ಈ ಉಕ್ಕು ಕಾರ್ಖಾನೆಯ ನಗರದಲ್ಲಿ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಜನರು ಸೇರಿದ್ದ ಸಭೆಯಲ್ಲಿ ಭಾಷಣ ಮಾಡಿದ ಅವರು, ಭಾರತ ಉಪಖಂಡದಲ್ಲಿ ಶಾಂತಿ ಸ್ಥಾಪನೆ ವಿಷಯದಲ್ಲಿ ಭಾರತಕ್ಕೆ ಅಷ್ಟು ಆಸಕ್ತಿ ಇಲ್ಲವೆಂಬ ಹಾಗೂ ಅದಕ್ಕೆ ಆತ್ಮ ಸಾಕ್ಷಿಯಾಗಿ ಪಾಕಿಸ್ತಾನದ ಜತೆ ಮೈತ್ರಿಯ ಅಭಿಲಾಷೆ ಇಲ್ಲವೆಂಬ ಪತ್ರಿಕಾ ವರದಿಗಳನ್ನು ಪ್ರಸ್ತಾಪಿಸಿ, ಪ್ರಧಾನಿ ಭಾರತದ ನಿಲುವನ್ನು ಪುನರುಚ್ಚರಿಸಿದರು.