ಬಳಸದ ಶಾಲಾ ಕಾಲೇಜು ಭೂಮಿ ಮರುಸ್ವಾಧೀನ- ಜಿಲ್ಲಾಧಿಕಾರಿಗಳಿಗೆ ಆದೇಶ
ಬೆಂಗಳೂರು, ಮಾರ್ಚ್ 12– ಶಾಲೆ, ಕಾಲೇಜು ಮುಂತಾದ ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರಿ ಭೂಮಿಯನ್ನು ಹಲವಾರು ವರ್ಷಗಳ ಹಿಂದೆಯೇ ಮಂಜೂರು ಮಾಡಿಸಿಕೊಂಡೂ ಉದ್ದೇಶಿತ ಕಾರ್ಯಕ್ಕೆ ಬಳಕೆ ಮಾಡದೇ ಇರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಅದನ್ನು ಮರುಸ್ವಾಧೀನ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಎಲ್.ಜಾಲಪ್ಪ ಇಂದು ಇಲ್ಲಿ ತಿಳಿಸಿದರು.