ಸರ್ಚಾರ್ಜ್ ರದ್ದು; ರೈತರಿಗೆ ರಿಯಾಯ್ತಿ;ಸಿಮೆಂಟ್, ಸಿಗರೇಟು ತುಟ್ಟಿ
ಬೆಂಗಳೂರು, ಮಾರ್ಚ್ 18– ರೈತರಿಗೆ ಹೆಚ್ಚು ರಿಯಾಯ್ತಿಗಳನ್ನು ಪ್ರಕಟಿಸಿ, ಎಲ್ಲ ವಸ್ತುಗಳ ಮೇಲಿನ ಸರ್ಚಾರ್ಜನ್ನು ರದ್ದುಗೊಳಿಸುವ ಮೂಲಕ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯ ವಿಧಾನಸಭೆಯಲ್ಲಿ ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗದ ಮುಂಗಡ ಪತ್ರವನ್ನು ಮಂಡಿಸಿದರು.