ಸುಪ್ರೀಂ ಕೋರ್ಟಿನ ಈ ಆದೇಶ ದಿಂದಾಗಿ ಸಿಬಿಐ, 65 ಕೋಟಿ ರೂಪಾಯಿ ಜೈನ್ ಹವಾಲ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಪಿ.ವಿ.ನರಸಿಂಹ ರಾವ್ ಮತ್ತು ಎಲ್ಲ ಆಡಳಿತಾತ್ಮಕ ನಿಯಂತ್ರಣದಿಂದ ಸಂಪೂರ್ಣವಾಗಿ ಹೊರ ಬಂದಂತಾಗಿದೆ. ‘ನಿಮ್ಮ ಆಡಳಿತ ನಿಯಂತ್ರಣ ಹೊಂದಿರು ವವರಿಂದಲೂ ನೀವು ಸಲಹೆ ಪಡೆಯ ಬಾರದು ಮತ್ತು ಅವರಿಗೆ ವರದಿ ನೀಡ ಬಾರದು’ ಎಂದು ನ್ಯಾಯಮೂರ್ತಿಗಳಾದ ಜೆ.ಎಸ್.ವರ್ಮಾ, ಎಸ್.ಪಿ.ಬರೂಚಾ ಮತ್ತು ಎಸ್.ಸಿ.ಸೇನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.