ಬೆಂಗಳೂರು, ಜೂನ್ 8– ರಾಜ್ಯ ದಳ ಶಾಸಕಾಂಗ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನವನ್ನು ಶಮನಗೊಳಿಸಲೆಂದೇ ದೆಹಲಿಯಿಂದ ಬೆಂಗಳೂರಿಗೆ ದೌಡಾಯಿಸಿದ್ದ ಜನತಾ ದಳದ ಅಧ್ಯಕ್ಷರೂ ಆಗಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸಿ.ಎಂ. ಇಬ್ರಾಹಿಂ ಸಂಧಾನದಿಂದಾಗಿ, ವಿಧಾನಸಭೆ ಅಧ್ಯಕ್ಷರಿಗೆ ನೀಡಿದ್ದ ರಾಜೀನಾಮೆಯನ್ನು ಹಿಂತೆಗೆದು ಕೊಳ್ಳಲು ಬಂಡೆದಿದ್ದ ಶಾಸಕರು
ಸಮ್ಮತಿಸಿದ್ದಾರೆ.