<p>ಸಮುದಾಯವೊಂದರ ವಧು–ವರರ ಸಮಾವೇಶದಲ್ಲಿ ಯುವಕ, ಯುವತಿಯರು ವೇದಿಕೆಯ ಮೇಲೆ ತಮ್ಮನ್ನು ಪರಿಚಯಿಸಿಕೊಳ್ಳುತ್ತಿದ್ದರು. ಅವರ ವಿವರಗಳನ್ನು ಪರದೆಯ ಮೇಲೂ ನೋಡಬಹುದಿತ್ತು. ಯುವಕನೊಬ್ಬ ತನ್ನ ಪರಿಚಯ ಮಾಡಿಕೊಳ್ಳುತ್ತಾ, ‘ನಾನು ಬೆಂಗಳೂರಿನಲ್ಲಿ ವಾಸವಿದ್ದೇನೆ. ನನ್ನ ಪೋಷಕರು ಊರಿನಲ್ಲಿದ್ದಾರೆ. ಇದು ವಧುವಿಗೆ ಒಂದು<br>ಅನುಕೂಲಕರ ಮಾಹಿತಿ’ ಎಂದ!</p>.<p>ತಂದೆ–ತಾಯಿ ನನ್ನೊಂದಿಗಿಲ್ಲ ಎಂಬ ಮಾಹಿತಿ ನೀಡಿದರೆ ವಧುವಿನ ಕಡೆಯವರು ಆಸಕ್ತಿ ತೋರಬಹುದು ಎಂಬಂತಿತ್ತು ಆತನ ಹೇಳಿಕೆ. ಈ ಹೇಳಿಕೆಯ ಹಿಂದೆ ವಧುವನ್ನು ಹುಡುಕಿ ಸೋತಿರುವ ದನಿಯಿತ್ತು ಎಂದು ಹೇಳಬಹುದೆ? ಅಥವಾ ಮದುವೆಯಾದರೆ ಸಾಕಪ್ಪಾ ಎನ್ನುವ ಆತನ ಅಂತರಂಗದ ಭಾವನೆಯಿತ್ತೆ? ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯಲು ತಯಾರಿದ್ದೇನೆ ಎಂದು ಆ ಯುವಕ ಸೂಚಿಸಿರಬಹುದೆ? ವಯಸ್ಸಾಗಿರುವವರು ಯಾರಿಗೂ ಬೇಡ ಎಂಬ ಸಾರಾಂಶವಂತೂ ಆ ಮಾತಿನಲ್ಲಿ ಕಾಣಿಸಿತು.</p>.<p>ಈ ಘಟನೆ ಹಳೆಯ ನೆನಪಿನತ್ತ ಜಾರುವಂತೆ ಮಾಡಿತು. ‘2000 ಇಸವಿಯ ವೇಳೆಗೆ ಎಲ್ಲರಿಗೂ ಆರೋಗ್ಯ’ ಎಂಬ ಜಾಗತಿಕ ‘ಆಲ್ಮಾ ಆಟಾ’ ಘೋಷಣೆ ಯಾವ ಯಾವ ದೇಶದಲ್ಲಿ ಎಷ್ಟು ಪ್ರಗತಿಯಾಗಿದೆ ಎಂಬುದನ್ನು ಪರಾಮರ್ಶಿಸಲು ‘ಜನಾ<br>ರೋಗ್ಯ ಸಮಾವೇಶ’ ಎಂಬ ಅಭಿಯಾನವನ್ನು ಆರೋಗ್ಯ ಕ್ಷೇತ್ರದಲ್ಲಿ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಘಟನೆಗಳು ಏರ್ಪಡಿಸಿದ್ದವು. ಆರೋಗ್ಯ<br>ವೆಂದರೆ ಕೇವಲ ರೋಗವನ್ನು ವಾಸಿ ಮಾಡುವುದಲ್ಲ; ರೋಗ ಬಾರದಂತೆ ತಡೆಯುವುದು. ಉತ್ತಮವಾದ ವಸತಿ, ಶುದ್ಧ ಕುಡಿಯುವ ನೀರು, ಉತ್ತಮ ಪರಿಸರ, ಉದ್ಯೋಗ, ಶಿಕ್ಷಣ, ಮಹಿಳಾ ಸಮಾನತೆ, ಉತ್ತಮವಾದ ರಸ್ತೆ ಇವೆಲ್ಲವೂ ಆರೋಗ್ಯದ ವ್ಯಾಪ್ತಿಗೆ ಬರುತ್ತವೆ ಎಂಬುದು ಆಲ್ಮಾ ಆಟಾ ಘೋಷಣೆಯ ಭಾಗವಾಗಿದ್ದವು.