ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ ದಿಂದಲೇ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರಿಗೆ ತೀರ ನಿರಾಶೆಯೇನೂ ಆಗಲಿಲ್ಲ. ಆರಂಭದಲ್ಲಿ ಕೆಲವು ಕಾರ್ಯಕ್ರಮಗಳು ನೀರಸವಾಗಿದ್ದರೂ ಕ್ರಮೇಣ ಕಾವೇರಿತು. ಡಾ. ರಾಜಕುಮಾರರ ‘ಕ್ರೀಡಾಮೇಳ, ಚೇತನಶೀಲ’ ಹಾಡಿಗೆ ಜನ ತಾಳ ಹಾಕಿದರು. ಮನರಂಜನಾ ಕಾರ್ಯಕ್ರಮಗಳು ಜನರನ್ನು ಕೊನೆಯವರೆಗೂ ಕ್ರೀಡಾಂಗಣದಲ್ಲಿ ಇರುವಂತೆ ಮಾಡಿದವು. ರಾಜಕಾರಣಿಗಳ ಭಾಷಣ ಯಾರಿಗೂ ಸರಿಯಾಗಿ ಕೇಳದಿದ್ದುದರ ಜೊತೆಗೆ ಜನರಿಗೆ ಅದರಲ್ಲಿ ಆಸಕ್ತಿಯೂ ಇದ್ದಂತಿರಲಿಲ್ಲ.