ಬೆಂಗಳೂರು, ಮಾರ್ಚ್ 29– ಕೆಸಿಪಿ ಅಧ್ಯಕ್ಷ ಎಸ್.ಬಂಗಾರಪ್ಪ, ಜನತಾ ದಳದ ಬಾಗಿಲಲ್ಲಿ ನಿಂತಿರುವ ಡಾ. ಜೀವರಾಜ ಆಳ್ವ, ಲೋಕಸಭೆ ಉಪಾಧ್ಯಕ್ಷ ಎಸ್.ಮಲ್ಲಿಕಾರ್ಜುನಯ್ಯ, ಹಾಲಿ ಲೋಕಸಭಾ ಸದಸ್ಯರಾದ ವಿ.ಶ್ರೀನಿವಾಸ ಪ್ರಸಾದ್, ಚಂದ್ರಪ್ರಭಾ ಅರಸ್, ಕೆ.ಎಚ್.ಮುನಿಯಪ್ಪ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್, ದಳ ಮುಖಂಡರಾದ ಬಿ.ಎ.ಜೀವಿಜಯ, ಬಿ.ಎಲ್.ಶಂಕರ್ ಇಂದು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರು.