ಕಾಂಗ್ರೆಸ್ ಪಾಲ್ಗೊಳ್ಳುವ ಸರ್ಕಾರದಲ್ಲಿ ಪ್ರಧಾನಿಯಾಗುವುದು ಸಾಧ್ಯವೇ ಇಲ್ಲವೆಂದು ಇಂದು ನಡೆದ ಸಿಪಿಎಂ ಕೇಂದ್ರ ಸಮಿತಿಯ ಸಭೆ ಮತ್ತೆ ತೀರ್ಮಾನ ಪ್ರಕಟಿಸಿದ್ದರಿಂದ, ತೃತೀಯ ರಂಗದ ಅಭ್ಯರ್ಥಿಯಾಗಿ ಪ್ರಧಾನಿ ಹುದ್ದೆಗೆ ನಿನ್ನೆ ಆಯ್ಕೆಯಾಗಿದ್ದ ಜ್ಯೋತಿ ಬಸು ಅವರ ಆಯ್ಕೆ ಸಾಧ್ಯವಾಗಲಿಲ್ಲ. ಜನತಾದಳದ ಮುಖಂಡ, ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರೂ ಪ್ರಧಾನಿಯಾಗಲು ಒಪ್ಪದಿದ್ದ ಕಾರಣ, ದೇವೇಗೌಡ ಅವರನ್ನು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.