</p>.<p>ಜನಾರೋಗ್ಯ ಸಮಾವೇಶದ ಭಾಗವಾಗಿ ಪ್ರಕಟಗೊಂಡ ಐದು ಪುಸ್ತಕಗಳಲ್ಲೊಂದಾದ ‘ನಮ್ಮ ಅಸ್ತಿತ್ವವೂ ಪ್ರಮುಖವಾಗುವ ಜಗತ್ತು’ ಕೃತಿಯಲ್ಲಿ ‘ನಿರ್ಲಕ್ಷಿತ ವೃದ್ಧರು’ ಎಂಬ ಅಧ್ಯಾಯವಿದೆ. ಆ ಅಧ್ಯಾಯದ ಮೊದಲ ಪ್ಯಾರಾದಲ್ಲಿ ‘ಹಲವು ಚಿಕ್ಕ ವಯಸ್ಸಿನ ದಂಪತಿ ತಮ್ಮ ವೃದ್ಧ ತಂದೆ-ತಾಯಿಯನ್ನು ಮರೆತು ತಮ್ಮ ಮಕ್ಕಳ ಮೇಲೆ ಪ್ರೀತಿಯ ಧಾರೆಯನ್ನೇಹರಿಸುತ್ತಾರೆ. ಆದರೆ, ಎಲ್ಲರೂ ಒಂದು ದಿನ ವೃದ್ಧರಾಗುತ್ತಾರೆ<br>ಎಂಬುದನ್ನು ಮರೆಯಬಾರದು’ ಎಂದಿದೆ. ಆ ವಿಷಯವನ್ನಾ<br>ಧರಿಸಿ ಒಂದು ನಾಟಕ ತಯಾರಿಸಿ ಕಲಾಜಾಥಾದಲ್ಲಿ ಪ್ರದರ್ಶಿಸಲಾಗಿತ್ತು. ನಾಟಕದಲ್ಲಿ ‘ವಯೋವೃದ್ಧರೇ ಬಾಳಿನ ಸಂಪತ್ತು, ಇದ ಮರೆತರೆ ನಮಗೇ ಆಪತ್ತು’ ಎಂಬ ಹಾಡನ್ನು ಸೇರಿಸಲಾಗಿತ್ತು. ಇದು ವಾಸ್ತವ ಕೂಡ.</p>.<p>ಜನಾರೋಗ್ಯ ಆಂದೋಲನ ಕಳೆದು 25 ವರ್ಷಗಳ ನಂತರ ಇದೆಲ್ಲವೂ ನೆನಪಾಗಲು ಕಾರಣ, ವಧು–ವರರ ಸಮಾವೇಶದಲ್ಲಿ ವ್ಯಕ್ತವಾದಅಭಿಪ್ರಾಯಗಳು. ಯುವಕನ ಹೇಳಿಕೆ ನನಗೆ ಅಚ್ಚರಿ ಜೊತೆಗೆ ಮುಜುಗರವನ್ನೂ ಉಂಟು ಮಾಡಿತು. ಯುವತಿಯೊಬ್ಬಳು ತನ್ನ ನಿರೀಕ್ಷೆಯ ಬಗ್ಗೆ ಹೇಳಿಕೊಳ್ಳುತ್ತಾ, ‘ಹುಡುಗನ ಪೋಷಕರು ಚೆನ್ನಾಗಿರಬೇಕು’ ಎಂದಳು. ಚೆನ್ನಾಗಿರಬೇಕು ಅಂದರೆ ಏನರ್ಥ? ‘ಹುಡುಗನ ಪೋಷಕರು ಆರೋಗ್ಯವಂತರಾಗಿ, ಗಟ್ಟಿಮುಟ್ಟಾಗಿರ ಬೇಕು’ ಎಂದರ್ಥ ಎಂದರು ಪಕ್ಕದಲ್ಲಿ ಇದ್ದವರು!</p>.<p>ಇತ್ತೀಚೆಗೆ ತಮ್ಮ ಮಗನಿಗೆ ವಧುವನ್ನು ಹುಡುಕುತ್ತಿರುವ ಪೋಷಕರು ಸಿಕ್ಕಿದ್ದರು. ವಧುವಿನ ಕಡೆಯವರು ‘ನಿಮ್ಮ ಮನೆಯಲ್ಲಿ ಓಲ್ಡ್ ಫರ್ನಿಚರ್ಸ್ ಇವೆಯಾ?’ ಎಂದು ಕೇಳಿದರಂತೆ. ನಿಮ್ಮ ಮನೆಯಲ್ಲಿ ವಯಸ್ಸಾದವರಿದ್ದಾರಾ ಎಂಬುದು ಆ ಮಾತಿನ ಅರ್ಥವಂತೆ. ವಯಸ್ಸಾದ ಪೋಷಕರು ಜೊತೆಗೆ ಇರಬಾರದು ಎಂಬುದು ಅನೇಕ ಯುವತಿಯರ ಅಭಿಲಾಷೆ. ಹಾಗಾದರೆ ವಯಸ್ಸಾದವರು ಎಲ್ಲಿಗೆ ಹೋಗಬೇಕು? ಈ<br>ಯುವಕ–ಯುವತಿಯರಿಗೆ ವಯಸ್ಸಾಗುವುದಿಲ್ಲವೆ? ಮದುವೆ<br>ಆದ ಕೂಡಲೇ ಒಟ್ಟು ಕುಟುಂಬದಿಂದ ಬೇರ್ಪಡೆಯಾಗಿ ಪ್ರತ್ಯೇಕವಾದ ಮನೆ ಮಾಡಬೇಕು ಎನ್ನುವುದು ಹಲವು ಯುವತಿಯರ ಒತ್ತಾಯ ಎಂಬ ಮಾತುಗಳೂ ಗಟ್ಟಿಯಾಗಿ ಕೇಳಿಬರುತ್ತಿವೆ. ಇದೇ ರೀತಿ ವಧುವಿನ ಪೋಷಕರು, ‘ತಮ್ಮ ಮಗಳಿಗೆ ಹುಡುಗನ ಮನೆಯಲ್ಲಿ ಸ್ವಾತಂತ್ರ್ಯವಿಲ್ಲ, ಪೋಷಕರ ಕಿರುಕುಳ, ಒಂದು ಸಿನಿಮಾಗೆ ಹೋದರೂ ಸಹಿಸುವುದಿಲ್ಲ’ ಎಂದೆಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ.</p>.<p>ಕೆಲವರು ತಮ್ಮ ಜನ್ಮದಿನವನ್ನು ವೃದ್ಧಾಶ್ರಮಗಳಲ್ಲಿ ಆಚರಿಸಿಕೊಳ್ಳುತ್ತಾರೆ. ಅಂತಹವರು ಪೋಷಕರನ್ನು ಜೊತೆಯಲ್ಲಿಟ್ಟುಕೊಂಡು ನೋಡಿಕೊಳ್ಳುತ್ತಾ, ಅವರ ಅನುಭವ–ಪ್ರೀತಿಯನ್ನು ಏಕೆ ಪಡೆಯಬಾರದು? ಪೋಷಕರೂ ಸಹ ಬೆಳೆದ ಮಕ್ಕಳನ್ನು ಅರ್ಥಮಾಡಿಕೊಂಡು ಅವರ ಆಸೆ ಆಕಾಂಕ್ಷೆಗಳಿಗೆ ಪೂರಕವಾಗಿ ಏಕೆ ನಡೆದುಕೊಳ್ಳಬಾರದು?</p>.<p>ಸಾಧ್ಯತೆಗಳೇನೇ ಇರಲಿ, ವಯಸ್ಸಾದವರನ್ನು ಸಹಾನು ಭೂತಿಯಿಂದ ಸಹಿಸಿಕೊಳ್ಳುವ ಹಾಗೂ ಪ್ರೀತಿ ತೋರಿಸುವವರ ಸಂಖ್ಯೆ ವರ್ತಮಾನದಲ್ಲಿ ಕಡಿಮೆಯಾಗುತ್ತಿದೆ. ಅದೇ ಕಾರಣಕ್ಕಾಗಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಅಲ್ಲಿ ಮೃಷ್ಟಾನ್ನ ನೀಡಿದರೂ, ಪ್ರೀತಿಯನ್ನು ನೀಡಲು ಸಾಧ್ಯವಿಲ್ಲ. ವೃದ್ಧಾಶ್ರಮ ಸೇರಿದ ಕೆಲವೇ ದಿನಗಳಲ್ಲಿ ತೀರಿಕೊಂಡಿರುವವರ ಉದಾಹರಣೆಗಳಿವೆ. ಕೆಲವರು ತಂದೆ–ತಾಯಿ ನಿಧನಾನಂತರ ಪರಿತಪಿಸುವುದನ್ನು ಕಾಣುತ್ತೇವೆ. ಅದಕ್ಕೆ ಅರ್ಥವಿಲ್ಲ.</p>.<p>ಪೋಷಕರು ಹಳ್ಳಿಯಲ್ಲಿದ್ದಾರೆಂದು ಹೇಳುವ ಮೂಲಕ ಮದುವೆಯಾದರೆ ಸಾಕೆಂದು ಬಯಸುವ ಯುವಕರು, ಕಾರಣಾಂತರದಿಂದ ಹೆತ್ತವರು ಮಗನ ಬಳಿಗೆ ಬಂದರೆ ತಿರಸ್ಕರಿಸಲು ಸಾಧ್ಯವೆ? ಕೆಲವು ವಿವಾಹಿತ ಯುವಕರು ಪೋಷಕರಿಗಾಗಿ ಸಂಗಾತಿಯನ್ನೇ ತೊರೆದಿರುವ ಉದಾಹರಣೆಗಳೂ ಇವೆ. ಇದೂ ಸಹ ವ್ಯತಿರಿಕ್ತವಾದ ನಡೆ. ಕುಟುಂಬದ ಎಲ್ಲರನ್ನೂ ಒಟ್ಟಾಗಿ ತೂಗಿಸಿಕೊಂಡು ಹೋದಾಗ ಸಂಬಂಧಗಳಿಗೆ ಅರ್ಥ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಮುದಾಯವೊಂದರ ವಧು–ವರರ ಸಮಾವೇಶದಲ್ಲಿ ಯುವಕ, ಯುವತಿಯರು ವೇದಿಕೆಯ ಮೇಲೆ ತಮ್ಮನ್ನು ಪರಿಚಯಿಸಿಕೊಳ್ಳುತ್ತಿದ್ದರು. ಅವರ ವಿವರಗಳನ್ನು ಪರದೆಯ ಮೇಲೂ ನೋಡಬಹುದಿತ್ತು. ಯುವಕನೊಬ್ಬ ತನ್ನ ಪರಿಚಯ ಮಾಡಿಕೊಳ್ಳುತ್ತಾ, ‘ನಾನು ಬೆಂಗಳೂರಿನಲ್ಲಿ ವಾಸವಿದ್ದೇನೆ. ನನ್ನ ಪೋಷಕರು ಊರಿನಲ್ಲಿದ್ದಾರೆ. ಇದು ವಧುವಿಗೆ ಒಂದು<br>ಅನುಕೂಲಕರ ಮಾಹಿತಿ’ ಎಂದ!</p>.<p>ತಂದೆ–ತಾಯಿ ನನ್ನೊಂದಿಗಿಲ್ಲ ಎಂಬ ಮಾಹಿತಿ ನೀಡಿದರೆ ವಧುವಿನ ಕಡೆಯವರು ಆಸಕ್ತಿ ತೋರಬಹುದು ಎಂಬಂತಿತ್ತು ಆತನ ಹೇಳಿಕೆ. ಈ ಹೇಳಿಕೆಯ ಹಿಂದೆ ವಧುವನ್ನು ಹುಡುಕಿ ಸೋತಿರುವ ದನಿಯಿತ್ತು ಎಂದು ಹೇಳಬಹುದೆ? ಅಥವಾ ಮದುವೆಯಾದರೆ ಸಾಕಪ್ಪಾ ಎನ್ನುವ ಆತನ ಅಂತರಂಗದ ಭಾವನೆಯಿತ್ತೆ? ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯಲು ತಯಾರಿದ್ದೇನೆ ಎಂದು ಆ ಯುವಕ ಸೂಚಿಸಿರಬಹುದೆ? ವಯಸ್ಸಾಗಿರುವವರು ಯಾರಿಗೂ ಬೇಡ ಎಂಬ ಸಾರಾಂಶವಂತೂ ಆ ಮಾತಿನಲ್ಲಿ ಕಾಣಿಸಿತು.</p>.<p>ಈ ಘಟನೆ ಹಳೆಯ ನೆನಪಿನತ್ತ ಜಾರುವಂತೆ ಮಾಡಿತು. ‘2000 ಇಸವಿಯ ವೇಳೆಗೆ ಎಲ್ಲರಿಗೂ ಆರೋಗ್ಯ’ ಎಂಬ ಜಾಗತಿಕ ‘ಆಲ್ಮಾ ಆಟಾ’ ಘೋಷಣೆ ಯಾವ ಯಾವ ದೇಶದಲ್ಲಿ ಎಷ್ಟು ಪ್ರಗತಿಯಾಗಿದೆ ಎಂಬುದನ್ನು ಪರಾಮರ್ಶಿಸಲು ‘ಜನಾ<br>ರೋಗ್ಯ ಸಮಾವೇಶ’ ಎಂಬ ಅಭಿಯಾನವನ್ನು ಆರೋಗ್ಯ ಕ್ಷೇತ್ರದಲ್ಲಿ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಘಟನೆಗಳು ಏರ್ಪಡಿಸಿದ್ದವು. ಆರೋಗ್ಯ<br>ವೆಂದರೆ ಕೇವಲ ರೋಗವನ್ನು ವಾಸಿ ಮಾಡುವುದಲ್ಲ; ರೋಗ ಬಾರದಂತೆ ತಡೆಯುವುದು. ಉತ್ತಮವಾದ ವಸತಿ, ಶುದ್ಧ ಕುಡಿಯುವ ನೀರು, ಉತ್ತಮ ಪರಿಸರ, ಉದ್ಯೋಗ, ಶಿಕ್ಷಣ, ಮಹಿಳಾ ಸಮಾನತೆ, ಉತ್ತಮವಾದ ರಸ್ತೆ ಇವೆಲ್ಲವೂ ಆರೋಗ್ಯದ ವ್ಯಾಪ್ತಿಗೆ ಬರುತ್ತವೆ ಎಂಬುದು ಆಲ್ಮಾ ಆಟಾ ಘೋಷಣೆಯ ಭಾಗವಾಗಿದ್ದವು.</p>.<p>ಜನಾರೋಗ್ಯ ಸಮಾವೇಶದ ಭಾಗವಾಗಿ ಪ್ರಕಟಗೊಂಡ ಐದು ಪುಸ್ತಕಗಳಲ್ಲೊಂದಾದ ‘ನಮ್ಮ ಅಸ್ತಿತ್ವವೂ ಪ್ರಮುಖವಾಗುವ ಜಗತ್ತು’ ಕೃತಿಯಲ್ಲಿ ‘ನಿರ್ಲಕ್ಷಿತ ವೃದ್ಧರು’ ಎಂಬ ಅಧ್ಯಾಯವಿದೆ. ಆ ಅಧ್ಯಾಯದ ಮೊದಲ ಪ್ಯಾರಾದಲ್ಲಿ ‘ಹಲವು ಚಿಕ್ಕ ವಯಸ್ಸಿನ ದಂಪತಿ ತಮ್ಮ ವೃದ್ಧ ತಂದೆ-ತಾಯಿಯನ್ನು ಮರೆತು ತಮ್ಮ ಮಕ್ಕಳ ಮೇಲೆ ಪ್ರೀತಿಯ ಧಾರೆಯನ್ನೇಹರಿಸುತ್ತಾರೆ. ಆದರೆ, ಎಲ್ಲರೂ ಒಂದು ದಿನ ವೃದ್ಧರಾಗುತ್ತಾರೆ<br>ಎಂಬುದನ್ನು ಮರೆಯಬಾರದು’ ಎಂದಿದೆ. ಆ ವಿಷಯವನ್ನಾ<br>ಧರಿಸಿ ಒಂದು ನಾಟಕ ತಯಾರಿಸಿ ಕಲಾಜಾಥಾದಲ್ಲಿ ಪ್ರದರ್ಶಿಸಲಾಗಿತ್ತು. ನಾಟಕದಲ್ಲಿ ‘ವಯೋವೃದ್ಧರೇ ಬಾಳಿನ ಸಂಪತ್ತು, ಇದ ಮರೆತರೆ ನಮಗೇ ಆಪತ್ತು’ ಎಂಬ ಹಾಡನ್ನು ಸೇರಿಸಲಾಗಿತ್ತು. ಇದು ವಾಸ್ತವ ಕೂಡ.