<p><strong>ಕಾವೇರಿ: ತಮಿಳುನಾಡಿನ ತುರ್ತು ಅರ್ಜಿ ವಜಾ</strong></p>.<p><strong>ನವದೆಹಲಿ, ಜ. 24– </strong>ಕಾವೇರಿ ನ್ಯಾಯ ಮಂಡಳಿ ಮಧ್ಯಂತರ ತೀರ್ಪಿನ ಅನ್ವಯ ಬಾಕಿ ಇರುವ 5 ಟಿಎಂಸಿ ಅಡಿ ನೀರನ್ನು ತಕ್ಷಣವೇ ಬಿಡಲು ಕರ್ನಾಟಕಕ್ಕೆ ಆದೇಶ ನೀಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ತುರ್ತು ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಳ್ಳಿಹಾಕಿತು.</p>.<p>ತಮಿಳುನಾಡಿಗೆ ತುರ್ತಾಗಿ 11 ಟಿಎಂಸಿ ಅಡಿ ನೀರು ಬಿಡಬೇಕೆಂದು ನ್ಯಾಯ ಮಂಡಳಿ ನೀಡಿರುವ ಆದೇಶವನ್ನು ಜಾರಿಗೊಳಿಸಬೇಕೆಂದು ಕೋರಿರುವ ಅರ್ಜಿಯ ಮುಂದಿನ ವಿಚಾರಣೆಯು ಫೆಬ್ರುವರಿ 6ರಂದು ಬರಲಿದೆ. ಆಗ ತಮಿಳುನಾಡಿನ ಈ ಮನವಿಯನ್ನು ನ್ಯಾಯಾಲಯ ಪರಿಶೀಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹಮದಿ ಹಾಗೂ ನ್ಯಾಯಮೂರ್ತಿ ಎನ್.ಪಿ.ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.</p>.<p><strong>ಮೂವರು ಮಾಜಿ ಮಂತ್ರಿಗಳಿಂದ 2.64 ಕೋಟಿ ಸ್ವೀಕಾರ: ದಾಖಲೆ ಬಹಿರಂಗ</strong></p>.<p><strong>ನವದೆಹಲಿ, ಜ. 24 (ಪಿಟಿಐ)– </strong>ಕೇಂದ್ರದ ಮಾಜಿ ಸಚಿವರಾದ ವಿ.ಸಿ.ಶುಕ್ಲಾ, ಮಾಧವರಾವ್ ಸಿಂಧಿಯಾ, ಬಲರಾಂ ಜಾಖಡ್ ಅವರು ಅಧಿಕಾರದಲ್ಲಿದ್ದಾಗ ಹವಾಲಾ ಹಗರಣದ ಮುಖ್ಯ ಆರೋಪಿಗಳಾದ ಜೈನ್ ಸಹೋದರರಿಂದ 1.65 ಕೋಟಿ, ಅಧಿಕಾರದಲ್ಲಿ ಇಲ್ಲದಿದ್ದಾಗ 99 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾವೇರಿ: ತಮಿಳುನಾಡಿನ ತುರ್ತು ಅರ್ಜಿ ವಜಾ</strong></p>.<p><strong>ನವದೆಹಲಿ, ಜ. 24– </strong>ಕಾವೇರಿ ನ್ಯಾಯ ಮಂಡಳಿ ಮಧ್ಯಂತರ ತೀರ್ಪಿನ ಅನ್ವಯ ಬಾಕಿ ಇರುವ 5 ಟಿಎಂಸಿ ಅಡಿ ನೀರನ್ನು ತಕ್ಷಣವೇ ಬಿಡಲು ಕರ್ನಾಟಕಕ್ಕೆ ಆದೇಶ ನೀಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ತುರ್ತು ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಳ್ಳಿಹಾಕಿತು.</p>.<p>ತಮಿಳುನಾಡಿಗೆ ತುರ್ತಾಗಿ 11 ಟಿಎಂಸಿ ಅಡಿ ನೀರು ಬಿಡಬೇಕೆಂದು ನ್ಯಾಯ ಮಂಡಳಿ ನೀಡಿರುವ ಆದೇಶವನ್ನು ಜಾರಿಗೊಳಿಸಬೇಕೆಂದು ಕೋರಿರುವ ಅರ್ಜಿಯ ಮುಂದಿನ ವಿಚಾರಣೆಯು ಫೆಬ್ರುವರಿ 6ರಂದು ಬರಲಿದೆ. ಆಗ ತಮಿಳುನಾಡಿನ ಈ ಮನವಿಯನ್ನು ನ್ಯಾಯಾಲಯ ಪರಿಶೀಲಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹಮದಿ ಹಾಗೂ ನ್ಯಾಯಮೂರ್ತಿ ಎನ್.ಪಿ.ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.</p>.<p><strong>ಮೂವರು ಮಾಜಿ ಮಂತ್ರಿಗಳಿಂದ 2.64 ಕೋಟಿ ಸ್ವೀಕಾರ: ದಾಖಲೆ ಬಹಿರಂಗ</strong></p>.<p><strong>ನವದೆಹಲಿ, ಜ. 24 (ಪಿಟಿಐ)– </strong>ಕೇಂದ್ರದ ಮಾಜಿ ಸಚಿವರಾದ ವಿ.ಸಿ.ಶುಕ್ಲಾ, ಮಾಧವರಾವ್ ಸಿಂಧಿಯಾ, ಬಲರಾಂ ಜಾಖಡ್ ಅವರು ಅಧಿಕಾರದಲ್ಲಿದ್ದಾಗ ಹವಾಲಾ ಹಗರಣದ ಮುಖ್ಯ ಆರೋಪಿಗಳಾದ ಜೈನ್ ಸಹೋದರರಿಂದ 1.65 ಕೋಟಿ, ಅಧಿಕಾರದಲ್ಲಿ ಇಲ್ಲದಿದ್ದಾಗ 99 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>