ರಾಜ್ಯಸಭೆಗೆ ಕೃಷ್ಣ, ಹೆಗಡೆ,ಇಬ್ರಾಹಿಂ, ಲೀಲಾದೇವಿ ಆಯ್ಕೆ
ಬೆಂಗಳೂರು, ಫೆ. 19– ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಕಾಂಗ್ರೆಸ್(ಐ)ನ ಎಸ್.ಎಂ. ಕೃಷ್ಣ, ಜನತಾದಳದ ರಾಮಕೃಷ್ಣ ಹೆಗಡೆ,ಸಿ.ಎಂ.ಇಬ್ರಾಹಿಂ ಮತ್ತು ಲೀಲಾದೇವಿ ಆರ್. ಪ್ರಸಾದ್ ಅವರು ಚುನಾಯಿತರಾಗಿದ್ದಾರೆ.