<p><strong>ದಲ್ಲಾಳಿ ಪಾರೆಖ್ ಬಂಧನ: ಮುಂಬೈ ಪೇಟೆ ಕುಸಿತ</strong></p>.<p>ಮುಂಬೈ, ಮಾರ್ಚ್ 30 (ಪಿಟಿಐ)– ದೇಶದಾದ್ಯಂತ ಷೇರುಪೇಟೆಗಳಲ್ಲಿ ಮತ್ತೊಂದು ಕರಾಳ ಶುಕ್ರವಾರ ದಾಖಲಾಯಿತು. ಮುಂಬೈ ಸಹಿತ ಎಲ್ಲಾಷೇರುಪೇಟೆಗಳೂ ಭಾರಿ ಕುಸಿತ ಕಂಡವು. ಮುಂಬೈ ಪೇಟೆಯಲ್ಲಿ ಮೊದಲ ಪಟ್ಟಿಯ 30 ಷೇರುಗಳ ಸಂವೇದಿ ಸೂಚ್ಯಂಕವು 147 ಅಂಶಗಳಷ್ಟು ಇಳಿಯಿತು.</p>.<p>ಬ್ಯಾಂಕ್ ಆಫ್ ಇಂಡಿಯಾಗೆ 130 ಕೋಟಿ ರೂಪಾಯಿಗಳ ಪಾವತಿ ಬಾಕಿ ಉಳಿಸಿಕೊಂಡಿರುವ ಮುಂಬೈನ ಪ್ರಮುಖ ಷೇರು ದಲ್ಲಾಳಿ ಕೇತನ್ ಪಾರೆಖ್ ಬಂಧನವಾಗಲಿದೆ ಎಂಬ ಗಾಳಿಸುದ್ದಿ ಹಬ್ಬಿದ್ದು, ಷೇರು ಬೆಲೆಗಳ ಭಾರೀ ಕುಸಿತಕ್ಕೆ ಕಾರಣವಾಯಿತು. ಸಂಜೆ ಸಿಬಿಐ ಅಧಿಕಾರಿಗಳು ಕೇತನ್ ಪಾರೆಖ್ನನ್ನು ಬಂಧಿಸಿದ್ದಾರೆ.</p>.<p>ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣದಲ್ಲಿ ಆದ್ಯತೆ</p><p>ಬೆಂಗಳೂರು, ಮಾರ್ಚ್ 30– ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವೃತ್ತಿಪರ ತರಗತಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ವಿಧಾನ ಪರಿಷತ್ನಲ್ಲಿ ಇಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಲ್ಲಾಳಿ ಪಾರೆಖ್ ಬಂಧನ: ಮುಂಬೈ ಪೇಟೆ ಕುಸಿತ</strong></p>.<p>ಮುಂಬೈ, ಮಾರ್ಚ್ 30 (ಪಿಟಿಐ)– ದೇಶದಾದ್ಯಂತ ಷೇರುಪೇಟೆಗಳಲ್ಲಿ ಮತ್ತೊಂದು ಕರಾಳ ಶುಕ್ರವಾರ ದಾಖಲಾಯಿತು. ಮುಂಬೈ ಸಹಿತ ಎಲ್ಲಾಷೇರುಪೇಟೆಗಳೂ ಭಾರಿ ಕುಸಿತ ಕಂಡವು. ಮುಂಬೈ ಪೇಟೆಯಲ್ಲಿ ಮೊದಲ ಪಟ್ಟಿಯ 30 ಷೇರುಗಳ ಸಂವೇದಿ ಸೂಚ್ಯಂಕವು 147 ಅಂಶಗಳಷ್ಟು ಇಳಿಯಿತು.</p>.<p>ಬ್ಯಾಂಕ್ ಆಫ್ ಇಂಡಿಯಾಗೆ 130 ಕೋಟಿ ರೂಪಾಯಿಗಳ ಪಾವತಿ ಬಾಕಿ ಉಳಿಸಿಕೊಂಡಿರುವ ಮುಂಬೈನ ಪ್ರಮುಖ ಷೇರು ದಲ್ಲಾಳಿ ಕೇತನ್ ಪಾರೆಖ್ ಬಂಧನವಾಗಲಿದೆ ಎಂಬ ಗಾಳಿಸುದ್ದಿ ಹಬ್ಬಿದ್ದು, ಷೇರು ಬೆಲೆಗಳ ಭಾರೀ ಕುಸಿತಕ್ಕೆ ಕಾರಣವಾಯಿತು. ಸಂಜೆ ಸಿಬಿಐ ಅಧಿಕಾರಿಗಳು ಕೇತನ್ ಪಾರೆಖ್ನನ್ನು ಬಂಧಿಸಿದ್ದಾರೆ.</p>.<p>ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣದಲ್ಲಿ ಆದ್ಯತೆ</p><p>ಬೆಂಗಳೂರು, ಮಾರ್ಚ್ 30– ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವೃತ್ತಿಪರ ತರಗತಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ವಿಧಾನ ಪರಿಷತ್ನಲ್ಲಿ ಇಂದು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>