ತಮಿಳು ಮಾನಿಲ ಕಾಂಗ್ರೆಸ್ನ ಸಿ. ಜ್ಞಾನಶೇಖರನ್ ಮತ್ತು ದೇವೇಂದ್ರ ಕುಲವೆಳ್ಳಾಳರ್ ಸಮಾಜಂನ ಡಾ.ಕೆ. ಕೃಷ್ಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಕಾವೇರಿ ನೀರಾವರಿ ಪ್ರದೇಶದ ರೈತರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಕರ್ನಾಟಕ ನೀರು ಬಿಡುಗಡೆ ಮಾಡಬೇಕು. ಈ ವಿವಾದವನ್ನು ಎರಡು ರಾಷ್ಟ್ರಗಳ ಸಮಸ್ಯೆ ಎಂದು ಪರಿಗಣಿಸದೆ ಭಾರತದ ಎರಡು ರಾಜ್ಯಗಳ ಸಮಸ್ಯೆ ಎಂದು ಪರಿಗಣಿಸಬೇಕು ಎಂದರು.