ವಿಶ್ವ ಬ್ಯಾಂಕಿನ ನೆರವಿನ ಯೋಜನೆಯಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ತಾಂತ್ರಿಕ ಮುದ್ರಣ ಸಂಸ್ಥೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಮಾನವನ ಒಳಿತಿಗಾಗಿ, ಜ್ಞಾನಕ್ಕಾಗಿ ಶಿಕ್ಷಣವನ್ನು ಆಶ್ರಯಿಸುವವರು ಕೆಲವೇ ಮಂದಿ, ಪ್ರತಿಯೊಬ್ಬರೂ ಉದ್ಯೋಗಕ್ಕೆ ಮಾರ್ಗ ಕಲ್ಪಿಸುತ್ತದೆ ಎಂದಷ್ಟೇ ಶಿಕ್ಷಣವನ್ನು ಆಶ್ರಯಿಸುತ್ತಾರೆ. ಹಾಗಾಗಿ ಇಂದು ಉದ್ಯೋಗ ಕಲ್ಪಿಸುವ ಶಿಕ್ಷಣ ನೀಡುವ ಸಂಸ್ಥೆಗಳ ಅಗತ್ಯವಿದೆ’ ಎಂದು ಹೇಳಿದರು.