ಬೆಂಗಳೂರು, ಮೇ 4– ಭಾರೀ ಪ್ರಮಾಣದಲ್ಲಿ ಕಾನೂನುಬದ್ಧವಾಗಿ ಹಾಗೂ ಕಾನೂನುಬಾಹಿರವಾಗಿ ರಾಜ್ಯದೊಳಕ್ಕೆ ಪ್ರವೇಶಿಸುತ್ತಿರುವ ‘ಚೀನಾ ರೇಷ್ಮೆ’ಯಿಂದ ರಾಜ್ಯ ರೇಷ್ಮೆ ಉದ್ಯಮಕ್ಕೆ ಆಗುತ್ತಿರುವ ಆಘಾತವನ್ನು ತಪ್ಪಿಸಲು, ಸದ್ಯ ಇರುವ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ರಾಜ್ಯ ಸರ್ಕಾರ ಆಲೋಚಿಸುತ್ತಿದೆ ಎಂದು ಸಚಿವ ನಾಗರಾಜಯ್ಯ ತಿಳಿಸಿದರು.