ಸಂತೆ ಹೊಂಡ ದುರಂತ: ಬಸ್ ಮೇಲೆತ್ತಲು ಫಲಿಸದ ಯತ್ನ
ಚಿತ್ರದುರ್ಗ, ಅ. 24– ಇಪ್ಪತ್ನಾಲ್ಕು ಗಂಟೆಗಳ ಅವ್ಯಾಹತ ಪ್ರಯತ್ನದ ನಂತರವೂ, ಸಂತೆ ಹೊಂಡದಲ್ಲಿ 60ಕ್ಕೂ ಹೆಚ್ಚು ಜನರಸಮೇತ ಮುಳುಗಿರುವ ಬಸ್ಸನ್ನು ಮೇಲೆತ್ತಲು ಇನ್ನೂ ಸಾಧ್ಯವಾಗಿಲ್ಲ. ನೌಕಾಪಡೆಯ ತಂಡಕ್ಕಾಗಿ ಕಾಯಲಾಗುತ್ತಿದ್ದು, ದುರಂತದ ಸ್ಥಳದಲ್ಲಿ ದುಃಖತಪ್ತ ಕುಟುಂಬದವರ ಸಹಿತ ಸಾವಿರಾರು ಜನರು ಸೇರಿದ್ದಾರೆ.