ಸ್ಪರ್ಧೆಯಲ್ಲಿ ಸಿದ್ದರಾಮಯ್ಯ, ಪಟೇಲ್ ಬೆಂಗಳೂರು, ಮೇ 29– ಪ್ರಧಾನಿಯಾಗಿ ನಿಯೋಜಿತರಾಗಿರುವ ಎಚ್.ಡಿ. ದೇವೇಗೌಡರು ತೆರವು ಮಾಡಲಿರುವ ಮುಖ್ಯಮಂತ್ರಿ ಪಟ್ಟಕ್ಕೆ ಏರಲು ಹಲವು ಸಚಿವ ಗಣ್ಯರು ಪೈಪೋಟಿಯನ್ನು ನಡೆಸಿದ್ದು, ರಾಜಧಾನಿಯಲ್ಲಿನ ರಾಜಕೀಯ ಚಟುವಟಿಕೆ ಒಮ್ಮೆಗೇ ಚುರುಕುಗೊಂಡಿದೆ.
ದಳ ಶಾಸಕಾಂಗದ ನೂತನ ನಾಯಕರಾಗಿ ಯಾರು ಆಯ್ಕೆ ಆಗಲಿದ್ದಾರೆ ಎನ್ನುವುದು ಈ ನಿಮಿಷದವರೆಗೂ ನಿಗೂಢವಾಗಿದೆ. ಆದರೆ, ಉಪಮುಖ್ಯಮಂತ್ರಿ ಜೆ.ಎಚ್. ಪಟೇಲ್, ಅರ್ಥ ಸಚಿವ ಸಿದ್ದರಾಮಯ್ಯ ಅವರ ನಡುವೆ ಈ ಹುದ್ದೆಗಾಗಿ ಪ್ರಬಲ ಪೈಪೋಟಿ ಸಾಗಿದೆ ಎಂದು ತಿಳಿದುಬಂದಿದೆ.