ಲಖನೌ, ಫೆ. 25 (ಯುಎನ್ಐ)– ವಿಧಾನಸಭೆಯಲ್ಲಿ ನಾಳೆ ಬಹುಮತ ಸಾಬೀತುಪಡಿಸಲು ಉತ್ತರಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಹತಾಶರಾಗಿ ಶಾಸಕರ ಖರೀದಿ ಹಾಗೂ ಅಪಹರಣದಲ್ಲಿ ತೊಡಗಿದ್ದಾರೆ ಎಂದು ಲೋಕತಾಂತ್ರಿಕ ಕಾಂಗ್ರೆಸ್ ನಾಯಕ ಜಗದಾಂಬಿಕಾ ಪಾಲ್ ಇಂದು ಇಲ್ಲಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ‘ಅಗತ್ಯವಿರುವ ಬಹುಮತ ಸಂಪಾದಿಸಲು ಭಾರತೀಯ ಜನತಾ ಪಕ್ಷವು ಎಲ್ಲಾ ಅವ್ಯವಹಾರಗಳಲ್ಲೂ ತೊಡಗಿದೆ’ ಎಂದರು.