ಕೃಷ್ಣಾ 2ನೇ ಹಂತಕ್ಕೆ ಅನುಮತಿಗೆ ಮನವಿ
ನವದೆಹಲಿ, ನ. 15– ಕೃಷ್ಣಾ ನದಿ ನೀರಿನ ಬಗೆಗೆ ಬಚಾವತ್ ಆಯೋಗ ನೀಡಿರುವ ತೀರ್ಪಿನಂತೆ, ಎರಡು ಸಾವಿರ ಇಸವಿಯೊಳಗೆ ಕರ್ನಾಟಕವು ತನ್ನ ಪಾಲಿನ ನೀರಿನ ಬಳಕೆಯನ್ನು ಮಾಡಿಕೊಳ್ಳಲು ಸಹಾಯವಾಗುವಂತೆ ಕೃಷ್ಣಾ ಮೇಲ್ದಂಡೆ ಎರಡನೇ ಹಂತದ ಯೋಜನೆಗಳಿಗೆ ಅನುಮತಿ ನೀಡಬೇಕೆಂದು ಕರ್ನಾಟಕದ ಭಾರಿ ನೀರಾವರಿ ಸಚಿವ ಕೆ.ಎನ್. ನಾಗೇಗೌಡ ಅವರು ಯೋಜನಾ ಆಯೋಗಕ್ಕೆ ಮನವಿ ಮಾಡಿದ್ದಾರೆ.