ಬೆಂಗಳೂರು, ಜೂ.1– ಸಚಿವರ ಹಾಗೂ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಜಿ.ಎಚ್.ಪಟೇಲರಿಗೆ ಹಿಡಿತವೇ ಇಲ್ಲದೆ ಹೇಳುವವರು ಕೇಳುವವರೇ ಇಲ್ಲದಂಥ ದಿಕ್ಕುತಪ್ಪಿದ ಆಡಳಿತವನ್ನು ಕರ್ನಾಟಕದ ಜನ ಅನುಭವಿಸುವಂಥ ದಯನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಇಲ್ಲಿ ಇಂದು ಆಪಾದಿಸಿದರು.