ಸಂಯುಕ್ತ ರಂಗ ಸರ್ಕಾರ ಮತ್ತು ಕಾಂಗ್ರೆಸ್ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ಬಗೆಹರಿಸಲು ಹಲವಾರು ಮಟ್ಟದಲ್ಲಿ ಅನೌಪಚಾರಿಕ ಮಾತುಕತೆಗಳು ಮುಂದುವರಿದಿವೆ. ಕೇಂದ್ರ ಸಚಿವರಾದ ರಾಂ ವಿಲಾಸ್ ಪಾಸ್ವಾನ್ ಮತ್ತು ಕಮಲಾ ಸಿನ್ಹಾ ಅವರು ಇಂದು ರಾತ್ರಿ ಸಂಯುಕ್ತ ರಂಗದ ನಿರ್ಣಾಯಕ ಸಮಿತಿ ಸಭೆಗೆ ಮೊದಲು ಕೇಸರಿ ಅವರನ್ನು ಭೇಟಿ ಮಾಡಿ ಸಂಧಾನಕ್ಕೆ ಯತ್ನಿಸಿದರು. ಆದರೆ ಅವರು ಅಧಿಕೃತವಾಗಿ ಪ್ರಧಾನಿಯವರ ಪತ್ರವನ್ನು ಕೇಸರಿ ಅವರಿಗೆ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ.