ಇಂದು ಬೆಳಿಗ್ಗೆಯೇ ಲೋಕಸಭೆ ಅಧಿ ವೇಶನಕ್ಕೆ ಹೋಗುವ ಮುನ್ನ ಸಂಯುಕ್ತ ರಂಗದ ಕೆಲವು ನಾಯಕರು, ರಾಜೀನಾಮೆ ನೀಡಿ ಸರ್ಕಾರ ಉಳಿಸುವಂತೆ ದೇವೇಗೌಡರಿಗೆ ಅರಿಕೆ ಮಾಡಿಕೊಂಡರು. ಆದರೆ, ಅದನ್ನು ಒಪ್ಪದ ದೇವೇಗೌಡರು ವಿಶ್ವಾಸ ಮತ ಯಾಚಿಸುವುದಾಗಿ ಲೋಕಸಭೆಗೆ ತೆರಳಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರನ್ನು ತೀವ್ರವಾಗಿ ಟೀಕಿಸಿದ ದೇವೇಗೌಡರು ಕೆಲ ಬಾರಿ ರೋಷದಿಂದ ಕೆಲವೊಮ್ಮೆ ಗದ್ಗದ ಕಂಠದಿಂದ ಮತ್ತೊಮ್ಮೆ ವಿಷಾದದಿಂದ ಮಾತನಾಡಿ ವಿಶ್ವಾಸಮತ ಯಾಚಿಸಿದರು.