<p>ಕೆಲವೊಮ್ಮೆ ಅಲ್ಲಿಗೆ ಹೋಗುವ ಮುನ್ನವೇ ಮನದಲ್ಲಿ ಅನಿಸಿಕೆಯೊಂದು ಮೂಡಿರುತ್ತದೆ. ‘ಅದು ಹೀಗೇ, ಇಷ್ಟೇ’ ಎಂದು ಯಾಕೋ ಅನಿಸಿಹೋಗಿರುತ್ತದೆ. ಆನಂತರ ನಡೆಯುವುದು ಬೇರೆಯೇ ಆಗಿರಬಹುದು. ನಿಜಕ್ಕೂ ಮುದಗೊಳಿಸುವ ವಿಚಾರ ಅಲ್ಲಿರಬಹುದು. ನಾವಂದುಕೊಂಡಿದ್ದೇ ಬೇರೆ ಎಂದು ಆಗ ನಮಗೂ ಅನಿಸಿರುತ್ತದೆ. </p><p>ಹೋಗಲಿ, ಒಮ್ಮೆ ಏನೋ ಹಾಗಾಯಿತು, ಬಿಡಿ. ಇನ್ನು ಮನದಲ್ಲೇ ಪೂರ್ವನಿರ್ಧಾರ ಮಾಡಿಕೊಂಡು ಹೋಗುವುದು ಬೇಡ ಎಂದುಕೊಂಡು ಹಾಗೆಯೇ ನಡೆದುಕೊಂಡರೆ ಸರಿ. ಇಲ್ಲವಾದರೆ, ಇಂತಹುದ್ದೇ ಅನುಭವ ಮತ್ತೆ ಮತ್ತೆ ಆಗುತ್ತಿರುತ್ತದೆ. ಅಷ್ಟಕ್ಕೂ ಇದರಿಂದ ಆಗುವ ತೊಂದರೆಯೇನು ಎಂದು ಕೇಳಬಹುದು. ಇದರಿಂದ ನಷ್ಟ ನಮಗೇ. </p><p>ಇದನ್ನೇ ಪೂರ್ವಾಗ್ರಹ ಪೀಡಿತ ಮನಃಸ್ಥಿತಿ ಎನ್ನುತ್ತೇವೆ. ಎಲ್ಲದರ ಬಗ್ಗೆಯೂ ಏನೋ ಒಂದು ಪೂರ್ವಾಗ್ರಹದಿಂದ ವಸ್ತುವನ್ನು ಅಥವಾ ಸಂದರ್ಭವನ್ನು ನೋಡುವವರ ಮನಃಸ್ಥಿತಿಯೇ ಬೇರೆ. ಆಗ ಎಲ್ಲಿಯೂ ಮುಕ್ತವಾಗಿರಲು, ಸಂತಸವಾಗಿರಲು ಸಾಧ್ಯವೇ ಆಗುವುದಿಲ್ಲ. ಅದಕ್ಕೇ ಕೆಲವರು ಎಲ್ಲಿ ಹೋದರೂ ಕೊಂಕನ್ನೇ ಹುಡುಕುತ್ತಾರೆ. ಅವರಿಗೆ ಎಂತಹ ಸನ್ನಿವೇಶದಲ್ಲೂ ಖುಷಿಯಾಗಿರಲು ಬರುವುದೇ ಇಲ್ಲ. ಇದು ಅವರವರ ಮನಸ್ಥಿತಿಯನ್ನು ಅವಲಂಬಿಸಿರುತ್ತದೆಯಾದರೂ, ಹಾಗೆ ಪೂರ್ವಾಗ್ರಹ ಪೀಡಿತರಾಗುವುದರಿಂದ ಯಾವುದನ್ನೂ ಸಹಜವಾಗಿ ಒಪ್ಪಿಕೊಳ್ಳಲು, ಬೆರೆಯಲು ಆಗುವುದಿಲ್ಲ. </p><p>‘ಕೆಲವು ಪ್ರಾಂತ್ಯದ ಜನರು ಹಾಗೆ, ಕೆಲವು ಜಾತಿಯ ಜನರೇ ಹೀಗೆ’ ಎಂದು ಹೇಳುತ್ತಿರುತ್ತಾರಲ್ಲ? ಅವರೆಲ್ಲರ ಮನಃಸ್ಥಿತಿಯೂ ಅದೇ. ಎಲ್ಲೆಡೆ ಇರುವವರೂ ಮನುಷ್ಯರೇ, ಅಪಾಯಕಾರಿಯಾದ, ಒಳ್ಳೆಯ ಮನುಷ್ಯರು ಎಲ್ಲೆಡೆಯೂ ಇರಬಹುದು ಎಂಬುದನ್ನು ಅವರು ಒಪ್ಪಿಕೊಳ್ಳುವುದೇ ಇಲ್ಲ. ಹಾಗೆ ಪೂರ್ವಾಗ್ರಹ ಪೀಡಿತ ಮನೋಭಾವ ಹೊಂದದೇ ಇದ್ದರೆ ಎಲ್ಲೆಡೆಯೂ ಉತ್ತಮ ಸಂಬಂಧ ಹೊಂದಬಹುದು. ಅದಕ್ಕಿಂತ ದೊಡ್ಡ ಗಳಿಕೆ ಬೇರೆ ಇದೆಯೇ?</p>.ಪಿವಿ ವೈಬ್ಸ್: ನಿಮಗೊಬ್ಬ ನಿಜವಾದ ಗೆಳೆಯ ಜೀವನದಲ್ಲಿ ಬೇಡವೇ?.ಪಿವಿ ವೈಬ್ಸ್: ಸೋಮಾರಿಯಾಗಿರಲು ನಿಮಗೆ ಇಂಥದ್ದೇ ಕಾರಣಬೇಕಂತೇನೂ ಇಲ್ಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಲವೊಮ್ಮೆ ಅಲ್ಲಿಗೆ ಹೋಗುವ ಮುನ್ನವೇ ಮನದಲ್ಲಿ ಅನಿಸಿಕೆಯೊಂದು ಮೂಡಿರುತ್ತದೆ. ‘ಅದು ಹೀಗೇ, ಇಷ್ಟೇ’ ಎಂದು ಯಾಕೋ ಅನಿಸಿಹೋಗಿರುತ್ತದೆ. ಆನಂತರ ನಡೆಯುವುದು ಬೇರೆಯೇ ಆಗಿರಬಹುದು. ನಿಜಕ್ಕೂ ಮುದಗೊಳಿಸುವ ವಿಚಾರ ಅಲ್ಲಿರಬಹುದು. ನಾವಂದುಕೊಂಡಿದ್ದೇ ಬೇರೆ ಎಂದು ಆಗ ನಮಗೂ ಅನಿಸಿರುತ್ತದೆ. </p><p>ಹೋಗಲಿ, ಒಮ್ಮೆ ಏನೋ ಹಾಗಾಯಿತು, ಬಿಡಿ. ಇನ್ನು ಮನದಲ್ಲೇ ಪೂರ್ವನಿರ್ಧಾರ ಮಾಡಿಕೊಂಡು ಹೋಗುವುದು ಬೇಡ ಎಂದುಕೊಂಡು ಹಾಗೆಯೇ ನಡೆದುಕೊಂಡರೆ ಸರಿ. ಇಲ್ಲವಾದರೆ, ಇಂತಹುದ್ದೇ ಅನುಭವ ಮತ್ತೆ ಮತ್ತೆ ಆಗುತ್ತಿರುತ್ತದೆ. ಅಷ್ಟಕ್ಕೂ ಇದರಿಂದ ಆಗುವ ತೊಂದರೆಯೇನು ಎಂದು ಕೇಳಬಹುದು. ಇದರಿಂದ ನಷ್ಟ ನಮಗೇ. </p><p>ಇದನ್ನೇ ಪೂರ್ವಾಗ್ರಹ ಪೀಡಿತ ಮನಃಸ್ಥಿತಿ ಎನ್ನುತ್ತೇವೆ. ಎಲ್ಲದರ ಬಗ್ಗೆಯೂ ಏನೋ ಒಂದು ಪೂರ್ವಾಗ್ರಹದಿಂದ ವಸ್ತುವನ್ನು ಅಥವಾ ಸಂದರ್ಭವನ್ನು ನೋಡುವವರ ಮನಃಸ್ಥಿತಿಯೇ ಬೇರೆ. ಆಗ ಎಲ್ಲಿಯೂ ಮುಕ್ತವಾಗಿರಲು, ಸಂತಸವಾಗಿರಲು ಸಾಧ್ಯವೇ ಆಗುವುದಿಲ್ಲ. ಅದಕ್ಕೇ ಕೆಲವರು ಎಲ್ಲಿ ಹೋದರೂ ಕೊಂಕನ್ನೇ ಹುಡುಕುತ್ತಾರೆ. ಅವರಿಗೆ ಎಂತಹ ಸನ್ನಿವೇಶದಲ್ಲೂ ಖುಷಿಯಾಗಿರಲು ಬರುವುದೇ ಇಲ್ಲ. ಇದು ಅವರವರ ಮನಸ್ಥಿತಿಯನ್ನು ಅವಲಂಬಿಸಿರುತ್ತದೆಯಾದರೂ, ಹಾಗೆ ಪೂರ್ವಾಗ್ರಹ ಪೀಡಿತರಾಗುವುದರಿಂದ ಯಾವುದನ್ನೂ ಸಹಜವಾಗಿ ಒಪ್ಪಿಕೊಳ್ಳಲು, ಬೆರೆಯಲು ಆಗುವುದಿಲ್ಲ. </p><p>‘ಕೆಲವು ಪ್ರಾಂತ್ಯದ ಜನರು ಹಾಗೆ, ಕೆಲವು ಜಾತಿಯ ಜನರೇ ಹೀಗೆ’ ಎಂದು ಹೇಳುತ್ತಿರುತ್ತಾರಲ್ಲ? ಅವರೆಲ್ಲರ ಮನಃಸ್ಥಿತಿಯೂ ಅದೇ. ಎಲ್ಲೆಡೆ ಇರುವವರೂ ಮನುಷ್ಯರೇ, ಅಪಾಯಕಾರಿಯಾದ, ಒಳ್ಳೆಯ ಮನುಷ್ಯರು ಎಲ್ಲೆಡೆಯೂ ಇರಬಹುದು ಎಂಬುದನ್ನು ಅವರು ಒಪ್ಪಿಕೊಳ್ಳುವುದೇ ಇಲ್ಲ. ಹಾಗೆ ಪೂರ್ವಾಗ್ರಹ ಪೀಡಿತ ಮನೋಭಾವ ಹೊಂದದೇ ಇದ್ದರೆ ಎಲ್ಲೆಡೆಯೂ ಉತ್ತಮ ಸಂಬಂಧ ಹೊಂದಬಹುದು. ಅದಕ್ಕಿಂತ ದೊಡ್ಡ ಗಳಿಕೆ ಬೇರೆ ಇದೆಯೇ?</p>.ಪಿವಿ ವೈಬ್ಸ್: ನಿಮಗೊಬ್ಬ ನಿಜವಾದ ಗೆಳೆಯ ಜೀವನದಲ್ಲಿ ಬೇಡವೇ?.ಪಿವಿ ವೈಬ್ಸ್: ಸೋಮಾರಿಯಾಗಿರಲು ನಿಮಗೆ ಇಂಥದ್ದೇ ಕಾರಣಬೇಕಂತೇನೂ ಇಲ್ಲ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>