‘ರಾಜ್ಯಕ್ಕೆ ಒಂದೇ ಸಾಹಿತ್ಯ ಅಕಾಡೆಮಿ’
ಬೆಂಗಳೂರು, ಫೆ. 16: ಪ್ರತೀ ಭಾಷೆಗೂ ಒಂದೊಂದು ಪ್ರತ್ಯೇಕ ಅಕಾಡೆಮಿಯ ಬದಲು, ಎಲ್ಲ ಭಾಷೆಗಳಿಗೂ ಒಂದೇ ‘ಕರ್ನಾಟಕ ಅಕಾಡೆಮಿ’ಯ ಸ್ಥಾಪನೆ ಸೂಕ್ತ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್.ಅನಂತಮೂರ್ತಿ ಇಂದು ಇಲ್ಲಿ ಅಭಿಪ್ರಾಯಪಟ್ಟರು.