ಬೆಂಗಳೂರು, ಜುಲೈ 15– ಒಂಬತ್ತು ಮಂದಿ ಒತ್ತೆಯಾಳುಗಳ ಬಗ್ಗೆ ಕಾಡುಗಳ್ಳ ವೀರಪ್ಪನ್ನಿಂದ ಇನ್ನೂ ಯಾವುದೇ ಸಂದೇಶ ಬಂದಿಲ್ಲ ಎಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ತಿಳಿಸಿದರು.
ಒತ್ತೆಯಾಳುಗಳು ಎಲ್ಲಿದ್ದಾರೆ ಗೊತ್ತಿಲ್ಲ. ಆದರೆ, ಒಂಬತ್ತು ಮಂದಿಯೂ ಸುರಕ್ಷತೆಯಿಂದ ಇದ್ದಾರೆ ಎಂದು ತಿಳಿಸಲಾಗಿದೆ ಎಂದ ಅವರು, ಈ ಮಾಹಿತಿಯ ಮೂಲವನ್ನು ತಿಳಿಸಲು ಬಯಸಲಿಲ್ಲ.
ತಮಿಳುನಾಡು ಸರ್ಕಾರದೊಂದಿಗೆ ಈ ವಿಚಾರದಲ್ಲಿ ಸತತವಾಗಿ ಸಂಪರ್ಕವನ್ನು ಇಟ್ಟುಕೊಂಡಿದ್ದು, ‘ಈಗ ವೀರಪ್ಪನ್ ಪ್ರತಿಕ್ರಿಯಿಸಬೇಕಾಗಿದೆ’ ಎಂದರು.