ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಕೇಸರಿ ಕೈ ಸೇರದ ರಂಗದ ಪತ್ರ

Last Updated 23 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಕೇಸರಿ ಕೈ ಸೇರದ ರಂಗದ ಪತ್ರ: ಕಾಂಗ್ರೆಸ್‌ ಪಕ್ಷ ಇಕ್ಕಟ್ಟಿನಲ್ಲಿ

ನವದೆಹಲಿ, ನ. 23– ಕಾಂಗ್ರೆಸ್‌ ಅಧ್ಯಕ್ಷ ಸೀತಾರಾಂ ಕೇಸರಿ ಅವರ ಪತ್ರಕ್ಕೆ ಉತ್ತರ ಕೊಡುವ ಗೋಜಿಗೆ ಸಂಯುಕ್ತ ರಂಗ ಇಂದು ಸಹ ಹೋಗಲಿಲ್ಲ. ಲೋಕಸಭೆಯಲ್ಲಿ ವಾರಾಂತ್ಯದ ಗದ್ದಲದ ಸಮಾವೇಶ ಸೋಮ ವಾರವೂ ಮುಂದುವರಿಯುವ ನಿರೀಕ್ಷೆ ಇದೆ.

ಸಂಯುಕ್ತ ರಂಗ ಸರ್ಕಾರ ಮತ್ತು ಕಾಂಗ್ರೆಸ್‌ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ಬಗೆಹರಿಸಲು ಹಲವಾರು ಮಟ್ಟದಲ್ಲಿ ಅನೌಪಚಾರಿಕ ಮಾತುಕತೆಗಳು ಮುಂದುವರಿದಿವೆ. ಕೇಂದ್ರ ಸಚಿವರಾದ ರಾಂ ವಿಲಾಸ್‌ ಪಾಸ್ವಾನ್‌ ಮತ್ತು ಕಮಲಾ ಸಿನ್ಹಾ ಅವರು ಇಂದು ರಾತ್ರಿ ಸಂಯುಕ್ತ ರಂಗದ ನಿರ್ಣಾಯಕ ಸಮಿತಿ ಸಭೆಗೆ ಮೊದಲು ಕೇಸರಿ ಅವರನ್ನು ಭೇಟಿ ಮಾಡಿ ಸಂಧಾನಕ್ಕೆ ಯತ್ನಿಸಿದರು. ಆದರೆ ಅವರು ಅಧಿಕೃತವಾಗಿ ಪ್ರಧಾನಿಯವರ ಪತ್ರವನ್ನು ಕೇಸರಿ ಅವರಿಗೆ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT