ಕೇಂದ್ರ ಆಹಾರ ಸಚಿವ ಬೂಟಾಸಿಂಗ್ ಅವರ ಪುತ್ರ, ವಿವಿಧ ರಾಜಕಾರಣಿ, ಅಧಿಕಾರಿಗಳು, ಕೇಂದ್ರ ಮತ್ತು ರಾಜ್ಯಗಳ ತೈಲ ಆಯ್ಕೆ ಮಂಡಲಿಗಳ ಅಧ್ಯಕ್ಷರು ಹಾಗೂ ಸದಸ್ಯರ ರಕ್ತಸಂಬಂಧಿಗಳಿಗೆ ಪೆಟ್ರೋಲಿಯಂ ಖಾತೆ ಸಚಿವ ಕ್ಯಾಪ್ಟನ್ ಸತೀಶ್ ಶರ್ಮಾ ಅವರು ತಮ್ಮ ವಿವೇಚನೆ ಕೋಟಾ ಮೂಲಕ ಅಡುಗೆ ಅನಿಲ ಮತ್ತು ಪೆಟ್ರೋಲ್ ವಿತರಣೆ ಹಕ್ಕು ನೀಡಿದ್ದಾರೆ ಎಂದು ವರದಿಯಲ್ಲಿ ಪ್ರಸ್ತಾಪವಾಗಿತ್ತು.