ಬಂಡೆದ್ದ ಮಾಜಿ ಸಚಿವರಿಗೆ ಕಾಂಗೈನಿಂದ ಅರ್ಧಚಂದ್ರ
ನವದೆಹಲಿ, ಏ. 8 (ಪಿಟಿಐ, ಯುಎನ್ಐ)– ಪಕ್ಷದಲ್ಲಿ ಭುಗಿಲೆದ್ದಿರುವ ಬಂಡಾಯವನ್ನು ಹತ್ತಿಕ್ಕಲು ಕಾಂಗ್ರೆಸ್ (ಐ) ಪಕ್ಷ ಮಾಜಿ ಕೇಂದ್ರ ಸಚಿವರಾದ ಮಾಧವ ರಾವ್ ಸಿಂಧಿಯಾ, ಎಂ.ಅರುಣಾಚಲಂ ಮತ್ತು ಪಿ.ಚಿದಂಬರಂ ಸೇರಿದಂತೆ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಕಣಕ್ಕಿಳಿದಿರುವ 29 ಮಂದಿ ಬಂಡಾಯ ನಾಯಕರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿದೆ. ತಮಿಳುನಾಡಿನಲ್ಲಿ ಹೊಸ ಪಕ್ಷ ರಚಿಸಿದ ಜಿ.ಕೆ.ಮೂಪನಾರ್ ಅವರನ್ನು ಅಮಾನತುಗೊಳಿಸಲಾಗಿದೆ.