</p>.<p>ಜನಾರೋಗ್ಯ ಆಂದೋಲನ ಕಳೆದು 25 ವರ್ಷಗಳ ನಂತರ ಇದೆಲ್ಲವೂ ನೆನಪಾಗಲು ಕಾರಣ, ವಧು–ವರರ ಸಮಾವೇಶದಲ್ಲಿ ವ್ಯಕ್ತವಾದಅಭಿಪ್ರಾಯಗಳು. ಯುವಕನ ಹೇಳಿಕೆ ನನಗೆ ಅಚ್ಚರಿ ಜೊತೆಗೆ ಮುಜುಗರವನ್ನೂ ಉಂಟು ಮಾಡಿತು. ಯುವತಿಯೊಬ್ಬಳು ತನ್ನ ನಿರೀಕ್ಷೆಯ ಬಗ್ಗೆ ಹೇಳಿಕೊಳ್ಳುತ್ತಾ, ‘ಹುಡುಗನ ಪೋಷಕರು ಚೆನ್ನಾಗಿರಬೇಕು’ ಎಂದಳು. ಚೆನ್ನಾಗಿರಬೇಕು ಅಂದರೆ ಏನರ್ಥ? ‘ಹುಡುಗನ ಪೋಷಕರು ಆರೋಗ್ಯವಂತರಾಗಿ, ಗಟ್ಟಿಮುಟ್ಟಾಗಿರ ಬೇಕು’ ಎಂದರ್ಥ ಎಂದರು ಪಕ್ಕದಲ್ಲಿ ಇದ್ದವರು!</p>.<p>ಇತ್ತೀಚೆಗೆ ತಮ್ಮ ಮಗನಿಗೆ ವಧುವನ್ನು ಹುಡುಕುತ್ತಿರುವ ಪೋಷಕರು ಸಿಕ್ಕಿದ್ದರು. ವಧುವಿನ ಕಡೆಯವರು ‘ನಿಮ್ಮ ಮನೆಯಲ್ಲಿ ಓಲ್ಡ್ ಫರ್ನಿಚರ್ಸ್ ಇವೆಯಾ?’ ಎಂದು ಕೇಳಿದರಂತೆ. ನಿಮ್ಮ ಮನೆಯಲ್ಲಿ ವಯಸ್ಸಾದವರಿದ್ದಾರಾ ಎಂಬುದು ಆ ಮಾತಿನ ಅರ್ಥವಂತೆ. ವಯಸ್ಸಾದ ಪೋಷಕರು ಜೊತೆಗೆ ಇರಬಾರದು ಎಂಬುದು ಅನೇಕ ಯುವತಿಯರ ಅಭಿಲಾಷೆ. ಹಾಗಾದರೆ ವಯಸ್ಸಾದವರು ಎಲ್ಲಿಗೆ ಹೋಗಬೇಕು? ಈ<br>ಯುವಕ–ಯುವತಿಯರಿಗೆ ವಯಸ್ಸಾಗುವುದಿಲ್ಲವೆ? ಮದುವೆ<br>ಆದ ಕೂಡಲೇ ಒಟ್ಟು ಕುಟುಂಬದಿಂದ ಬೇರ್ಪಡೆಯಾಗಿ ಪ್ರತ್ಯೇಕವಾದ ಮನೆ ಮಾಡಬೇಕು ಎನ್ನುವುದು ಹಲವು ಯುವತಿಯರ ಒತ್ತಾಯ ಎಂಬ ಮಾತುಗಳೂ ಗಟ್ಟಿಯಾಗಿ ಕೇಳಿಬರುತ್ತಿವೆ. ಇದೇ ರೀತಿ ವಧುವಿನ ಪೋಷಕರು, ‘ತಮ್ಮ ಮಗಳಿಗೆ ಹುಡುಗನ ಮನೆಯಲ್ಲಿ ಸ್ವಾತಂತ್ರ್ಯವಿಲ್ಲ, ಪೋಷಕರ ಕಿರುಕುಳ, ಒಂದು ಸಿನಿಮಾಗೆ ಹೋದರೂ ಸಹಿಸುವುದಿಲ್ಲ’ ಎಂದೆಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ.</p>.<p>ಕೆಲವರು ತಮ್ಮ ಜನ್ಮದಿನವನ್ನು ವೃದ್ಧಾಶ್ರಮಗಳಲ್ಲಿ ಆಚರಿಸಿಕೊಳ್ಳುತ್ತಾರೆ. ಅಂತಹವರು ಪೋಷಕರನ್ನು ಜೊತೆಯಲ್ಲಿಟ್ಟುಕೊಂಡು ನೋಡಿಕೊಳ್ಳುತ್ತಾ, ಅವರ ಅನುಭವ–ಪ್ರೀತಿಯನ್ನು ಏಕೆ ಪಡೆಯಬಾರದು? ಪೋಷಕರೂ ಸಹ ಬೆಳೆದ ಮಕ್ಕಳನ್ನು ಅರ್ಥಮಾಡಿಕೊಂಡು ಅವರ ಆಸೆ ಆಕಾಂಕ್ಷೆಗಳಿಗೆ ಪೂರಕವಾಗಿ ಏಕೆ ನಡೆದುಕೊಳ್ಳಬಾರದು?</p>.<p>ಸಾಧ್ಯತೆಗಳೇನೇ ಇರಲಿ, ವಯಸ್ಸಾದವರನ್ನು ಸಹಾನು ಭೂತಿಯಿಂದ ಸಹಿಸಿಕೊಳ್ಳುವ ಹಾಗೂ ಪ್ರೀತಿ ತೋರಿಸುವವರ ಸಂಖ್ಯೆ ವರ್ತಮಾನದಲ್ಲಿ ಕಡಿಮೆಯಾಗುತ್ತಿದೆ. ಅದೇ ಕಾರಣಕ್ಕಾಗಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಅಲ್ಲಿ ಮೃಷ್ಟಾನ್ನ ನೀಡಿದರೂ, ಪ್ರೀತಿಯನ್ನು ನೀಡಲು ಸಾಧ್ಯವಿಲ್ಲ. ವೃದ್ಧಾಶ್ರಮ ಸೇರಿದ ಕೆಲವೇ ದಿನಗಳಲ್ಲಿ ತೀರಿಕೊಂಡಿರುವವರ ಉದಾಹರಣೆಗಳಿವೆ. ಕೆಲವರು ತಂದೆ–ತಾಯಿ ನಿಧನಾನಂತರ ಪರಿತಪಿಸುವುದನ್ನು ಕಾಣುತ್ತೇವೆ. ಅದಕ್ಕೆ ಅರ್ಥವಿಲ್ಲ.</p>.<p>ಪೋಷಕರು ಹಳ್ಳಿಯಲ್ಲಿದ್ದಾರೆಂದು ಹೇಳುವ ಮೂಲಕ ಮದುವೆಯಾದರೆ ಸಾಕೆಂದು ಬಯಸುವ ಯುವಕರು, ಕಾರಣಾಂತರದಿಂದ ಹೆತ್ತವರು ಮಗನ ಬಳಿಗೆ ಬಂದರೆ ತಿರಸ್ಕರಿಸಲು ಸಾಧ್ಯವೆ? ಕೆಲವು ವಿವಾಹಿತ ಯುವಕರು ಪೋಷಕರಿಗಾಗಿ ಸಂಗಾತಿಯನ್ನೇ ತೊರೆದಿರುವ ಉದಾಹರಣೆಗಳೂ ಇವೆ. ಇದೂ ಸಹ ವ್ಯತಿರಿಕ್ತವಾದ ನಡೆ. ಕುಟುಂಬದ ಎಲ್ಲರನ್ನೂ ಒಟ್ಟಾಗಿ ತೂಗಿಸಿಕೊಂಡು ಹೋದಾಗ ಸಂಬಂಧಗಳಿಗೆ ಅರ್ಥ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>