ಬೆಂಗಳೂರು, ಆಗಸ್ಟ್ 27– ಕುಖ್ಯಾತ ನರಹಂತಕ, ದಂತಚೋರವೀರಪ್ಪನ್ ರಾಜ್ಯದ ತಂಟೆಗೆ ಬರದಿದ್ದರೆ ಆತನವಿರುದ್ಧಯಾವುದೇಕಾರ್ಯಾಚರಣೆನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಇಂದು ಇಲ್ಲಿ ಖಚಿತವಾಗಿ ಹೇಳಿದರು.
ವೀರಪ್ಪನ್ವಶದಿಂದ ಮುಕ್ತಿ ಪಡೆದು ಸಜೀವವಾಗಿ ರಾಜ್ಯಕ್ಕೆ ಹಿಂದಿರುಗಿದ ಒಂಬತ್ತು ಮಂದಿ ಅರಣ್ಯ ಸಿಬ್ಬಂದಿ ಸಮ್ಮುಖದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಗಡಿಯಾಚೆ ಅಂದರೆ ತಮಿಳುನಾಡಿನಲ್ಲಿ ಆತ ಏನು ಮಾಡಿದರೂ ಅದು ನಮಗೆ ಸಂಬಂಧಿಸಿದ ವಿಷಯವಲ್ಲ. ಹಾಗಾಗಿ ಆತನ ಬೆನ್ನು ಹತ್ತುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.