ಬೆಂಗಳೂರು, ಆ. 1– ರಾಜ್ಯ ಸರ್ಕಾರವು ತಮಿಳುನಾಡು ಸರ್ಕಾರದ ಮುಖಾಂತರ ನರಹಂತಕ ವೀರಪ್ಪನ್ನ ಷರತ್ತುಗಳ ಸಂಬಂಧದಲ್ಲಿ ನಡೆಸಿರುವ ಪತ್ರ ವ್ಯವಹಾರ ಹಾಗೂ ಕಳುಹಿಸಿರುವ ಸಂದೇಶಗಳು ಸೇರಿದಂತೆ ಇತರೆ ವಿವರಗಳನ್ನು ವಿರೋಧ ಪಕ್ಷಗಳ ಗಮನಕ್ಕೆ ತಂದಿಲ್ಲ ಎಂಬ ವಿರೋಧ ಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಎಲ್ಲ ವಿವರಗಳನ್ನು ಮಂಗಳವಾರದಂದು ಸದನದ ಮುಂದಿಡುವುದಾಗಿ ಅರಣ್ಯ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಅವರು ಇಂದು ವಿಧಾನಸಭೆಯಲ್ಲಿ ಭರವಸೆ ನೀಡಿದರು.