ಕಳೆದ ಲೋಕಸಭೆ ಚುನಾವಣೆ, ಕೃಷ್ಣಾ, ಕಾವೇರಿ ವಿವಾದ ಕುರಿತು ತಾವು ಪದೇ ಪದೇ ದೆಹಲಿಗೆ ಪ್ರಯಾಣಿಸಬೇಕಾಗಿದ್ದರಿಂದ ಅಭಿವೃದ್ಧಿಯತ್ತ ಹೆಚ್ಚು ಗಮನ ಕೊಡಲು ತಮಗೆ ಸಾಧ್ಯವಾಗಲಿಲ್ಲ ಎಂಬುದನ್ನು ಒಪ್ಪಿಕೊಂಡ ಅವರು, ಎಲ್ಲ ಸಚಿವರು ಹೋಬಳಿ ಮಟ್ಟದಲ್ಲಿನ ಜನರನ್ನು ಸಂಪರ್ಕಿಸಿ ಅಭಿವೃದ್ಧಿ ಕಾರ್ಯಕ್ರಮಗಳ ಆದಿಯತ್ತ ಹೆಚ್ಚು ಲಕ್ಷ್ಯ ನೀಡುವಂತೆ ತಾವು ಎಲ್ಲ ಸಚಿವರಿಗೆ ಹೆಚ್ಚಿನ ಕೆಲಸ ಮತ್ತು ಜವಾಬ್ದಾರಿ ಹೊರಿಸುವುದಾಗಿ ಹೇಳಿದರು.