‘ಸಾರ್ವಜನಿಕ ಪಡಿತರ ವ್ಯವಸ್ಥೆ ಬಡತನ ರೇಖೆಗಿಂತ ಕೆಳಗಿರುವವರ ಅನುಕೂಲಕ್ಕಾಗಿ ರೂಪಿಸಿದ್ದು’ ಎಂದ ಅವರು, ‘ಆರ್ಥಿಕವಾಗಿ ಸಬಲರಾಗಿರುವವರಿಗೆ ಪಡಿತರ ಸೌಲಭ್ಯವನ್ನು ಗಾಂಧೀ ಜಯಂತಿಯ ದಿನವಾದ ಅ.2ರಿಂದ ರದ್ದುಪಡಿಸಬೇಕಾಗಿತ್ತು. ಉತ್ತರಪ್ರದೇಶ ಹಾಗೂ ಜಮ್ಮು– ಕಾಶ್ಮೀರ ಚುನಾವಣೆಯ ಕಾರಣ ಜಾರಿ ದಿನವನ್ನು ನವೆಂಬರ್ಗೆ ಮುಂದೂಡಲಾಗಿದೆ’ ಎಂದು ಹೇಳಿದರು.