತ್ತಿದ್ದ ದೌರ್ಜನ್ಯ ಕೆಲವು ಧೈರ್ಯವಂತ ನಟಿಯರಿಂದ ಬೆಳಕಿಗೆ ಬಂತು. ದುರಂತ ವೆಂದರೆ, ಪುರುಷ ಕಲಾವಿದರ ಭಂಡಗುಣ ಹೊರಗೆಳೆದ ಕಲಾವಿದೆಯರನ್ನು ಚಿತ್ರೋದ್ಯಮದ ಮಂದಿಯೇ ಹೀನಾಯ ವಾಗಿ ನಡೆಸಿಕೊಂಡರು.</p><p>ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದವರ ಪಟ್ಟಿಯಲ್ಲಿ ಪುರುಷರದ್ದೇ ಸಿಂಹಪಾಲಿದೆ. ಮಹಿಳೆಯೊಬ್ಬರನ್ನು ಆ ಸ್ಥಾನದಲ್ಲಿ ನೋಡಲು ಐವತ್ತು ವರ್ಷ ಕಾಯಬೇಕಾಯಿತು. ಇದುವರೆಗಿನ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಹೆಸರುಗಳ ಪಟ್ಟಿಯಲ್ಲಿ ಲೇಖಕಿಯರ ಸಂಖ್ಯೆ ಬರೀ ಐದು ಮಾತ್ರ. ‘ಮಹಿಳೆಯ ಪಾಲಿಗೆ ಬರವಣಿಗೆ ಏಕಕಾಲಕ್ಕೆ ಚರಿತ್ರೆಯನ್ನೂ ಮತ್ತು ವರ್ತಮಾನದ ಆತಂಕಗಳನ್ನೂ ಎದುರುಹಾಕಿಕೊಂಡ ನಿರಂತರ ಹೋರಾಟದಂತೆಯೇ ಸರಿ. ತನ್ನ ಪರಿಸರದ ಕಟುಸಂಪ್ರದಾಯ, ಆಚರಣೆ, ನಂಬಿಕೆ, ಮೌಢ್ಯಗಳೊಂದಿಗೆ ಧಾರ್ಮಿಕ, ಕೌಟುಂಬಿಕ ದಬ್ಬಾಳಿಕೆಯನ್ನು ಪ್ರಶ್ನಿಸುತ್ತಲೇ ಆಕೆಯೊಳಗಿನ ಲೇಖಕಿ ಶತಮಾನಗಳ ಪುರುಷ ಪ್ರಧಾನ ಯಜಮಾನ್ಯವನ್ನು ಒಡೆಯಬೇಕಾಗುತ್ತದೆ. ಹಾಗಾಗಿ, ಬರವಣಿಗೆ ಎನ್ನುವುದು ಮಹಿಳೆಯ ಪಾಲಿಗೆ ದಣಿವರಿಯದ ಹಾದಿ’ ಎನ್ನುತ್ತಾರೆ ಇಂಗ್ಲಿಷ್ನಲ್ಲಿ ಬರೆಯುವ ಲೈಲಾ ಅಹ್ಮದ್.</p><p>ಅಮೆರಿಕನ್ ಬರಹಗಾರ್ತಿ ಮಾಯಾ ಏಂಜೆಲೊ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸಲು ಹೇಳಿದ ಮಾತುಗಳು ಹೀಗಿವೆ: ‘ನಮಗೆ ಸೋಲುಗಳು ಎದುರಾಗಬಹುದು. ನಾವು ಎದೆಗುಂದಬಾರದು. ವಜ್ರವಾಗಲು ಹೆಚ್ಚು ಸಮಯ, ಒತ್ತಡ ಎರಡನ್ನೂ ತಡೆದುಕೊಳ್ಳಬೇಕು. ಅದಕ್ಕಿಂತ ಕಡಿಮೆ ಸಮಯವಾದರೆ ಸ್ಪಟಿಕವಾಗುವಿರಿ. ಅದಕ್ಕಿಂತಲೂ ಕಡಿಮೆ ಸಮಯ ವಾದರೆ ಇದ್ದಿಲು. ಅದಕ್ಕಿಂತ ಕಡಿಮೆ ಸಮಯವಾದರೆ ಕೊಳೆತ ಎಲೆ. ಅದಕ್ಕಿಂತಲೂ ಕಡಿಮೆ ಸಮಯವಾದರೆ ಬರಿ ಕಸ’. ಮಹಿಳಾ ಶೋಷಣೆ ಅವ್ಯಾಹತವಾಗಿ ನಡೆಯುತ್ತಿರುವ ಹೊತ್ತಿನಲ್ಲಿ ಮಹಿಳೆ ವಜ್ರವಾಗುವುದರತ್ತ ಹೆಜ್ಜೆ ಹಾಕಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote><em>ಹೆಣ್ಣನ್ನು ದೇವಿ- ಅಥವಾ ತಾಯಿ ಎಂದು ಗೌರವಿಸುವುದರಿಂದ ಉಪಯೋಗವಿಲ್ಲ. ಗೃಹಕೃತ್ಯಗಳ ಹೊರತಾಗಿ ಮಹಿಳೆಯ ಸ್ವಂತಿಕೆ ಗುರ್ತಿಸುವ ಪ್ರಯತ್ನಗಳು ಅಗತ್ಯ.</em></blockquote>.<p>ಉತ್ತರಪ್ರದೇಶದ ಜಿಲ್ಲೆಯೊಂದರಲ್ಲಿ ಗರ್ಭಿಣಿಯೊಬ್ಬಳು ಹೆರಿಗೆ ನೋವು ತಾಳಲಾರದೆ ಚಾಕುವಿನಿಂದ ಹೊಟ್ಟೆ ಕೊಯ್ದುಕೊಂಡು ಮಗುವನ್ನು ಹೊರತೆಗೆಯಲು ಯತ್ನಿಸಿದ ಘಟನೆಯನ್ನು ಪತ್ರಿಕೆಗಳಲ್ಲಿ ಓದಿ ಮನಸ್ಸಿಗೆ ಖೇದವಾಯಿತು. ಆ ಘಟನೆ ನಡೆದ ಸಂದರ್ಭದಲ್ಲೇ ಬಳ್ಳಾರಿ ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿನಿ ಯನ್ನು ಲೈಂಗಿಕವಾಗಿ ಶೋಷಿಸಿ ಅಟ್ಟಹಾಸ ಮೆರೆದಿದ್ದಾನೆ. ಈ ಘಟನೆಗಳು ಮಹಿಳೆಯರ ಸ್ಥಿತಿಗತಿ ಮತ್ತು ಅವರ ಮೇಲಾಗುತ್ತಿರುವ ಶೋಷಣೆಗೆ ಜ್ವಲಂತ ಸಾಕ್ಷಿಯಾಗಿವೆ.</p><p>ಇವತ್ತಿಗೂ ಅಡುಗೆ ಮತ್ತಿತರ ಮನೆಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಬಗ್ಗೆ ಸಮಾಜ ಮತ್ತು ಕುಟುಂಬಗಳಲ್ಲಿ ಗೌರವದ ವಾತಾವರಣವಿಲ್ಲ. ಮನೆಕೆಲಸ ಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಅಸಡ್ಡೆಯಿಂದ ಕಾಣಲಾಗುತ್ತಿದೆ. ವೃತ್ತಿಯಲ್ಲಿರುವ ಮಹಿಳೆಯರೊಂದಿಗೆ ಹೋಲಿಸಿ ಮನೆಯ ಗೃಹಿಣಿಯರನ್ನು ಅಪ್ರಯೋಜಕರು ಎನ್ನುವ ಅರ್ಥದಲ್ಲಿ ನೋಡಲಾಗುತ್ತಿದೆ. ಅಡುಗೆ ಹಾಗೂ ಮನೆಯ ಇನ್ನಿತರ ಕೆಲಸಗಳು ಹೊರಜಗತ್ತಿನ ಬೇರೆ ಕೆಲಸ ಗಳಂತೆ ಶ್ರಮದಾಯಕ ಕಾರ್ಯಗಳಾದರೂ, ಅವುಗಳಿಗೆ ಪ್ರಾಮುಖ್ಯತೆ ಇಲ್ಲವಾಗಿದೆ.</p><p>ಕುಟುಂಬ ಘಟಕದಲ್ಲಿ ಮಹಿಳೆಯರದು ಎಂದಿಗೂ ತ್ಯಾಗ ಮತ್ತು ಬಲಿದಾನದ ಪಾತ್ರ ಎಂದು ಬಿಂಬಿಸಲಾಗುತ್ತಿದೆ. ಸೀತೆ, ಸಾವಿತ್ರಿ, ಮಂಡೋದರಿ, ಅಹಲ್ಯೆ ಮುಂತಾದ ವರನ್ನು ತ್ಯಾಗ ಮತ್ತು ಬಲಿದಾನಕ್ಕೆ ಶ್ರೇಷ್ಠ ಉದಾಹರಣೆಗಳಾಗಿ ಜನರ ನೆನಪಿನಲ್ಲಿ ಅಚ್ಚೊತ್ತಲಾಗಿದೆ. ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಈ ಪಾತ್ರಗಳನ್ನು ಮಾದರಿಯಾಗಿ ಮಹಿಳೆಯರಿಗೆ ಬೋಧಿಸಲಾಗುತ್ತಿದೆ. ಗಂಡಾಳ್ವಿಕೆಯನ್ನು ಧಿಕ್ಕರಿಸುವ ಎಲ್ಲಮ್ಮ, ಕಾಳಮ್ಮ, ದುರ್ಗಮ್ಮ, ಹುಲಿಗೆಮ್ಮ ದೇವತೆಗಳು ಮಹಿಳೆ ಯರಿಗೆ ಆದರ್ಶಪ್ರಾಯರು ಮತ್ತು ಅನುಕರಣೀಯರೂ ಆಗಿಲ್ಲದಿರುವುದು ಅಚ್ಚರಿಯ ಸಂಗತಿ.</p><p>ಕೆಲವು ಮಡಿವಂತ ಕುಟುಂಬಗಳಲ್ಲಿ ಮನೆಯ ಮಹಿಳಾ ಸದಸ್ಯರನ್ನು ಈಗಲೂ ಅಸ್ಪೃಶ್ಯರಂತೆ ನಡೆಸಿಕೊಳ್ಳಲಾಗುತ್ತದೆ. ಮುಟ್ಟಾದ ಸಂದರ್ಭದಲ್ಲಿ ಮಹಿಳೆಯರಿಗೆ ಅಡುಗೆಮನೆ ಮತ್ತು ದೇವರಕೋಣೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ಮನೆಯ ಸದಸ್ಯರನ್ನೂ ಮುಟ್ಟಿಸಿಕೊಳ್ಳದಂತೆ ಪ್ರತ್ಯೇಕವಾಗಿ ವಾಸಿಸಬೇಕು. ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ.</p><p>ಹೆಚ್ಚಿನ ಪಾಲಕರು ಹೆಣ್ಣುಮಕ್ಕಳ ಶಿಕ್ಷಣವನ್ನು ನಿರ್ಲಕ್ಷಿಸಿ ಗಂಡುಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡುವುದು ಸಾಮಾನ್ಯ ಎನ್ನುವಂತಾಗಿದೆ. ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯ ಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳಿಂದ ಹಾಗೂ ಬೋಧಕರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆ ನಿರಂತರವಾಗಿ ಮುಂದುವರಿದಿದೆ. ವೃತ್ತಿ ಕ್ಷೇತ್ರ ದಲ್ಲಿ ಮಹಿಳೆಯರನ್ನು ಎರಡನೇ ದರ್ಜೆ ನಾಗರಿಕರಂತೆ ನೋಡಲಾಗುತ್ತಿದೆ. ಅದೆಷ್ಟೋ ಕ್ಷೇತ್ರಗಳಲ್ಲಿ ಮಹಿಳೆಯರು ಬೌದ್ಧಿಕ ವಾಗಿ ಮತ್ತು ವೈಚಾರಿಕವಾಗಿ ಹಿಂದುಳಿದವರು ಎನ್ನುವ ಭಾವನೆ ಬಲವಾಗಿದೆ. ಮಹಿಳಾ ಶೋಷಣೆಯು ನಾಗರಿಕ ಮತ್ತು ಸುಸಂಸ್ಕೃತ ಸಮಾಜದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿರು ವುದು ವ್ಯಂಗ್ಯವಾದರೂ ಕಟುಸತ್ಯ. ಪ್ರತಿಭಟಿಸಿದರೆ ಕುಟುಂಬ ಘಟಕ ಒಡೆದು ಛಿದ್ರವಾಗುವುದೆಂಬ ಭಯ ವಿದ್ಯಾವಂತ ಮಹಿಳೆಯರು ಶೋಷಣೆ ಯನ್ನು ಸಹಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ಹಿಂದುಳಿದ ಮತ್ತು ಅನಕ್ಷ ರಸ್ಥ ಸಮಾಜದಲ್ಲಿನ ಮಹಿಳೆಯರಲ್ಲಿರುವ ಪ್ರತಿಭಟನೆಯ ಧಾಡಸೀತನವನ್ನು ಸುಸಂಸ್ಕೃತ ಸಮಾಜದ ಮಹಿಳೆಯರು ಇನ್ನೂ ಮೈಗೂಡಿಸಿಕೊಂಡಿಲ್ಲ.</p><p>ಶತಮಾನ ಕಳೆದರೂ ಸಿನಿಮಾ ಮಾಧ್ಯಮ ಪುರುಷ ಪಾರಮ್ಯದಿಂದ ಹೊರಬಂದಿಲ್ಲ. ಸಿನಿಮಾಗಳಲ್ಲಿ ಮಹಿಳಾ ಪಾತ್ರಗಳನ್ನು ಅಂಗಾಂಗ ಪ್ರದರ್ಶನಕ್ಕೆ ಇಲ್ಲವೇ ಶೋಷಣೆ ಗೊಳಗಾಗುವುದಕ್ಕೆ ಸೀಮಿತಗೊಳಿಸಲಾಗುತ್ತಿದೆ. ಸಿನಿಮಾ ಕ್ಷೇತ್ರದಲ್ಲಿ ಮಹಿಳಾ ಕಲಾವಿದರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ‘ಮೀ–ಟೂ’ ಅಭಿಯಾನ ಅನಾವರಣ ಗೊಳಿಸಿದೆ. ಗುಪ್ತವಾಗಿ ನಡೆಯುತ್ತಿದ್ದ ದೌರ್ಜನ್ಯ ಕೆಲವು ಧೈರ್ಯವಂತ ನಟಿಯರಿಂದ ಬೆಳಕಿಗೆ ಬಂತು. ದುರಂತ ವೆಂದರೆ, ಪುರುಷ ಕಲಾವಿದರ ಭಂಡಗುಣ ಹೊರಗೆಳೆದ ಕಲಾವಿದೆಯರನ್ನು ಚಿತ್ರೋದ್ಯಮದ ಮಂದಿಯೇ ಹೀನಾಯ ವಾಗಿ ನಡೆಸಿಕೊಂಡರು.