ಸುಖ್ರಾಂ ಹಗರಣ: ಸದನ ಸಮಿತಿಗೆ ಸಿಪಿಎಂ, ಬಿಜೆಪಿ ಆಗ್ರಹ
ನವದೆಹಲಿ, ಆಗಸ್ಟ್ 29 (ಪಿಟಿಐ, ಯುಎನ್ಐ)– ಮಾಜಿ ಸಂಪರ್ಕ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸುಖ್ರಾಂ ವಿರುದ್ಧ ಇರುವ ಗಂಭೀರ ಭ್ರಷ್ಟಾಚಾರ ಆರೋಪಗಳ ತನಿಖೆಗೆ ಜಂಟಿ ಸದನ ಸಮಿತಿ ರಚಿಸಬೇಕು ಎಂದು ಸಿಪಿಐ–ಎಂ ಹಾಗೂ ಭಾರತೀಯ ಜನತಾ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಇಂದು ಆಗ್ರಹಿಸಿದರು.