ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಬುಧವಾರ 30–4–1997

Last Updated 30 ಏಪ್ರಿಲ್ 2022, 0:55 IST
ಅಕ್ಷರ ಗಾತ್ರ

ರಂಗ ಸರ್ಕಾರ ಸೇರಲು ಟಿಎಂಸಿ ನಿರ್ಧಾರ

ಚೆನ್ನೈ, ಏ. 29 (ಯುಎನ್‌ಐ, ಪಿಟಿಐ)– ಕೇಂದ್ರ ಸಂಯುಕ್ತರಂಗ ಸರ್ಕಾರವನ್ನು ಸೇರಲು ತಮಿಳು ಮಾನಿಲ ಕಾಂಗ್ರೆಸ್‌ (ಟಿಎಂಟಿ) ನಿರ್ಧರಿಸಿದೆ. ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಜಿ.ಕೆ. ಮೂಪನಾರ್ ಅವರು ಇಂದು ಇಲ್ಲಿ ಈ ವಿಷಯವನ್ನು ಪ್ರಕಟಿಸಿದರು.

ಭಾನುವಾರ ನಡೆದ ಟಿಎಂಸಿ ಕಾರ್ಯಕಾರಿ ಸಭೆಯಲ್ಲಿ ಸಂಯುಕ್ತ ರಂಗ ಸರ್ಕಾರವನ್ನು ಸೇರುವ ಬಗ್ಗೆ ನಿರ್ಧರಿಸುವ ಜವಾಬ್ದಾರಿಯನ್ನು ಮೂಪನಾರ್‌ ಅವರಿಗೆ ನೀಡಲಾಗಿತ್ತು. ಸಂಯುಕ್ತ ರಂಗ ಸರ್ಕಾರವನ್ನು ಸೇರುವುದಕ್ಕೆ ಕಾರ್ಯಕಾರಿ ಸಮಿತಿಯ ಬಹುತೇಕ ಸದಸ್ಯರು ಭಾರಿ ವಿರೋಧ ವ್ಯಕ್ತ
ಪಡಿಸಿದರು ಎಂದೂ ಹೇಳಲಾಗಿತ್ತು.‌

ನಕಲಿ ಛಾಪಾ ಕಾಗದ ಮಾರಾಟ ರಾಜ್ಯವ್ಯಾಪಿ ಜಾಲ ಶಂಕೆ

ಬೆಂಗಳೂರು, ಏ. 29– ಕೊಡಗು ಜಿಲ್ಲೆಯ ಮಡಿಕೇರಿ ವಕೀಲರ ಸಹಕಾರ ಸಂಘದಲ್ಲಿ ಈಗ ಪತ್ತೆಯಾಗಿರುವ ನಕಲಿ ಛಾಪಾ ಕಾಗದಗಳ ಮಾರಾಟ ಜಾಲ ರಾಜ್ಯವ್ಯಾಪಿ ಹರಡಿರುವ ಪ್ರಬಲವಾದ ಶಂಕೆ ಪೊಲೀಸ್ ವಲಯದಲ್ಲಿ ವ್ಯಕ್ತವಾಗಿದೆ.

ಕಳೆದ ಎರಡು ವರ್ಷಗಳಿಂದ ನಡೆದಿದೆ ಎನ್ನಲಾದ ಈ ಹಗರಣದಲ್ಲಿ ಸರ್ಕಾರದ ಬಿಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ವಂಚಿಸಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT