ನವದೆಹಲಿ, ಏ. 30– ಸರ್ಕಾರ ಪಾರದರ್ಶಕವಾಗಿರುತ್ತದೆ; ಯಾವುದೇ ಸಂದರ್ಭದಲ್ಲೂ ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ ಮತ್ತು ರಾಜಕೀಯ ದ್ವೇಷ ಸಾಧನೆ ಮಾಡುವುದಿಲ್ಲ ಎಂದು ಪ್ರಧಾನಿ ಇಂದರ್ ಕುಮಾರ್ ಗುಜ್ರಾಲ್ ಅವರು ಸರ್ಕಾರದ ನೀತಿಯನ್ನು ಇಂದು ಲೋಕಸಭೆಯಲ್ಲಿ ಪುನರುಚ್ಚರಿಸಿದರು.
ಬಿಹಾರದ ಪಶುಸಂಗೋಪನಾ ಇಲಾಖೆಯಲ್ಲಿ ನಡೆದಿರುವ ₹ 950 ಕೋಟಿ ಮೇವು ಹಗರಣದ ಸಂಬಂಧ ಇಂದು ಲೋಕಸಭೆಯಲ್ಲಿ ನಡೆದ ಬಿಸಿಬಿಸಿ ಚರ್ಚೆಯ ಕೊನೆಯಲ್ಲಿ ಸಂಕ್ಷಿಪ್ತವಾಗಿ ಉತ್ತರಿಸಿದ ಅವರು ಏನನ್ನೂ ಹೇಳಲು ಬಯಸಲಿಲ್ಲ.