ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ; 20.10.2021

Last Updated 20 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ವಿದ್ಯುತ್‌ ಸಮಸ್ಯೆ ನಿವಾರಣೆಗೆ ಮೂರು ಹೊಸ ಯೋಜನೆ

ಹುಬ್ಬಳ್ಳಿ, ಅ. 20– ರಾಜ್ಯದಲ್ಲಿನ ‍ವಿದ್ಯುತ್‌ ಸಮಸ್ಯೆ ನಿವಾರಣೆಗೆ ಕೊಡಸಹಳ್ಳಿ, ಗೇರುಸೊಪ್ಪ ಮತ್ತು ಕಾಗ್ರಾದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಮೂರು ಹೊಸ ಜಲವಿದ್ಯುತ್‌ ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಿರುವುದಾಗಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಘೋಷಿಸಿದ್ದಾರೆ.

ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶಿವರಾಜ್‌ ಉತ್ತಮ ನಟ, ಪ್ರೇಮಾ ಉತ್ತಮ ನಟಿ

ಮೈಸೂರು, ಅ. 20 (ಯುಎನ್‌ಐ)– ರಾಜ್ಯ ಸರ್ಕಾರ ಕೊಡಮಾಡುವ 1995– 96ನೇ ಸಾಲಿನ ಉತ್ತಮ ನಟ ಮತ್ತು ಉತ್ತಮ ನಟಿ ಪ್ರಶಸ್ತಿಗೆ ‘ಓಂ’ ಚಿತ್ರದಲ್ಲಿನ ನಟನೆಗಾಗಿ ಕ್ರಮವಾಗಿ ಶಿವರಾಜ್‌ ಕುಮಾರ್‌ ಹಾಗೂ ಪ್ರೇಮಾ ಆಯ್ಕೆಯಾಗಿದ್ದಾರೆ.

ಉತ್ತಮ ಪೋಷಕ ನಟ ಪ್ರಶಸ್ತಿಗೆ ಗಿರೀಶ್‌ ಕಾರ್ನಾಡ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಾರ್ತಾ ಸಚಿವ ಎಂ.ಸಿ.ನಾಣಯ್ಯ ಮಡಿಕೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ದೊರೆ ಮತ್ತು ಭಗವಾನ್‌ ಅವರು ಉತ್ತಮ ನಿರ್ದೇಶಕ ಹಾಗೂ ಆರ್‌.ಲಕ್ಷ್ಮಣ ಅವರು ಉತ್ತಮ ನಿರ್ಮಾಪಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT