ಪಾಟ್ನಾ, ಜುಲೈ 30 (ಪಿಟಿಐ, ಯುಎನ್ಎ)– ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರನ್ನು 950 ಕೋಟಿ ರೂಪಾಯಿಯ ಮೇವು ಹಗರಣದಲ್ಲಿ ಇಂದು ಆಗಸ್ಟ್ 13 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಸಿಬಿಐ ವಿಶೇಷ ನ್ಯಾಯಾಲಯದ ಶರಣಾದ ಲಾಲೂ ಯಾದವ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿದ ನ್ಯಾಯಾಧೀಶ ಎಸ್.ಕೆ. ಲಾಲ್ ಅವರು, ಲಾಲೂ ಅವರನ್ನು ಸೂಕ್ತ ರಕ್ಷಣೆಯಲ್ಲಿರಿಸು ವಂತೆ ಆದೇಶಿಸಿದರು.