ಹವಾಲ ವಿಶೇಷ ನ್ಯಾಯಾಧೀಶ ವಿ.ಬಿ.ಗುಪ್ತಾ ಅವರು ಈ ತಿಂಗಳ 7ರಂದು ತೀರ್ಪನ್ನು ನಾಳೆಗೆ ಕಾಯ್ದಿಟ್ಟಿದ್ದರು. ಎನ್.ಡಿ.ತಿವಾರಿ, ಜಾಫರ್ ಷರೀಫ್, ಆರ್.ಕೆ.ಧವನ್, ಶರದ್ ಯಾದವ್, ಹರ್ಮೋಹನ್ ಧವನ್, ನಟವರ್ ಸಿಂಗ್, ಡಿ.ಬಿ.ಢಾಕ್ಣೆ ಮತ್ತು ರಂಜಿತ್ ಸಿಂಗ್ ಅವರ ವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಗಳನ್ನು ಅವಗಾಹನೆಗೆ ತೆಗೆದುಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಅವರು ನಾಳೆ ತಮ್ಮ ನಿರ್ಧಾರವನ್ನು ಪ್ರಕಟಿಸುವರು.