‘ಉಂಡ ಮನೆಗೆ ಎರಡು ಬಗೆದವರು ಶಾಸಕ ಸ್ಥಾನ ತ್ಯಜಿಸಲಿ’
ಬೆಂಗಳೂರು, ಸೆ. 1– ಜನತಾ ದಳ ತೊರೆದ ಆರು ಮಂದಿ ವಿಧಾನ ಪರಿಷತ್ತಿನ ಸದಸ್ಯರನ್ನು ತರಾಟೆಗೆ ತೆಗೆದುಕೊಂಡು ಅವರ ರಾಜೀನಾಮೆಗೆ ಸೂಚಿಸಿದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ‘ಈ ರೀತಿ ರಾಜಕೀಯ ವ್ಯಭಿಚಾರಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಪ್ರೋತ್ಸಾಹ ನೀಡಬಾರದಿತ್ತು’ ಎಂದು ಕಟುವಾಗಿ ಟೀಕಿಸಿದರು.