ಬೆಂಗಳೂರು, ಜುಲೈ 2– ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಾಳೆ ನಡೆಯಲಿರುವ ಚುನಾವಣೆಯನ್ನು ಬಹಿಷ್ಕರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಎಚ್ಚರಿಕೆ ನೀಡಿದ್ದರೂ ಚುನಾವಣೆಯನ್ನು ಬಹಿಷ್ಕರಿಸಲು ಪಕ್ಷದ ಕೆಲವು ನಾಯಕರು ನಿರ್ಧರಿಸಿದ್ದರಿಂದ ರಾಜ್ಯದಲ್ಲೂ ಜನತಾದಳ ವಿಭಜನೆಯಾಗುವುದು ಖಚಿತವಾಗಿದೆ.