ಬೆಂಗಳೂರು, ಫೆ. 25– ಬೇಸಿಗೆ ಹತ್ತಿರ ಬಂದಂತೆ ಬೆಂಗಳೂರಿನಲ್ಲಿ ಚಡಪಡಿಕೆ ಶುರುವಾಗುತ್ತದೆ. ತಿಪ್ಪಗೊಂಡನಹಳ್ಳಿ, ಹೆಸರಘಟ್ಟಗಳಲ್ಲಿ ನೀರಿನ ಪ್ರಮಾಣ ಕುಗ್ಗಿ ನಲ್ಲಿಗಳು ಸೊರ್ರನೆ ‘ಅಳಲಾರಂಭಿಸುತ್ತವೆ’: ನೀರಿಗಾಗಿ ಮನೆ ಮಂದಿಯೆಲ್ಲಾ ರಾತ್ರಿ ಪಾಳಿ ಮಾಡಿ ಸುಸ್ತಾಗಿ ಜನರ ಸಹನೆ ಆವಿಯಾಗುತ್ತದೆ. ಜಲಮಂಡಲಿಗೆ ಈ ನಾಲ್ಕು ತಿಂಗಳು ಶರಶಯ್ಯೆಯ ಮೇಲೆ ಮಲಗಿದಂತೆ. ಮಿನಿ ಜಲ ವಿವಾದಗಳು ಅಲ್ಲಲ್ಲಿ.