ನವದೆಹಲಿ, ಆ. 3– ತಾತ್ವಿಕ ಭಿನ್ನಾಭಿಪ್ರಾಯ ಇಲ್ಲದೆ ಕೇವಲ ವ್ಯಕ್ತಿ ನಿಷ್ಠೆಗಾಗಿ ಪಕ್ಷವನ್ನು ತೊರೆದಿರುವ ರಾಷ್ಟ್ರೀಯ ಜನತಾದಳದ ಸಂಸತ್ ಸದಸ್ಯರು, ಶಾಸಕರು ಮತ್ತು ಕಾರ್ಯಕರ್ತರಿಗೆ ಮತ್ತೆ ದಳಕ್ಕೆ ವಾಪಸ್ ಬರಲು ಮುಕ್ತ ಆಮಂತ್ರಣ ಮತ್ತು ದಳವನ್ನು ಒಂಬತ್ತು ವರ್ಷಗಳ ಹಿಂದೆ ಸ್ಥಾಪಿಸಿದ ದಿನಗಳಲ್ಲಿದ್ದ ಉತ್ಸಾಹವನ್ನು ತುಂಬುವ ಮೂಲಕ ದಳವನ್ನು ಪುನಶ್ಚೇತನಗೊಳಿಸಲು ಎರಡು ದಿನಗಳ ಕಾಲ ನಡೆದ ಜನತಾದಳದ ರಾಷ್ಟ್ರೀಯ ಮಂಡಳಿ ಮತ್ತು ಪ್ರತಿನಿಧಿಗಳ ಸಮಾವೇಶ ಇಂದು ನಿರ್ಣಯ ಮಾಡಿತು.