ಬೆಂಗಳೂರು, ಏ. 6– ಕೇಂದ್ರ ಸಚಿವ ಎಂ.ವಿ.ಚಂದ್ರಶೇಖರ ಮೂರ್ತಿ, ಹಿರಿಯ ಮುಖಂಡರುಗಳಾದ ಎಸ್.ಮಲ್ಲಿಕಾರ್ಜುನಯ್ಯ, ಬಿ.ಶಂಕರಾನಂದ, ಜನಾರ್ದನ ಪೂಜಾರಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಎಸ್.ಬಂಗಾರಪ್ಪ, ಆಸ್ಕರ್ ಫರ್ನಾಂಡಿಸ್ ಹಾಗೂ ರಾಜ್ಯದ ನಾಲ್ವರು ಸಚಿವರೂ ಸೇರಿದಂತೆ ಒಟ್ಟು 978 ಅಭ್ಯರ್ಥಿಗಳು ಲೋಕಸಭೆಯ 28 ಸ್ಥಾನಗಳ ಸ್ಪರ್ಧಿಗಳಾಗಿ ಕಣದಲ್ಲಿ ಉಳಿದಿದ್ದಾರೆ.