ರಂಗಕ್ಕೆ ಬೆಂಬಲ ವಾಪಸು:ಕಾಂಗ್ರೆಸ್ನಲ್ಲಿ ಒಮ್ಮತ
ನವದೆಹಲಿ, ನವೆಂಬರ್ 18– ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳ ಕಾಂಗ್ರೆಸ್ ಸಂಸತ್ ಸದಸ್ಯರೆಲ್ಲ, ಸಂಯುಕ್ತ ರಂಗ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳಬೇಕು, ರಾಜೀವ್ ಹತ್ಯೆ ಪ್ರಕರಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಪಕ್ಷದ ವರಿಷ್ಠರಿಗೆ ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಇಂದು ನೀಡಿದ್ದಾರೆ.