</p><p>ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದವರ ಪಟ್ಟಿಯಲ್ಲಿ ಪುರುಷರದ್ದೇ ಸಿಂಹಪಾಲಿದೆ. ಮಹಿಳೆಯೊಬ್ಬರನ್ನು ಆ ಸ್ಥಾನದಲ್ಲಿ ನೋಡಲು ಐವತ್ತು ವರ್ಷ ಕಾಯಬೇಕಾಯಿತು. ಇದುವರೆಗಿನ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಹೆಸರುಗಳ ಪಟ್ಟಿಯಲ್ಲಿ ಲೇಖಕಿಯರ ಸಂಖ್ಯೆ ಬರೀ ಐದು ಮಾತ್ರ. ‘ಮಹಿಳೆಯ ಪಾಲಿಗೆ ಬರವಣಿಗೆ ಏಕಕಾಲಕ್ಕೆ ಚರಿತ್ರೆಯನ್ನೂ ಮತ್ತು ವರ್ತಮಾನದ ಆತಂಕಗಳನ್ನೂ ಎದುರುಹಾಕಿಕೊಂಡ ನಿರಂತರ ಹೋರಾಟದಂತೆಯೇ ಸರಿ. ತನ್ನ ಪರಿಸರದ ಕಟುಸಂಪ್ರದಾಯ, ಆಚರಣೆ, ನಂಬಿಕೆ, ಮೌಢ್ಯಗಳೊಂದಿಗೆ ಧಾರ್ಮಿಕ, ಕೌಟುಂಬಿಕ ದಬ್ಬಾಳಿಕೆಯನ್ನು ಪ್ರಶ್ನಿಸುತ್ತಲೇ ಆಕೆಯೊಳಗಿನ ಲೇಖಕಿ ಶತಮಾನಗಳ ಪುರುಷ ಪ್ರಧಾನ ಯಜಮಾನ್ಯವನ್ನು ಒಡೆಯಬೇಕಾಗುತ್ತದೆ. ಹಾಗಾಗಿ, ಬರವಣಿಗೆ ಎನ್ನುವುದು ಮಹಿಳೆಯ ಪಾಲಿಗೆ ದಣಿವರಿಯದ ಹಾದಿ’ ಎನ್ನುತ್ತಾರೆ ಇಂಗ್ಲಿಷ್ನಲ್ಲಿ ಬರೆಯುವ ಲೈಲಾ ಅಹ್ಮದ್.</p><p>ಅಮೆರಿಕನ್ ಬರಹಗಾರ್ತಿ ಮಾಯಾ ಏಂಜೆಲೊ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸಲು ಹೇಳಿದ ಮಾತುಗಳು ಹೀಗಿವೆ: ‘ನಮಗೆ ಸೋಲುಗಳು ಎದುರಾಗಬಹುದು. ನಾವು ಎದೆಗುಂದಬಾರದು. ವಜ್ರವಾಗಲು ಹೆಚ್ಚು ಸಮಯ, ಒತ್ತಡ ಎರಡನ್ನೂ ತಡೆದುಕೊಳ್ಳಬೇಕು. ಅದಕ್ಕಿಂತ ಕಡಿಮೆ ಸಮಯವಾದರೆ ಸ್ಪಟಿಕವಾಗುವಿರಿ. ಅದಕ್ಕಿಂತಲೂ ಕಡಿಮೆ ಸಮಯ ವಾದರೆ ಇದ್ದಿಲು. ಅದಕ್ಕಿಂತ ಕಡಿಮೆ ಸಮಯವಾದರೆ ಕೊಳೆತ ಎಲೆ. ಅದಕ್ಕಿಂತಲೂ ಕಡಿಮೆ ಸಮಯವಾದರೆ ಬರಿ ಕಸ’. ಮಹಿಳಾ ಶೋಷಣೆ ಅವ್ಯಾಹತವಾಗಿ ನಡೆಯುತ್ತಿರುವ ಹೊತ್ತಿನಲ್ಲಿ ಮಹಿಳೆ ವಜ್ರವಾಗುವುದರತ್ತ ಹೆಜ್ಜೆ ಹಾಕಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>