ಕಾರವಾರ, ಏ. 22– ಭಟ್ಕಳದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಮುಕ್ತ ಮತ್ತು ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳಲು ಹಾಗೂ ಭಟ್ಕಳ ನಗರ, ಗ್ರಾಮೀಣ ಪ್ರದೇಶ ಮತ್ತು ಶಿರಸಿಯಲ್ಲಿ ಯಾವುದೇ ದುಷ್ಕೃತ್ಯ ತಡೆಗಟ್ಟಲು ಹಲವಾರು ಉಗ್ರ ಕ್ರಮ ತೆಗೆದುಕೊಳ್ಳ ಲಾಗಿದೆ. ಮತದಾನದ ನಂತರ ಭಟ್ಕಳ ಪ್ರವೇಶಿಸುವವರು ಮತ್ತು ಹೊರಹೋಗು
ವವರು ಕಡ್ಡಾಯವಾಗಿ ಗುರುತಿನ ಚೀಟಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ.