ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ ಲಿಂಗಪ್ಪ ಅವರು ಜನತಾ ದಳದ ಅಭ್ಯರ್ಥಿ, ಚಲನಚಿತ್ರ ನಟ ಅಂಬರೀಷ್ ಅವರನ್ನು 9612 ಮತಗಳ ಭಾರಿ ಅಂತರದಿಂದ, ಚಿಕ್ಕನಾಯಕನ ಹಳ್ಳಿ ಕ್ಷೇತ್ರದಲ್ಲಿ ದಳದ ಬಂಡಾಯ ಸ್ಪರ್ಧಿ ಜೆ.ಸಿ. ಮಾಧುಸ್ವಾಮಿ ಅವರು ಅಧಿಕೃತ ಅಭ್ಯರ್ಥಿ ಸುರೇಶ ಬಾಬು ಅವರನ್ನು 4679 ಮತಗಳ ಅಂತರದಿಂದ ಸೋಲಿಸಿ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ.